ಎಬಿವಿಪಿ ಕಾರ್ಯಕರ್ತರು ಹಾಗೂ ನಾರಿನಾಳ ಗ್ರಾಮದ ವಿದ್ಯಾರ್ಥಿಗಳಿಂದ ಸರಿಯಾಗಿ ಸಮಯಕ್ಕೆ ಬಸ್ ಬಾರದ ಕಾರಣಕ್ಕೆ ತಾವರಗೇರಾ ಬಸ್‌ ನಿಲ್ದಾಣದಲ್ಲಿಂದು ಧರಣಿ.

Spread the love

ಎಬಿವಿಪಿ ಕಾರ್ಯಕರ್ತರು ಹಾಗೂ ನಾರಿನಾಳ ಗ್ರಾಮದ ವಿದ್ಯಾರ್ಥಿಗಳಿಂದ ಸರಿಯಾಗಿ ಸಮಯಕ್ಕೆ ಬಸ್ ಬಾರದ ಕಾರಣಕ್ಕೆ ತಾವರಗೇರಾ ಬಸ್ನಿಲ್ದಾಣದಲ್ಲಿ ಧರಣಿ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ವ್ಯಾಪ್ತಿಯಲ್ಲಿ ಬರುವ ಹಲವು ಗ್ರಾಮಗಳಲ್ಲಿ ಸರಿಯಾಗಿ ಸಮಯಕ್ಕೆ ಬಾರದ  ಸರ್ಕಾರಿ ಬಸ್. ಎಬಿವಿಪಿ ಕಾರ್ಯಕರ್ತರು ಹಾಗೂ  ನಾರಿನಾಳ, ಮ್ಯಾದರಾಡೋಕ್ಕಿ ಗ್ರಾಮದ ವಿದ್ಯಾರ್ಥಿಗಳಿಂದ ತಾವರಗೇರಾ ಪಟ್ಟಣದ ಬಸ್ ನಿಲ್ದಾಣದಲ್ಲಿ ಧರಣಿ ಹಮ್ಮಿಕೊಳ್ಳಲಾಯಿತು. ಸಂಚಾರ ಮಾಡುವ ಬಸ್ಸು ಸರಿಯಾಗಿ ಸಮಯ ಪಾಲನೆ ಮಾಡದೇ ಮತ್ತು ವಿದ್ಯಾರ್ಥಿಗಳನ್ನು ಕರೆದುಕೊಂಡು ಬರುವುದಿಲ್ಲ ಆದ್ದರಿಂದ ಶಾಲಾ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆ ಉಂಟು ಮಾಡಿದೆ ಅದಕ್ಕೆ ಇವತ್ತಿನ ದಿವಸ ಎಲ್ಲಾ ವಿದ್ಯಾರ್ಥಿಗಳು ಮತ್ತು ನಾರಿನಾಳ ಹಿರಿಯರು ಹಾಗೂ ಎಬಿವಿಪಿ ಸಂಘದ ಕಾರ್ಯಕರ್ತರು ಎಲ್ಲರೂ ಸೇರಿ ತಾವರಗೇರಾದ ಪಟ್ಟಣದ ಕಂಟ್ರೋಲ್ ಮ್ಯಾನೇಜರ್ ಅವರ ಹತ್ತಿರ ಭೇಟಿ ನೀಡಿ ಪ್ರತಿಭಟನೆ ಮಾಡಿದ್ದಾರೆ. ಕಂಟ್ರೋಲ್ ಮ್ಯಾನೇಜರ ಅವರು ಮುಂದಿನ ಸಲ ಈ ತರಹ ಆಗುವುದಿಲ್ಲ ಎಂದು ಆಶ್ವಾಸನೆ ನೀಡಿದ್ದಾರೆ. ಮತ್ತೆ ಈ ತರಹ ತೊಂದರೆ ಕಂಡುಬದಲ್ಲಿ ತಾವರಗೇರಾ ಎಬಿವಿಪಿ ಸಂಘದ ಎಲ್ಲಾ ವಿದ್ಯಾರ್ಥಿಗಳು ಸೇರಿ ದೊಡ್ಡದಾಗಿ ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಎಬಿವಿಪಿ ನಗರ ಕಾರ್ಯದರ್ಶಿ ಸುರೇಶ ಗುಡುದುರು ಮತ್ತು ನಾಗರಾಜ, ಅಮರೇಶ್, ಹಾಗೂ ಗಣೇಶ್ ನಾರಿನಾಳ ಮತ್ತು ಗ್ರಾಮಸ್ಥರು ಪಾಲುಗೊಂಡಿದ್ದರು..

ವರದಿ :-  ಸಂಪಾದಕೀಯ

Leave a Reply

Your email address will not be published. Required fields are marked *