“ಚಕ್ಕ ಅನ್ನದೇ ‍ಅಕ್ಕ ಅನ್ನಿ” ಮನವಿ, ಭ್ರಷ್ಟರಿಗೆ ನಮ್ಮ ಹೇ.. ಸಾಲದಂತೆ..ಆಕ್ರೋಶ………

Spread the love

ಚಕ್ಕ ಅನ್ನದೇ ಅಕ್ಕ ಅನ್ನಿಮನವಿ, ಭ್ರಷ್ಟರಿಗೆ ನಮ್ಮ ಹೇ.. ಸಾಲದಂತೆ..ಆಕ್ರೋಶ………

ವಿಜಯನಗರ  ಜಿಲ್ಲೆ ಕೂಡ್ಲಿಗಿ,ಕೆಲ ಭ್ರಷ್ಟ ರಾಜಕಾರಣಿಗಳಿಗೆ ಹಾಗೂ ಭ್ರಷ್ಟ ಅಧಿಕಾರಿಗಳಿಗೆ ನಮ್ಮ ಹಣ ಮಾತ್ರವಲ್ಲ,ಮಂಗಳ ಮುಖಿಯರ ಹೇ..ನೂ ಸಾಲದಂತೆ ಎಂದು ಮಂಗಳ ಮುಖಿ ಆಕ್ರೋಶ ವ್ಯೆಕ್ತಪಡಿಸಿದ್ದಾರೆ. ವಿಜಯನಗರ  ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಅವರು,ತಮ್ಮ ವಿವಿದ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿ ಸರ್ಕಾರಕ್ಕೆ ಹಕ್ಕೊತ್ತಾಯಗಳನ್ನು ಮಾಡಿದ್ದಾರೆ.ನಮಗೆಚಕ್ಕ ಅನ್ನಬೇಡಿ ಬದಲಾಗಿ ಅಕ್ಕ ಅನ್ನಿಎಂದು ಗೌರವದಿಂದ ಕರೆಯಿರಿ, ಮಂಗಳ ಮುಖಿಯರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು. ತಮ್ಮ ಹಕ್ಕೋತ್ತಾಯಗಳನ್ನು ಈಡೇರಿಸುವಂತೆ ಒತ್ತಾಯಿಸಿದ್ದಾರೆ. ಹಾಗೂ ಸರ್ಕಾರದ ನಿರ್ಲಕ್ಷ್ಯತೆ ಖಂಡಿಸಿದರು.ಅವರು ಹೋರಾಟಗಾರ ಹೆಚ್.ವೀರಣ್ಣ ನೇತೃತ್ವದಲ್ಲಿ ಪ್ರತಿಭಟಿಸಿದರು,ನಂತರ ತಹಶಿಲ್ದಾರರಿಗೆ ತಮ್ಮ ಹಕ್ಕೋತ್ತಾಯ ಪತ್ರ ನೀಡಿದರು. ಸಂದರ್ಭದಲ್ಲಿ ಹೋರಾಟಗಾರರು ಮಾತನಾಡಿ, ಕೆಲವರಿಗೆ ಈವರೆಗೂ ಪಡಿತರ ಚೀಟಿ ಇಲ್ಲ, ಮನೆಯಿಲ್ಲ, ಅರ್ಜಿ ಹಾಕಿದಿವಿ ಕೊಡುತ್ತಿಲ್ಲ,ಸರಿಯಾದ ಕಾರಣ ಕೊಡುತ್ತಿಲ್ಲ ಎಂದು ದೂರಿದರು. ಬೇರೆಯವರ ಕಡೆಯಿಂದ ವಿಚಾರಿಸಿದರೆ ರೊಕ್ಕ ಕೊಟ್ರೆ ಮನೆ ಕೊಡೋದಾಗಿ ಹೇಳಿದ್ದಾರೆ ಕೆಲ ಆಫಿಸ್ ಗಳಲ್ಲಿ ಕೆಲಸ ಆಗಕಂದ್ರೆ ರೊಕ್ಕ ಕೊಡಲೇಬೇಕಂತೆ ಹಂಗಾದ್ರೆ ಕೆಲಸ ಸಲೀಸು..ಎಂದು ಮಂಗಳ ಮುಖಿಯರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡ್ಲಿಗಿ ಹೊಸಹಳ್ಳಿ,ಗುಡೇಕೋಟೆ ಹೋಬಳಿಗಳ ಆಫೀಸ್ ಗಳಲ್ಲಿ, ಕೂಡ್ಲಿಗಿ ತಾಲೂಕಿನ ಬಾಳಾ ಆಫೀಸ್ ಗಳಲ್ಲಿ ಇದೇ ಗೋಳಾಗಿದೆ ಎನ್ನುತ್ತಾರೆ ಮಂಗಳಮುಖಿಯರು,ಸರ್ಕಾರ ಕೋಡೋ ಮಾಸಾಶನ ಜೀವನಕ್ಕಾಗಲ್ಲ. ಎಲ್ಲಾ ದುಬಾರಿ ಮಾಡಿರೋ ಸರ್ಕಾರದವರು ನಮ್ಮ ಮಾಸಾಶನವನ್ನು ಐದು ಸಾವಿರಕ್ಕೆ ಹೆಚ್ಚಿಸಬೇಕು. ಈಗ ಬರೋ ರೊಕ್ಕದಾಗ ಜೀವನ ನಡೆಸಲಾಗಲ್ಲ,ನಮಗೆ ಕೆಲಸ ಯಾರೂ ಕೊಡಲ್ಲ ಬದಕೋದಾದರೂ ಹೆಂಗೆ..!?ಹೊಟ್ಟೆಗೇನು ತಿನ್ನಬೇಕು..!?.  ನೀವೇ ಹೇಳಿ ಎಂದು ಮಂಗಳ ಮುಖಿಯರು ಸರ್ಕಾರಕ್ಕೆ ಮೂಲಕ ಪ್ರೆಶ್ನಿಸಿದ್ದಾರೆ. ಹಕ್ಕೊತ್ತಾಯಗಳನ್ನು ಈಡೇರಿಸದಿದ್ದಲ್ಲಿ ಸರ್ಕಾರದ ವಿರುದ್ಧ ರಾಜ್ಯವ್ಯಾಪಿ ರಸ್ತೆಗಿಳಿದು ಹೋರಾಟ ನಡೆಸುಬುದು ಖಂಡಿತ,ಎಂದು  ಹೋರಾಟಗಾರರಾದ ಮಂಗಳ ಮುಖಿಯರು ಎಚ್ಚರಿಸಿದ್ದಾರೆ.

ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

Leave a Reply

Your email address will not be published. Required fields are marked *