ಕಂಪ್ಲಿಯ ಮೋಹನ್ ಕುಮಾರ್ ದಾನಪ್ಪನವರಿಗೆ “ಸುವರ್ಣ ಸಾಧನ ಶ್ರೀ ಪ್ರಶಸ್ತಿ” ಪ್ರಧಾನ!

Spread the love

ಕಂಪ್ಲಿಯ ಮೋಹನ್ ಕುಮಾರ್ ದಾನಪ್ಪನವರಿಗೆ “ಸುವರ್ಣ ಸಾಧನ ಶ್ರೀ ಪ್ರಶಸ್ತಿ” ಪ್ರಧಾನ!

ಬೆಂಗಳೂರು ಡಿ: 5 ರಂದು ಬೆಂಗಳೂರಿನ ಹೊವಾರ್ಡ್ ಜಾನ್ಸನ್ ಹೋಟೆಲ್ ನಲ್ಲಿ ಗಿರೀಶ್ ಕುಮಾರ್ ಚಾರಿಟೇಬಲ್ ಟ್ರಸ್ಟ್ (ರಿ)ರವರು ಹಮ್ಮಿಕೊಂಡ  ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲೆ ಕಂಪ್ಲಿಯ ನಿವಾಸಿ ಸಾಮಾಜಿಕ ಹೋರಾಟಗಾರ ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲರಾದ ಮೋಹನ್ ಕುಮಾರ್ ದಾನಪ್ಪನವರಿಗೆ ಅವರ ಸಾಮಾಜಿಕ ರಂಗದ ಅನುಪಮ ಸೇವೆಯನ್ನ ಗುರುತಿಸಿ “ಸುವರ್ಣ ಸಾಧನ ಶ್ರೀ ಪ್ರಶಸ್ತಿ” ಯನ್ನು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕೇಂದ್ರ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಇಲಾಖೆಯ ನೆಹರು ಯುವ ಕೇಂದ್ರ ಸಂಘಟನೆಯ ರಾಜ್ಯ ನಿರ್ದೇಶಕರಾದ ಎಂ.ಎನ್.ನಟರಾಜ್, ನೆಹರು ಯುವ ಕೇಂದ್ರದ ಬೆಂಗಳೂರು ನಗರ ಜಿಲ್ಲಾ ಯುವ ಸಮನ್ವಯಾಧಿಕಾರಿಗಳಾದ ವಿನಯ್ ಕುಮಾರ್, ದೇಹದಾರ್ಢ್ಯಗಾರ ಹಾಗೂ ತಮಿಳು ಚಿತ್ರರಂಗದ ನಟ ಅರ್ಜುನ ಪ್ರಶಸ್ತಿ ವಿಜೇತ ಮಿಸ್ಟರ್ ಇಂಡಿಯಾ ಕಾಮರಾಜ್,ಯೋಗ ಪಟು ಹಾಗೂ ಸಮಾಜ ಸೇವಕಿ ಮಮತಾ ದೇವರಾಜ್, ಸದರಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಗಿರೀಶ್ ಕುಮಾರ್ ನಾಯ್ಡು ಹಾಗೂ ಹಲವಾರು ಗಣ್ಯರು ಪ್ರಶಸ್ತಿ ಪ್ರಧಾನ ಮಾಡಿದರು!

ವರದಿ –  ಮಹೇಶ ಶರ್ಮಾ

Leave a Reply

Your email address will not be published. Required fields are marked *