ಕೂಡ್ಲಿಗಿ:ಬಿ.ಇ.ಓ ಹಾಗೂ ಸಿಬ್ಬಂದಿ ಅಮಾನತ್ತಿಗೆ ಆಗ್ರಹ-

Spread the love

ಕೂಡ್ಲಿಗಿ:ಬಿ.. ಹಾಗೂ ಸಿಬ್ಬಂದಿ ಅಮಾನತ್ತಿಗೆ ಆಗ್ರಹ

ವಿಜಯನಗರ ಜಿಲ್ಲೆ ಕೂಡ್ಲಿಗಿ,ಡಾ.ಬಿ.ಆರ್.ಅಂಬೇಡ್ಕರ್ ರವರ ಪರಿನಿರ್ವಹಣೆದಿನಾಚರಣೆ, ಆಚರಿಸದೇ ನಿರ್ಲಕ್ಷ್ಯ ಧೋರಣೆ ತೋರಿರುವ.ಹಾಗೂ ತಮ್ಮ ಅವಿವೇಕತನದ ಹೇಳಿಕೆಯಿಂದಿಗೆ ಸಮರ್ತಿಸಿಕೊಂಡಿರುವ,ಈ ಮೂಲಕ ಶಿಕ್ಷಣ ಇಲಾಖೆಯ ಘನತೆಗೆ ದಕ್ಕೆ ತಂದಿರುವ ಬಿ.ಇ.ಓ ಹಾಗೂ ಸಿಬ್ಬಂದಿಯನ್ನು.ಅಮಾನತ್ತು ಮಾಡಬೇಕೆಂದು ಕ.ರಾ.ದ.ಸಂ.ಸಮಿತಿ ಆಗ್ರಹಿಸಿದೆ, ಸಂಬಂಧಿಸಿದಂತೆ ಪದಾಧಿಕಾರಿಗಳು ತಹಶಿಲ್ದಾರರಿಗೆ ಪತ್ರವನ್ನು ನೀಡಿದ್ದಾರೆ.ಬಿ.ಇ.ಓ ಕಚೇರಿಯಲ್ಲಿ ಪರಿನಿರ್ವಹಣಾದಿನಾಚರಣೆ ಮಾಡದಿರುವ ಕುರಿತು,ವಿಚಾರಿಸಲಾಗಿ ಬಿಇಓ ಯುವರಾಜ ನಾಯ್ಕ,ಸಿಬ್ಬಂದಿ ರೇವಣಸಿದಪ್ಪ, ಗೋಪಾಲರು.ತಮಗೆ ದಿನಾಚರಣೆ ಕುರಿತು ತಿಳಿದಿಲ್ಲ ಎಂಬ ಉದ್ಧಟನತನದ ಮಾತನ್ನಾಡಿದ್ದು,ತಮ್ಮ ತಪ್ಪನ್ನ ಸಮರ್ಥಿಸಿಕೊಳ್ಳೋ ಮೂಲಕ ಉದ್ಧಟನ ದಿಂದ ವರ್ತಿಸಿದ್ದಾರೆಂದು ಕದಸಂಸಮಿತಿ ಆರೋಪಿಸಿದೆ.ಕಾರಣ   ಬಿಇಒ ಹಾಗೂ ಸಿಬ್ಬಂದಿ ವಿರುದ್ಧ ಸುಕ್ತ ಕಾನೂನು ಕ್ರಮ ಜರುಗಿಸುವಂತೆ,ಕ್ರಮಕ್ಕಾಗಿ ತಹಶಿಲ್ದಾರಾರಿಗೆ ಕದಸಂಸಮಿತಿ ಅಧ್ಯಕ್ಷರು ಹಾಗೂ ವಕೀಲರಾದ ಡಿ.ಹೆಚ್.ದುರುಗೇಶ ನೇತೃತ್ವದಲ್ಲಿ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

Leave a Reply

Your email address will not be published. Required fields are marked *