ಕುಂದಗೋಳ ತಾಲೂಕಿನ ಅಲ್ಲಾಪೂರ ಗ್ರಾಮಕ್ಕೆ  ನರೇಗಾ ತಾಂತ್ರಿಕ ‌‌‌‌‌ಸಹಾಯಕರಾದ ಶಿವಕುಮಾರ ಹಂಚಿನಮನಿ ಭೇಟಿ…..

Spread the love

ಕುಂದಗೋಳ ತಾಲೂಕಿನ ಅಲ್ಲಾಪೂರ ಗ್ರಾಮಕ್ಕೆ  ನರೇಗಾ ತಾಂತ್ರಿಕ ‌‌‌‌‌ಸಹಾಯಕರಾದ ಶಿವಕುಮಾರ ಹಂಚಿನಮನಿ ಭೇಟಿ…..

ಗ್ರಾಮದ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಬರುವ, ಕುರಿ ಶೇಡ್ ನಿರ್ಮಾಣ, ಧನ ತೊಟ್ಟಿ ನಿರ್ಮಾಣ, ಎರೆಹುಳು ತೊಟ್ಟಿಗಳನ್ನು ಮಾಡುವ ವಿಧಾನ ಮತ್ತು ಅನೂಕುಲತೇಯನ್ನು ವಿವರಣೆ ನೀಡುವ ಮೂಲಕ, ಗುಡೇನಕಟ್ಟಿ ಗ್ರಾಮ ಪಂಚಾಯತ್ ಮಟ್ಟದ ಅಲ್ಲಾಪೂರ ಗ್ರಾಮದಲ್ಲಿ ಆಯ್ಕೆಯಾದ  ಫಲಾನುಭವಿಗಳಿಗೆ, ಯಾವ ರೀತಿ ನಿರ್ಮಾಣ ಮಾಡಬೇಕು ಅದರ ಉಪಯೋಗಗಳ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲಿಕಾರ್ಜುನ ‌ರಡ್ಡೇರ  ಜೊತೆಗೂಡಿ ಫಲಾನುಭವಿಗಳಿಗೆ ಸಲಹೆ ಸೂಚನೆ ನೀಡಿದರು ಆದಷ್ಟು ಬೇಗನೆ ನಿರ್ಮಾಣ ಮಾಡಿಕೊಳ್ಳಲು ತಿಳಿಸಿದರು. ನಂತರ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯ ಮಲ್ಲಿಕಾರ್ಜುನ್ ರಡ್ಡೇರ. ಸರ್ಕಾರದಿಂದ ಬರುವ ಎಲ್ಲಾ ವೈಕ್ತಿಕ ಕಾಮಗಾರಿಗಳನ್ನು ಎಲ್ಲರೂ ದಯವಿಟ್ಟು ಮಾಡಿಕೊಳ್ಳಬೇಕಾಗಿ ವಿನಂತಿ ಮಾಡಿದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ  ಫಲಾನುಭವಿಗಳು ಉಪಸ್ಥಿತರಿದ್ದರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *