ಅಭಿಮಾನಿಗಳ ಅತಿರೇಕದ ಸಂಭ್ರಮ ಕಂಡು ಬೇಸರ ಹೊರಹಾಕಿದ ಸಲ್ಮಾನ್ ಖಾನ್…..

Spread the love

ಅಭಿಮಾನಿಗಳ ಅತಿರೇಕದ ಸಂಭ್ರಮ ಕಂಡು ಬೇಸರ ಹೊರಹಾಕಿದ ಸಲ್ಮಾನ್ ಖಾನ್…..

ಬಾಲಿವುಡ್ ನಟ ಸಲ್ಮಾನ್ ಖಾನ್, ಆಯುಷ್ ಶರ್ಮಾ ನಟನೆಯ ‘Antim: The Final Truth’ ಸಿನಿಮಾ ರಿಲೀಸ್ ಆಗಿದೆ. ಚಿತ್ರದ ರಿಲೀಸ್ ಕಂಡು ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ. ಥಿಯೇಟರ್ನಲ್ಲಿ ಪಟಾಕಿ ಸಿಡಿಸಿ, ಪೋಸ್ಟರ್ಗೆ ಹಾಲಿನ ಅಭಿಷೇಕ ಮಾಡಿದ್ದಾರೆ. ಇದರಿಂದ ಸಲ್ಮಾನ್ ಖಾನ್ ಬೇಸರ ವ್ಯಕ್ತಪಡಿಸಿದ್ದಾರೆ.

ಹೈಲೈಟ್ಸ್‌:

  • ನಟ ಸಲ್ಮಾನ್ ಖಾನ್, ಆಯುಷ್ ಶರ್ಮಾ ನಟನೆಯ ‘Antim: The Final Truth’
  • ಥಿಯೇಟರ್‌ ಒಳಗೆ ಪಟಾಕಿ ಸಿಡಿಸಿದ ಸಲ್ಮಾನ್ ಖಾನ್ ಅಭಿಮಾನಿಗಳು
  • ಸಲ್ಮಾನ್ ಖಾನ್ ಪೋಸ್ಟರ್‌ಗೆ ಹಾಲಿನ ಅಭಿಷೇಕ ಮಾಡಿದ ಫ್ಯಾನ್ಸ್
  • ಸಲ್ಮಾನ್ ಖಾನ್ ಅಭಿಮಾನಿಗಳ ಬಳಿ ಮನವಿ ಮಾಡಿದ್ದೇನು?

ನಟ ಸಲ್ಮಾನ್‌ ಖಾನ್‌ ಅವರ ‘Antim The Final Truth’ ಸಿನಿಮಾ ಪ್ರದರ್ಶನ ವೇಳೆ ಅವರ ಅಭಿಮಾನಿಗಳು ಚಿತ್ರಮಂದಿರದೊಳಗೆಯೇ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಕ್ಕೆ ಜನರಿಂದ ವಿರೋಧ ವ್ಯಕ್ತವಾಗಿದೆ. ಸ್ವತಃ ಸಲ್ಮಾನ್‌ಗೂ ಅಭಿಮಾನಿಗಳ ಈ ವರ್ತನೆ ಬೇಸರ ಮೂಡಿಸಿದ್ದು, ‘ಚಿತ್ರಮಂದಿರದೊಳಗೆ ದಯವಿಟ್ಟು ಪಟಾಕಿ ಸಿಡಿಸಬೇಡಿ’ ಎಂದು ಅವರು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಸಲ್ಮಾನ್ ಖಾನ್ ಮಾಡಿದ ಮನವಿ ಏನು? ( Salman Khan  ‘ನಿಮ್ಮ ಇಂಥ ವರ್ತನೆಯಿಂದ ದೊಡ್ಡ ಅಗ್ನಿ ದುರಂತ ಸಂಭವಿಸಿ ನಿಮ್ಮ ಮತ್ತು ಇತರರ ಜೀವಹಾನಿಯಾಗುವ ಸಾಧ್ಯತೆ ಇದೆ. ಸಿನಿಮಾವನ್ನು ಎಲ್ಲಾರೀತಿಯಲ್ಲೂಎಂಜಾಯ್‌ ಮಾಡಿಕೊಂಡು ನೋಡಿ. ಆದರೆ ಪಟಾಕಿ ಸಿಡಿಸಬೇಡಿ’ ಎಂದು ಅವರು ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಮಕ್ಕಳಿಗೆ ಹಾಲು ಕುಡಿಯಲು ಕೊಡಿ ಎಂದ ಸಲ್ಮಾನ್ ಖಾನ್ ಸಲ್ಮಾನ್ ಖಾನ್ ಪೋಸ್ಟರ್‌ಗೆ ಹಾಲಿನ ಅಭಿಷೇಕ ಕೂಡ ಮಾಡಲಾಗಿದೆ. ಈ ವಿಡಿಯೋವನ್ನು ಹಂಚಿಕೊಂಡ ಸಲ್ಮಾನ್ ಖಾನ್, ದಯವಿಟ್ಟು ಪೋಸ್ಟರ್‌ಗೆ ಹಾಲು ಹಾಕಬೇಡಿ, ಆ ಹಾಲನ್ನು ಮಕ್ಕಳಿಗೆ ಕುಡಿಯಲು ಕೊಡಿ ಎಂದು ಹೇಳಿದ್ದಾರೆ. “ಎಷ್ಟೋ ಜನರಿಗೆ ನೀರು ಸಿಗಲ್ಲ. ಅಂತಹದರಲ್ಲಿ ನೀವು ಇಲ್ಲಿ ಹಾಲು ವ್ಯರ್ಥ ಮಾಡುತ್ತಿದ್ದೀರಿ. ನಿಮಗೆ ಹಾಲು ಕೊಡಬೇಕು ಅಂತಿದ್ದರೆ ಹಾಲು ಸಿಗದ ಮಕ್ಕಳಿಗೆ ಹಾಲು ಕುಡಿಯಲು ಕೊಡಿ” ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.ತಂಗಿ ಮಗ ಆಯುಷ್ ಶರ್ಮಾ ಜೊತೆ ಸಲ್ಮಾನ್ ಖಾನ್ ಮೊದಲ ಸಿನಿಮಾ ಕಳೆದ ಶುಕ್ರವಾರ ‘Antim The Final Truth’ ಸಿನಿಮಾ ರಿಲೀಸ್ ಆಗಿತ್ತು. ಶುಕ್ರವಾರ 4.5 ಕೋಟಿ ರೂ, ಶನಿವಾರ 5.5 ಕೋಟಿ ರೂಪಾಯಿ ಬಾಕ್ಸ್ ಆಫೀಸ್‌ನಲ್ಲಿ ಕಲೆಕ್ಷನ್ ಆಗಿದೆ. ಸಲ್ಮಾನ್ ಖಾನ್ ಜೊತೆ ಆಯುಷ್ ಶರ್ಮಾ ಅವರು ಲೀಡ್ ಆಗಿ ನಟಿಸಿದ್ದರು. ಸಲ್ಮಾನ್ ಖಾನ್ ಜೊತೆಗೆ ಆಯುಷ್ ಶರ್ಮಾ ( Aayush Sharma ) ಅವರ ಮೊದಲ ಸಿನಿಮಾ ಇದು. ಸಲ್ಮಾನ್ ಖಾನ್ ಅವರ ತಂಗಿ ಅರ್ಪಿತಾ ಖಾನ್ ಅವರ ಪತಿ ಆಯುಷ್ ಶರ್ಮಾ. ಈಗಾಗಲೇ ಅವರು ಒಂದು ಸಿನಿಮಾ ಮಾಡಿದ್ದರು. ಸಲ್ಮಾನ್ ಖಾನ್ ಬ್ಯಾನರ್‌ನಡಿ ‘ಲವ್ ರಾತ್ರಿ’ ಸಿನಿಮಾ ತಯಾರಾಗಿತ್ತು. ಮಹೇಶ್ ಮಂಜ್ರೇಕರ್ ಈ ಚಿತ್ರದ ನಿರ್ದೇಶಕರು, ಮಹಿಮಾ ಮಕ್ವಾನಾ ಅವರು ನಾಯಕಿಯಾಗಿ ನಟಿಸಿದ್ದಾರೆ. ಸಲ್ಮಾನ್ ಖಾನ್ ಇಲ್ಲಿ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ಸಲ್ಮಾನ್ ಖಾನ್- ರಾಜಮೌಳಿ ಭೇಟಿಗೆ ಸಿಕ್ತು ಕಾರಣ; ಇದು ಸಿನಿಪ್ರಿಯರು ಥ್ರಿಲ್ ಆಗೋ ವಿಷಯ! ನಟ ಸಲ್ಮಾನ್ ಖಾನ್ ಅವರ ‘Antim: The Final Truth’ ಸಿನಿಮಾಕ್ಕೆ ಕನ್ನಡಿಗ ರವಿ ಬಸ್ರೂರು ಹಾಡುಗಳು, ಹಿನ್ನಲೆ ಸಂಗೀತ ನೀಡಿದ್ದಾರೆ. ಈ ಸಿನಿಮಾಕ್ಕೆ ಸ್ವತಃ ಸಲ್ಮಾನ್ ಖಾನ್ ಹಣ ಹೂಡಿದ್ದಾರೆ. ಸಿಖ್ ಪೊಲೀಸ್ ಆಫೀಸರ್, ಗ್ಯಾಂಗ್‌ಸ್ಟರ್ ನಡುವೆ ಈ ಸಿನಿಮಾ ಕಥೆ ಹೋಗುತ್ತದೆ. ಅಷ್ಟೇ ಅಲ್ಲದೆ ಇದರಲ್ಲಿ ರೈತರ ಕಥೆಯೂ ಸೇರಿಕೊಳ್ಳುವುದು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *