ಸರ್ಕಾರಿ ಗೌರವಗಳೊಂದಿಗೆ ವೀರಯೋಧನ ಅಂತ್ಯಕ್ರಿಯೆಯು ನೆರವೇರಿತು……

Spread the love

ಸರ್ಕಾರಿ ಗೌರವಗಳೊಂದಿಗೆ ವೀರಯೋಧನ ಅಂತ್ಯಕ್ರಿಯೆಯು ನೆರವೇರಿತು……

ನಮ್ಮ ಕಾಗವಾಡ ಮತಕ್ಷೇತ್ರದ ಬಳ್ಳಿಗೇರಿ ಗ್ರಾಮದ ಹೆಮ್ಮೆಯ ಸುಪುತ್ರನಾದ ಶ್ರೀ ಶಂಕರ ಮಹಾಲಿಂಗಪ್ಪ ಪಾಟೀಲ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದರು, ಅವರು ಆಕಸ್ಮಿಕವಾಗಿ ಮರಣ ಹೊಂದಿದ್ದು, ಇವತ್ತು ಅವರ ಸ್ವಗ್ರಾಮವಾದ ಬಳ್ಳಿಗೇರಿ ಗ್ರಾಮಕ್ಕೆ ಅವರ ಪಾರ್ಥಿವ ಶರೀರವನ್ನು ತೆಗೆದುಕೊಂಡು ಬಂದಿದ್ದರು, ಈ ಸ್ಥಳಕ್ಕೆ ಕಾಗವಾಡ ಮತಕ್ಷೇತ್ರದ ಯುವ ನಾಯಕರಾದ ಮಾನ್ಯ ಶ್ರೀ ಶ್ರೀನಿವಾಸ ಶ್ರೀಮಂತ ಪಾಟಿಲ ಅವರು ಆಗಮಿಸಿ, ವೀರಯೋಧನ ಪಾರ್ಥಿವ ಶರೀರಕ್ಕೆ  ನಮನಗಳನ್ನು ಸಲ್ಲಿಸಿ, ಬಳ್ಳಿಗೇರಿ ಗ್ರಾಮದ ಹೆಮ್ಮೆಯ  ವೀರಯೋಧನು ನಿಧನರಾಗಿದ್ದು ತುಂಬಾ ಬೇಸರದ ವಿಷಯ,  ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು. ಈ ಸಮಯದಲ್ಲಿ ಸ್ಥಳೀಯ ಗ್ರಾಮದ ಮುಖಂಡರು, ವೀರ ಯೋಧರ ಕುಟುಂಬಸ್ಥರು, ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *