ಅಪ್ಪುಗಾಗಿ ಹಾಡು, ದೇವರಿಗೆ ಕೂದಲು ಸಮರ್ಪಿಸಿದ ನಟಿ ವಿಜಯಲಕ್ಷ್ಮೀ….

Spread the love

ಅಪ್ಪುಗಾಗಿಹಾಡು, ದೇವರಿಗೆ ಕೂದಲು ಸಮರ್ಪಿಸಿದ ನಟಿ ವಿಜಯಲಕ್ಷ್ಮೀ….

ನಟ ಪುನೀತ್​ ರಾಜ್​ಕುಮಾರ್ ಗಾಗಿ ನಾಗಮಂಡಲ ಸಿನಿಮಾ ಖ್ಯಾತಿಯ ನಟಿ ವಿಜಯಲಕ್ಷ್ಮೀ ಗೀತೆ ಹಾಡಿದ್ದಾರೆ. ಡಾ.ರಾಜ್​ಕುಮಾರ್​ ನಟನೆಯ ಕ್ರಾಂತಿವೀರ ಚಿತ್ರದ ‘ಯಾರು ಏನು ಮಾಡುವರು’ ಎಂಬ ಹಾಡು ಹಾಡಿರುವ ಅವರು ನಟ ಪುನೀತ್ ಅವರಿಗೆ ಗೀತ ನಮನ ಸಲ್ಲಿಸಿದ್ದಾರೆ. ‘ನಾನು ಯಾವಾಗಲು ಟೀಕೆಯ ಭಯದಲ್ಲೇ ಇರುತ್ತೇನೆ. ಕೆಲವು ದಿನಗಳ ಹಿಂದೆ ನಾನು ಗೊಂಬೆ ಹೇಳುತೈತೆ, ಹಾಡು ಹಾಡಿದ್ದೆ. ಈ ಹಾಡನ್ನು ಕೇಳಿ ಮೈಸೂರಿನ ಪುನೀತ್​ ರಾಜ್​ಕುಮಾರ್ ಅಭಿಮಾನಿಗಳ ಸಂಘದಿಂದ ನನಗೆ ಕರೆ ಬಂದಿತ್ತು. ಚೆನ್ನಾಗಿ ಹಾಡಿದ್ದೀರಿ ಅಂತ ಮೆಚ್ಚುಗೆ ವ್ಯಕ್ತಪಡಿಸಿದ್ದರು’ ಎಂದರು. ಪುನೀತ್​ ಮೇಲಿನ ಅಭಿಮಾನಕ್ಕಾಗಿ ನಾನು ಆ ಹಾಡನ್ನು ಹಾಡಿದ್ದು ಎಂದಿದ್ದು, ಪುನೀತ್​ ಸರ್​ ಮತ್ತು ನನ್ನ ಜನ್ಮ ದಿನಾಂಕ ಒಂದೇ. ಅದನ್ನು ಆಗಾಗ ಪಾರ್ವತಮ್ಮ ಅವರು ಕೂಡ ನೆನಪಿಸಿಕೊಳ್ಳುತ್ತಿದ್ದರು. ಅಪ್ಪಾಜಿ ಯಾರ ಮೇಲೂ ದ್ವೇಷ ಇಟ್ಟುಕೊಳ್ಳುತ್ತಿರಲಿಲ್ಲ,  ಎಲ್ಲರನ್ನೂ ಕ್ಷಮಿಸುತ್ತಿದ್ದರು. ರಾಘಣ್ಣ ಮತ್ತು ಶಿವಣ್ಣ ಕೂಡ ಒಳ್ಳೆಯ ವ್ಯಕ್ತಿತ್ವದ ನಟರು ಎಂದು ಹೇಳಿದರು. ‘ಪುನೀತ್ ರಾಜ್‌ಕುಮಾರ್ ಅದ್ಭುತ ಅಭಿನಯದ ಜೊತೆಗೆ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ. ಸದಾ ಸಿನಿಮಾ ಹಾಗು ಜೀವನವನ್ನು ಬಹಳ ಪ್ರೀತಿಸುತ್ತಿದ್ದು, ಇವತ್ತು ಇಲ್ಲ ಅಂದರೆ ನಂಬೋಕೆ ಆಗೋಲ್ಲ’ ಎಂದು ಭಾವುಕರಾದರು. ನಟಿ ವಿಜಯಲಕ್ಷ್ಮೀ ತಲೆ ಕೂದಲು ಬೋಳಿಸಿಕೊಂಡಿದ್ದು,ಈ ಕುರಿತು ಮಾಹಿತಿ ನೀಡಿದ ಅವರು, ಇದು ನಮ್ಮ ಮನೆ ದೇವರ ಹರಕೆ. ಮೊದಲೆಲ್ಲಾ ಇದನ್ನು ತಂದೆ ಮಾಡುತ್ತಿದ್ದರು. ಈಗ ತಂದೆ ಇಲ್ಲ, ಅಕ್ಕನ ಆರೋಗ್ಯ ಸರಿಯಿಲ್ಲ. ಹಾಗಾಗಿ, ಹರಕೆಯ ಜವಾಬ್ದಾರಿ ನಾನು ತೆಗೆದುಕೊಂಡೆ. ಮನೆ ದೇವರಿಗೆ ಕೂದಲು ಕೊಟ್ಟಿದ್ದೇನೆ ಎಂದರು.

ವರದಿ – ಉಪ-ಸಂಪಾದಕೀಯ

Leave a Reply

Your email address will not be published. Required fields are marked *