ಅಪಾರ ಮಳೆಯಿಂದ ಹಾನಿಗೊಳಗಾದ #ಮತ್ತಿಹಳ್ಳಿ ಗ್ರಾಮದ ಜಮೀನುಗಳಿಗೆ ಭೇಟಿ ನೀಡಿ ರೈತರಿಗೆ ಧೈರ್ಯ ತುಂಬಿದ ಕ್ಷೇತ್ರದ ಜನಪ್ರಿಯ ನಾಯಕಿ #ಎಂಪಿವೀಣಾ_ಮಹಾಂತೇಶ್!!

Spread the love

ಅಪಾರ ಮಳೆಯಿಂದ ಹಾನಿಗೊಳಗಾದ #ಮತ್ತಿಹಳ್ಳಿ ಗ್ರಾಮದ ಜಮೀನುಗಳಿಗೆ ಭೇಟಿ ನೀಡಿ ರೈತರಿಗೆ ಧೈರ್ಯ ತುಂಬಿದ ಕ್ಷೇತ್ರದ ಜನಪ್ರಿಯ ನಾಯಕಿ #ಎಂಪಿವೀಣಾ_ಮಹಾಂತೇಶ್!!

ನಾಲ್ಕಾರು ದಿನಗಳಿಂದ ಬಿಡುವಿಲ್ಲದೇ ಸುರಿಯುತ್ತಿರುವ ಅಪಾರ ಮಳೆಗೆ ಹರಪನಹಳ್ಳಿ ಕ್ಷೇತ್ರದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಬೆಳೆಗಳೆಲ್ಲ ಜಲಾವೃತವಾದ ಘಟನೆಗಳು ಜರುಗುತ್ತಿವೆ. ಇಂತಹ ಘಟನೆಯಿಂದ ದಾರಿ ತೋಚದ ರೈತರು ಮುಗಿಲೆತ್ತರವನ್ನೇ ದಿಟ್ಟಿಸಿ ನೋಡುತ್ತಾ ನಿಟ್ಟುಸಿರು ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ.#ಹರಪನಹಳ್ಳಿ ಕ್ಷೇತ್ರ ವ್ಯಾಪ್ತಿಯ ಹಲವು ಗ್ರಾಮಗಳು ಜಲಾವೃತಗೊಂಡಿದ್ದು ನಿನ್ನೆ, ಮೊನ್ನೆಯಿಂದ ಹರಪನಹಳ್ಳಿ ಕ್ಷೇತ್ರದ ಜನನಾಯಕಿ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ #ಎಂಪಿವೀಣಾ_ಮಹಾಂತೇಶ್ ಅವರು ಕ್ಷೇತ್ರ ಪ್ರವಾಸ ಕೈಗೊಂಡು ತಮ್ಮ ಜಮೀನುಗಳಲ್ಲಿನ ಫಸಲು ಕಳೆದುಕೊಂಡು ನಿರಾಶರಾಗಿರುವ ರೈತರಿಗೆ ಸಾಂತ್ವನದ ಮಾತುಗಳನ್ನಾಡಿ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ .ಹರಪನಹಳ್ಳಿ ಕ್ಷೇತ್ರ ವ್ಯಾಪ್ತಿಯ #ಚಿಗಟೇರಿ ಹೋಬಳಿಯ #ಮತ್ತಿಹಳ್ಳಿ ಗ್ರಾಮಕ್ಕೆ ಭೇಟಿನೀಡಿದ #ಎಂಪಿವೀಣಕ್ಕನವರು ಮಳೆಯಿಂದ ರಾಗಿ, ಮೆಕ್ಕೆಜೋಳ ಹಾಗೂ ಸೂರ್ಯಕಾಂತಿ ಬೆಳೆಗಳು ಸಂಪೂರ್ಣ ಜಲಾವೃತಗೊಂಡಿರುವುದನ್ನು ಕಂಡು ಭಾವುಕರಾಗಿ ಸಂಬಂಧಿಸಿದ ರೈತರಿಗೆ ಧೈರ್ಯ ತುಂಬಿ, ನಿಮ್ಮೊಂದಿಗೆ ಸದಾ ಇದ್ದು ನಿಮ್ಮ ಕಷ್ಟದಲ್ಲಿ ಭಾಗಿಯಾಗಿತ್ತೇನೆ. ಸರ್ಕಾರದಿಂದ ಬರುವ ಪರಿಹಾರವನ್ನು ಪ್ರಾಮಾಣಿಕವಾಗಿ ಒದಗಿಸಿಕೊಡುವುದಾಗಿ ಭರವಸೆಯನ್ನಿತ್ತರು.

ವರದಿ – ಚಲುವಾದಿ ಅಣ್ಣಪ್ಪ

Leave a Reply

Your email address will not be published. Required fields are marked *