ಇಂದಿನಿಂದಲೇ ತಾವರಗೇರಾ ಪಟ್ಟಣ ಬಂದ್ ಬಂದ್ ಬಂದ್.

Spread the love

ಇಂದಿನಿಂದಲೇ ತಾವರಗೇರಾ ಪಟ್ಟಣ ಬಂದ್ ಬಂದ್ ಬಂದ್.

ರಾಜ್ಯದಲ್ಲಿ ನಡೆಯುತ್ತಿರುವ ಈ ಕೋವಿಡ್ 19 ರ ವಿರುದ್ದ  ತಾವರಗೇರಾ ಪಟ್ಟಣದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಕಲ್ಲಾಣ ಮಂಟಪದಲ್ಲಿ ಕೋವಿಡ್ 19 ರ ವಿಶೇಷ ಸಭೆ ಕರೆದು ತಾವರಗೇರಾ ಪಟ್ಟಣದ ಸಾರ್ವಜನಿಕರು ಹಾಗೂ ಪ್ರಭಾರಿ ವ್ಯಕ್ತಿಗಳು ಆಶಾ ಕಾರ್ಯಕರ್ತೆಯರು ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳು, ಪಟ್ಟಣ ಪಂಚಾಯತಿಯ ಅಧ್ಯಕ್ಷರು, ಸಿಬ್ಬಂದಿಗಳು ಹಾಗೂ ನಾಡ ಕಾಚೇರಿಯ ಅಧಿಕಾರಿಗಳು, ಸಿಂಬ್ಬಂದಿಗಳು ಜೋತೆಗೆ ತಾವರಗೇರಾ ಪೊಲೀಸ್ ಠಾಣೆಯ ಪಿ.ಎಸ್.ಐ, ಗೀತಾಂಜಲಿ ಶಿಂಧೆಯವರು ಈ ತುರ್ತು ಸಭೆಯಲ್ಲಿ ಭಾಗಿಯಾಗಿ ಕೋವಿಡ್ 19 ರ ವಿದ್ದು ಜಾಗೃತಿ ವಹಿಸುವುದು ನಮ್ಮೆಲ್ಲರ ಪಾತ್ರ ಅವಶ್ಯವಿದೆ ಎನ್ನುತ್ತ ಇಂದಿನಿಂದ ಹಿಡಿದು ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರುತ್ತದೆ. ಯಾರು ಓಡಾಡಬಹುದು, ಯಾರು ಓಡಾಡಬಾರದು ಅಂತ ಕಂದಾಯ ಇಲಾಖೆ ವಿಪತ್ತು ನಿರ್ವಹಣಾ ಸಮಿತಿಯಿಂದ ಆದೇಶ ಹೊರಡಿಸಿದೆ. ತುರ್ತು ಸೇವೆ ಒದಗಿಸುವ ಎಲ್ಲ ಸರ್ಕಾರಿ ಇಲಾಖೆ, ಕಾರ್ಪೋರೇಷನ್ ಗಳ ಓಡಾಟಕ್ಕೆ ನಿರ್ಬಂಧವಿಲ್ಲ. ತುರ್ತುಸೇವೆ ಒದಗಿಸುವ ಕಾರ್ಖಾನೆ, ಸಂಸ್ಥೆ ಸಿಬ್ಬಂದಿ ಐಡಿ ಕಾರ್ಡ್ ತೋರಿಸಿ ಓಡಾಡಬಹುದುಎಂದುಹೇಳಿದರು. ರೋಗಿಗಳು ಅವರ ಸಹಾಯಕರು, ವ್ಯಾಕ್ಸಿನ್ ಪಡೆದುಕೊಳ್ಳುವ  ನಾಗರೀಕರು ಓಡಾಡಬಹುದು. ತಮ್ಮ ಮನೆಯ ಆಸುಪಾಸಿನ ದಿನಸಿ ಅಂಗಡಿ, ಹಣ್ಣು ತರಕಾರಿ ಹಾಲು ಮಾಂಸದ ಅಂಗಡಿ ಬೆಳಗ್ಗೆ 6-10 ಗಂಟೆಯವರೆಗೆ ತೆಗೆದಿರಬಹುದು. ರೆಸ್ಟೋರೆಂಟ್ ಗಳಲ್ಲಿ ಪಾರ್ಸೆಲ್​ಗೆ ಮಾತ್ರ ಅವಕಾಶ ಇರುತ್ತದೆ. ದೂರ ಪ್ರಯಾಣಕ್ಕಾಗಿ ಹೋಗುವವರು, ಬಸ್ ನಿಲ್ದಾಣ. ರೈಲ್ವೆ ವಿಮಾನ ನಿಲ್ದಾಣಕ್ಕೆ ಹೋಗುವವರು ಸಾರ್ವಜನಿಕ ಸಾರಿಗೆ ಬಳಸಬಹುದು. ಆದರೆ ಟಿಕೆಟ್  ತೋರಿಸಬೇಕು ಎಂದು ಸ್ಪಷ್ಟನೆ  ನೀಡಿದರು. ಮದುವೆ ಕಾರ್ಯಕ್ರಮಕ್ಕೆ 50 ಜನರು ಮಾತ್ರ ಹೋಗಬೇಕು. ಸಿನಿಮಾ, ಬಾರ್, ಪಬ್, ಮಾಲ್ ಎಲ್ಲದರ ಮೇಲೆ ನಿಷೇಧ  ಹೇರಲಾಗಿದೆ. ಧಾರ್ಮಿಕ ರಾಜಕೀಯ ಗುಂಪು ಸೇರುವಿಕೆ ನಿಷೇಧ  ಇದೆ. ಪಾರ್ಕ್​ ಓಪನ್  ಇರುತ್ತೆ. ಧಾರ್ಮಿಕ ಕೇಂದ್ರಗಳನ್ನು ನಿಷೇಧಿಸಲಾಗಿದೆ. ಆದರೆ ಪೂಜಾರಿಗಳು ಮಾತ್ರ ಹೋಗಬಹುದು ಎಂದರು.ಈ ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲಿ ಎರಡು ದಿನ ಮಾತ್ರ ಕಟ್ಟಡದ ಸಿವಿಲ್ ಕೆಲಸ ಇರುವುದಿಲ್ಲ. ಉಳಿದ ದಿನ ಇರತ್ತೆ. ಅಂತರ್ ಜಿಲ್ಲೆಗೆ ಹೋಗುವವರು ಬಸ್ ಬಳಸಬಹುದು. ರೈಲು, ವಿಮಾನ ಬಳಸಬಹುದು.. ರೋಗಿಗಳು ಖಾಸಗಿ ವಾಹನದಲ್ಲಿ  ಓಡಾಡಬಹುದು. ಮಾಧ್ಯಮದವರು, ವೈದ್ಯರು, ನರ್ಸಿಂಗ್ ಸ್ಟಾಫ್ ಎಲ್ಲರೂ ಕೂಡ ಓಡಾಡಬಹುದು. ಅಂತರ್ ಜಿಲ್ಲಾ ಓಡಾಟಕ್ಕೆ ಬಸ್ಸು, ರೈಲು, ವಿಮಾನ ಮಾತ್ರ ಬಳಸಬೇಕು. ಅಂತರ್ ಜಿಲ್ಲಾ ಓಡಾಟಕ್ಕೆ ಖಾಸಗಿ ವಾಹನಗಳಲ್ಲಿ ಓಡಾಡಬೇಡಿ. ರೋಗಿಗಳು ಅವರ  ಕುಟುಂಬಸ್ಥರು  ಓಡಾಡುವುದಕ್ಕೆ ನಿರ್ಬಂಧ ಇಲ್ಲ ಎಂದು ಹೇಳಿದರು. ಇನ್ನು, ಕೋವಿಡ್​​ ನಿಂದ ಮೃತಪಟ್ಟವರನ್ನು ಸ್ವಂತ ಜಮೀನಿನಲ್ಲಿ ಶವ ಸಂಸ್ಕಾರ ಮಾಡಲು ಅವಕಾಶ ಕೊಟ್ಟಿದ್ದೇವೆ. ಆದರೆ ಸಂಬಂಧಪಟ್ಟವರಿಂದ ಅನುಮತಿ ಪಡೆದು ಕೋವಿಡ್ ನಿಯಮ‌ ಪಾಲನೆ ಮಾಡಬೇಕು ಎಂದರು. ವಿಶೇಷವಾಗಿ ತಾವರಗೇರಾ ಪಟ್ಟಣದಲ್ಲಿ ಪಟ್ಟಣ ಪಂಚಾಯತ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಜೊತೆಗೆ ನಾಡ ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಹ  ಈ ಕೋವಿಡ್ 19 ರ ಬಗ್ಗೆ ವಿಶೇಷ ಜಾಗೃತಿ ವಹಿಸುತ್ತಿಲ್ಲ. ಕಾಟ ಚಾರಕ್ಕೆ ಪ್ರಚಾರ ಮಾಡಿ ಮನೆ ಸೇರುತ್ತಿದ್ದಾರೆ, ಇದರಲ್ಲಿ ವಿಶೇಷವಾಗಿ ತಾವರಗೇರಾ ಪಟ್ಟಣದ ಪೊಲೀಸ್ ಠಾಣೆಯ ಪಿ.ಎಸ್.ಐ ಗಳಾದ ಶ್ರೀಮತಿ ಗೀತಾಂಜಲಿ ಶಿಂಧೆಯವರು ಹಾಗೂ ಪೊಲೀಸ್ ಸಿಬ್ಬಂದಿಗಳು ತಾವರಗೇರಾ ಪಟ್ಟಣದ ಸುತ್ತ ರೌಂಡ್‌ ಹಾಕುವ ಮೂಲಕ  ಈಗಾಗಲೇ  ಸಾರ್ವಜನಿಕರಿಗೆ ಹಾಗೂ ಅಂಗಡಿ ಮಾಲೀಕರಿಗೆ ಎಚ್ಚರಿಸುತ್ತಿದ್ದಾರೆ.  ಇವರ ಈ ಕಾರ್ಯಕ್ಕೆ ಶ್ಲಾಘನೀಯ   ವರದಿ – ಅಮಾಜಪ್ಪ ಹೆಚ್. ಜುಮಲಾಪೂರ

 

Leave a Reply

Your email address will not be published. Required fields are marked *