ಕಾಫಿ ಪಲ್ಪರ್ ನೀರನ್ನು ಹೊಳೆಯ ನೀರಿಗೆ ಬಿಡುತ್ತಿದ್ದಾರೆ ಇದರ ಬಗ್ಗೆ  ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಕರವೇ ಕಾರ್ಯಕರ್ತರ ಮನವಿ….

Spread the love

ಕಾಫಿ ಪಲ್ಪರ್ ನೀರನ್ನು ಹೊಳೆಯ ನೀರಿಗೆ ಬಿಡುತ್ತಿದ್ದಾರೆ ಇದರ ಬಗ್ಗೆ  ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಕರವೇ ಕಾರ್ಯಕರ್ತರ ಮನವಿ….

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಹೊನ್ನವಳ್ಳಿ ಎಂಬ ಗ್ರಾಮದಿಂದ ಈ ಹೊಳೆ ಹರಿದು  ಕೂಗೆಕೋಡಿ ಮಾರ್ಗವಾಗಿ    ಶುಂಠಿ ಮತ್ತು ಅಜ್ಜಳ್ಳಿ ಕೋಟೆಊರು  ಮತ್ತು ಬಸವನಕೊಪ್ಪಮತ್ತು ಶಾಂತವೇರಿ    ಮಾರ್ಗವಾಗಿ ಶನಿವಾರಸಂತೆಯಿಂದ ಗೊರೂರು ಡ್ಯಾಮಿಗೆ ಈ ನೀರು ಸೇರುತ್ತದೆ .ನಿನ್ನೆ ದಿನ ಈ ಹೊಳೆಗೆ ಕಾಫಿ ಪಲ್ಪಿಂಗ್ ನೀರನ್ನು ಬಿಟ್ಟಿರುತ್ತಾರೆ .ಈ ಹೊಳೆಯಲ್ಲಿ ವ್ಯವಸಾಯಕ್ಕೆ ಅತಿ ಹೆಚ್ಚು ನೀರು ಬಳಸುತ್ತಾರೆ ಮತ್ತು ಈ ಹೊಳೆಯಲ್ಲಿ ಅತಿಹೆಚ್ಚು ಜಲಚರ ಪ್ರಾಣಿಗಳು ಇರುತ್ತದೆ ಮತ್ತು ಈ ಹೊಳೆಯ ನೀರನ್ನು ದನಕರುಗಳು ಕುಡಿಯುತ್ತವೆ .ಹಾಗಾಗಿ ಕಾಫಿ ಪಲ್ಪಿಂಗ್ ನೀರಿನಿಂದ ವ್ಯವಸಾಯಕ್ಕೂ  ತೊಂದರೆಯಾಗುತ್ತಿದ್ದು ಮತ್ತು ದನಕರುಗಳು ಕುಡಿದರೆ ತುಂಬಾ ತೊಂದರೆ ಉಂಟಾಗುತ್ತದೆ ಹಾಗೂ ಜಲಚರ ಪ್ರಾಣಿಗಳು ಸತ್ತು ಹೋಗುತ್ತದೆ ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಈ ಹೊಳೆಗೆ ಯಾರು ಕಾಫಿ ಪಲ್ಪರ್ ನೀರು ಬಿಟ್ಟಿರುತ್ತಾರೆ ಅವರ ಮೇಲೆ ಸರಿಯಾದ ಕ್ರಮ ಕೈಗೊಳ್ಳಬೇಕು .ಮತ್ತು ಹೊಳೆಯ ಬದಿಯಲ್ಲಿ ಯಾವ ಕಾಫಿ ಪಲ್ಪರ್ ಇದೆಯೋ ಇದನ್ನು ಪರಿಶೀಲನೆ ಮಾಡಬೇಕು ಎಂದು ಕರವೇ ಕಾರ್ಯಕರ್ತರ ಮನವಿ ಈ ಸಂದರ್ಭದಲ್ಲಿ ಗೌಡಳ್ಳಿ ಗ್ರಾಮ ಪಂಚಾಯಿತಿಯ ಸದಸ್ಯರಾದ ನವೀನ್ ಕುಮಾರ್ ಅವರು ಮಾತನಾಡಿ ಈ ಹೊಳೆಯಿಂದ ವ್ಯವಸಾಯಕ್ಕೆ ಅತಿ ಹೆಚ್ಚು ಉಪಯುಕ್ತವಾಗುತ್ತದೆ ನೀರು ಹಾಗೂ ಇದನ್ನು ತುಂಬಾ ಜಲಚರ ಪ್ರಾಣಿ ಇದ್ದು ಮತ್ತು ಈ ನೀರನ್ನು ದನಕರುಗಳು ಹೆಚ್ಚು ಕುಡಿಯುತ್ತಿದ್ದು ಇದಕ್ಕೆಲ್ಲಾ ತೊಂದರೆಯಾಗುತ್ತಿದೆ ಹಾಗಾಗಿ ಹೊಳೆಗೆ ಯಾರೂ ಕಾಫಿ ಪಲ್ಪರ್ ನೀರನ್ನು ಬಿಟ್ಟಿರುತ್ತಾರೆ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮ ಪಂಚಾಯತ್ ಸದಸ್ಯರು ಮಾತನಾಡಿರುತ್ತಾರೆ .ಈ ಸಂದರ್ಭದಲ್ಲಿ ಕರವೇ ಫ್ರಾನ್ಸಿಸ್ ಡಿಸೋಜಾ ರವರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರಾದ ನವೀನ್ ಕುಮಾರ್ ರವರು ಕಾಫಿ ಪಲ್ಪರ್ ನೀರನ್ನು ಬಿಟ್ಟಿರುವ ಹೊಳೆಯನ್ನು ವೀಕ್ಷಿಸಿದ ವೀಕ್ಷಿಸಿದ ಮೇಲೆ ಹೊಳೆಗೆ ಯಾರು ಕಾಫಿ ಪಲ್ಪರ್ ನೀರನ್ನು ಬಿಟ್ಟಿರುತ್ತಾರೆ ಅವರ ಮೇಲೆ ಸರಿಯಾದ ಕ್ರಮ ಕೈಗೊಳ್ಳಬೇಕೆಂದು ಕರವೇ ತಾಲ್ಲೂಕು ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜಾ ರವರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿರುತ್ತಾರೆ …ಕರವೇ ಫ್ರಾನ್ಸಿಸ್ ಡಿಸೋಜಾ 9449255831ಮತ್ತು 9686095831

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *