“ಪ್ರಗತಿಯ ಪಥದತ್ತ ನಮ್ಮ ಹೆಜ್ಜೆ”

Spread the love

“ಪ್ರಗತಿಯ ಪಥದತ್ತ ನಮ್ಮ ಹೆಜ್ಜೆ

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಅಥಣಿ ಮತಕ್ಷೇತ್ರದ ಐಗಳಿಕ್ರಾಸ್ ದಿಂದ ಕೋಹಳ್ಳಿ ವ್ಹಾಯ ಕೇಸ್ಕರ ದಡ್ಡಿವರೆಗೆ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಮಂಜೂರಾದ ಸುಮಾರು 4 ಕೋಟಿ ರೂ. ಮೊತ್ತದಲ್ಲಿ, 6 ಕಿ.ಮೀ. ರಸ್ತೆ ಸುಧಾರಣಾ ಕಾಮಗಾರಿಗಳಿಗೆ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಭೂಮಿ ಪೂಜೆ ನೆರವೇರಸಿ, ಚಾಲನೆ ನೀಡಿದರು.  ಗ್ರಾಮೀಣ ಭಾಗದಲ್ಲಿ ರಸ್ತೆಗಳು ಅಭಿವೃದ್ಧಿಯಾದರೆ ಗ್ರಾಮಗಳ ಏಳಿಗೆಗೆ ಪೂರಕವಾಗುತ್ತದೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದು, ಹಂತ ಹಂತವಾಗಿ ಪ್ರಗತಿಯ ಪಥದತ್ತ ಹೆಜ್ಜೆ ಇಡುತ್ತಿದ್ದೇವೆ.  ಮುಂದಿನ ದಿನಗಳಲ್ಲಿ ಮತ್ತಷ್ಟು ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿಗಳಾದ ಶ್ರೀ ಲಕ್ಷ್ಮಣ ಸವದಿ ಜಿ, ಶಾಸಕರಾದ ಶ್ರೀ ಮಹೇಶ ಕುಮಟಳ್ಳಿ ಜಿ, ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ರಾಜಶ್ರೀ ಪಾಟೀಲ, ಗ್ರಾ. ಪಂ. ಸದಸ್ಯರು, ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಹಾಜರಿದ್ದರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *