ಖಿದ್ಮಾ ಫೌಂಡೇಶನ್ ಕರ್ನಾಟಕದ ವತಿಯಿಂದ ಕನ್ನಡ ರಾಜ್ಯೋತ್ಸವದ ಹಾಗೂ ಕನ್ನಡ ನಾಡಿನ ಅಭಿಮಾನ  ದಿವಂಗತ ಪವರ್ ಸ್ಟಾರ್  ಪುನೀತ್ ರಾಜ್ ಕುಮಾರ್ ಅವರಿಗೆ ನುಡಿ ನಮನ ಕಾರ್ಯಕ್ರಮ……

Spread the love

ಖಿದ್ಮಾ ಫೌಂಡೇಶನ್ ಕರ್ನಾಟಕದ ವತಿಯಿಂದ ಕನ್ನಡ ರಾಜ್ಯೋತ್ಸವದ ಹಾಗೂ ಕನ್ನಡ ನಾಡಿನ ಅಭಿಮಾನ  ದಿವಂಗತ ಪವರ್ ಸ್ಟಾರ್  ಪುನೀತ್ ರಾಜ್ ಕುಮಾರ್ ಅವರಿಗೆ ನುಡಿ ನಮನ ಕಾರ್ಯಕ್ರಮ……

ದಿನಾಂಕ 01/11/2021 ಸೋಮವಾರ ರಾತ್ರಿ 7 ರಿಂದ 8ರ ತನಕ ಗೂಗಲ್ ಮೀಟ್ ನಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಉಪನ್ಯಾಸ ಕಾರ್ಯಕ್ರಮ ಹಾಗೂ ದಿವಂಗತ ಪವರ್ ಸ್ಟಾರ್  ಪುನೀತ್ ರಾಜ್ ಕುಮಾರ್ ಅವರಿಗೆ ನುಡಿ ನಮನ ಕಾರ್ಯಕ್ರಮ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕುಮಾರಿ ಜಾನವಿ ಎಸ್ ಔಕೀರಕರ (ವಿದ್ಯಾರ್ಥಿನಿ ಶ್ರೀ ವಾಯ್.ಕೆ ಕಟ್ಟಿಮನಿ ಕಾನ್ವೆಂಟ್ ಶಾಲೆ ಬೆಳಗಾವಿ) ನಾಡಗೀತೆ ಹಾಡಿದರು. ಶ್ರೀಮತಿ ಡಾ. ಅನ್ನಪೂರ್ಣ  ಹಿರೇಮಠ (ಶಿಕ್ಷಕಿ ಶ್ರೀ ಸಿದ್ಧಾರೂಢ ಹೈಸ್ಕೂಲ್ ಮುಚ್ಚಂಡಿ ತಾಲೂಕು ಜಿಲ್ಲಾ ಬೆಳಗಾವಿ) ಕನ್ನಡ ನಾಡು – ನುಡಿ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು. ಡಾ. ಅರ್ಚನಾ ಎನ್ ಪಾಟೀಲ ಹಾವೇರಿ (ಸಾಹಿತಿಗಳು ಹಾಗೂ ಸಾಫ್ಟ್‌ವೇರ್ ಇಂಜಿನಿಯರ್) ನುಡಿ ನಮನ ಸಲ್ಲಿಸಿದರೆ.ಕುಮಾರಿ ತನೀಕ್ಷಾ ಅಶೋಕ್ ಪ್ರಸಾದ್ ಕಾವ್ಯ ನಮನ ಸಲ್ಲಿಸಿದರು ಕಾರ್ಯಕ್ರಮದಲ್ಲಿ ಖಿದ್ಮಾ ಫೌಂಡೇಶನ್ ಕರ್ನಾಟಕ ರಾಜ್ಯಾಧ್ಯಕ್ಷರು ಹಾಶಿಂ ಬನ್ನೂರು ಹಾಗೂ  ಖಿದ್ಮಾ ಫೌಂಡೇಶನ್ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಅಮಿತಾ ಅಶೋಕ್ ಪ್ರಸಾದ್ ಬೆಂಗಳೂರು ಉಪಸ್ಥಿತರಿದ್ದರೆಂದು ಖಿದ್ಮಾ ಫೌಂಡೇಶನ್ ಕರ್ನಾಟಕ ರಾಜ್ಯ ಸಂಚಾಲಕರು ಆಮಿರ್ ಬನ್ನೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರದಿ – ಸಂಪಾದಕೀಯ

Leave a Reply

Your email address will not be published. Required fields are marked *