ವಾಲ್ಮೀಕಿ ಸರ್ವರಿಗೂ ಮಾದರಿ, ಪ್ರೇರಣೆ : ಅಭಿಷೇಕ ಆರ್ ಪಾಟೀಲ್.

Spread the love

ವಾಲ್ಮೀಕಿ ಸರ್ವರಿಗೂ ಮಾದರಿ, ಪ್ರೇರಣೆ : ಅಭಿಷೇಕ ಆರ್ ಪಾಟೀಲ್.

ಹುಮನಾಬಾದ : ಆದಿಕವಿ ಮಹರ್ಷಿ ಶ್ರೀ ವಾಲ್ಮೀಕಿ ರವರ ಜಯಂತಿಯನ್ನು ಕ್ಷೇತ್ರದ ಶಾಸಕರ ಕಛೇರಿಯಲ್ಲಿ TAPCMS ಅಧ್ಯಕ್ಷರಾದ ಅಭಿಷೇಕ ಆರ್ ಪಾಟೀಲ್ ರವರು ಶ್ರೀ ಮಹರ್ಷಿ ವಾಲ್ಮೀಕಿ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ನಮನ ಸಲ್ಲಿಸುವ ಮೂಲಕ ಅತ್ಯಂತ ವೈಚಾರಿಕವಾಗಿ ಜಯಂತಿಯನ್ನು ಆಚರಣೆ ಮಾಡಿದರು.  ಈ ಸಂದರ್ಭದಲ್ಲಿ ಅಭಿಷೇಕ ಆರ್ ಪಾಟೀಲರು ಮಾತನಾಡಿ ಸಾಮಾನ್ಯ ಬುಡಕಟ್ಟು ಸಮುದಾಯದಲ್ಲಿ ಹುಟ್ಟಿ, ಪ್ರತಿಭೆ ಮತ್ತು ಪ್ರಯತ್ನದ ಬಲದಿಂದಲೇ ಮಹಾಕಾವ್ಯ ರಾಮಾಯಣ ರಚಿಸಿದ ವಾಲ್ಮೀಕಿ ಮಹರ್ಷಿ  ಅವರ ಸಾಧನೆ ಸೇವೆ ಸರ್ವರಿಗೂ ಮಾದರಿ, ಪ್ರೇರಣೆಯಾಗಲಿ. ಅದೇ ರೀತಿ ಇವರು ಹಾಕಿಕೊಟ್ಟ ತತ್ವ ಆದರ್ಶಗಳ ಮಾರ್ಗದಲ್ಲಿ ನಾವೆಲ್ಲರೂ ಸಾಗಿ, ನಮ್ಮ ಜೀವನ ಸಾರ್ಥಕ ಮಾಡಿಕೊಳ್ಳೋಣ ಎಂದು ಹೇಳಿದರು. ಈ  ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಉಮೇಶ್ ಜಮಗಿ,ಪ್ರಮುಖರಾದ ಶ್ರೀ ಪ್ರಕಾಶ ಕಾಡಗೊಂಡ, ಶ್ರೀ ರಾಕೇಶ್ ಪಾಟೀಲ, ಶ್ರೀ ವಿಜಯಕುಮಾರ ಬಸಪಳ್ಳಿ, ಶ್ರೀಕಾಂತ ಪರಿಟ್ ಸೇರಿದಂತೆ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.

ವರದಿ – ಸಂಗಮೇಶ ಎನ್ ಜವಾದಿ

Leave a Reply

Your email address will not be published. Required fields are marked *