ಸಮಾಜ ಸೇವಾ ಕಾರ್ಯಕ್ರಮಗಳ ಮೂಲಕ ಭೈರವಿಯ ಹುಟ್ಟುಹಬ್ಬದ ಆಚರಣೆಗೆ ಕುಟುಂಬದ ನಿರ್ಧಾರ…

Spread the love

ಸಮಾಜ ಸೇವಾ ಕಾರ್ಯಕ್ರಮಗಳ ಮೂಲಕ ಭೈರವಿಯ ಹುಟ್ಟುಹಬ್ಬದ ಆಚರಣೆಗೆ ಕುಟುಂಬದ ನಿರ್ಧಾರ…

ನಾಳೆ(ದಿನಾಂಕ: 21/10/2021) ಭೈರವಿಯ ಜನ್ಮ ದಿನದ ಪ್ರಯುಕ್ತ ಭೈರವಿ ಅಭಿನಯದಿಂದ ಗಳಿಸಿದ ಹಣದಲ್ಲಿ ಬೆಳಿಗ್ಗೆ ಹತ್ತು ಗಂಟೆಗೆ  ನಮ್ಮ(ನಾನು ಓದುತ್ತಿರುವ) ಶಾಲೆ(GHPS ಬಸವನಹಳ್ಳಿ)ಯ ಎಲ್ಲಾ ವಿದ್ಯಾರ್ಥಿಗಳಿಗೆ ಬೆಲ್ಟ್ ಮತ್ತು ಟೈ ವಿತರಿಸುತ್ತಿದ್ದೇವೆ. ಮಧ್ಯಾಹ್ನ 1-00 ಗಂಟೆಗೆ ದೊಡ್ಡಬಳ್ಳಾಪುರ ತಾಲ್ಲೂಕಿನ ದರ್ಗಾಜೋಗಹಳ್ಳಿ ಗ್ರಾಮದಲ್ಲಿ ವಾದ್ಯಗೋಷ್ಟಿ(ಆರ್ಕೇಸ್ಟ್ರಾ).  ಕಲಾವಿದರಿಗೆ ದಿನಸಿ ಕಿಟ್ ಹಾಗೂ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ನಂತರ ಭೈರವಿ ಅಭಿನಯದ ಎರಡು ಸಿನಿಮಾಗಳ ಪೋಸ್ಟರ್ ಬಿಡುಗಡೆ ಮಾಡಲಾಗುವುದು. ಸಂಜೆ ಐದು ಗಂಟೆಗೆ ವನಕಲ್ಲು ಮಹಾಸಂಸ್ಥಾನ ಮಠದ ವೃದ್ಧಾಶ್ರಮದಲ್ಲಿರುವ ವೃದ್ಧ, ವೃದ್ಧೆಯರಿಗೆ ಬೆಡ್ ಶೀಟ್ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮಗಳಿಗೆ ನನ್ನ ಅಭಿಮಾನಿಗಳು, ಹಿತೈಷಿಗಳು, ಸಂಬಂಧಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಈ ಮೂಲಕ ಸವಿನಯ ಮನವಿ ಮಾಡಿಕೊಳ್ಳುತ್ತಿದ್ದೇವೆ..

ವರದಿ :ಮೌನೇಶ್ ರಾಥೋಡ್ ಬೆಂಗಳೂರು

2 thoughts on “ಸಮಾಜ ಸೇವಾ ಕಾರ್ಯಕ್ರಮಗಳ ಮೂಲಕ ಭೈರವಿಯ ಹುಟ್ಟುಹಬ್ಬದ ಆಚರಣೆಗೆ ಕುಟುಂಬದ ನಿರ್ಧಾರ…

  1. ನೋಡಿ ಯಾವರೀತಿ ಮಕ್ಕಳನ್ನು ಬೆಳೆಸಿ ದೊರೆ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸುತ್ತಾರೆ ನಮ್ಮ ಕರ್ನಾಟಕ ರಾಜ್ಯ ರೈತ ಸಂಘ ಪರವಾಗಿ ಧನ್ಯವಾದಗಳು ನಿಮ್ಮ ಕುಟುಂಬದ ವರಿಗೆ ದೇವರು ಆರೋಗ್ಯ ಭಾಗ್ಯ ಸಕಲಸಂಪತ್ತನ್ನಕರುಣಿಸಲಿ ಮಹೇಶ್ ಚಿದರವಳ್ಳಿ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮೈಸೂರು ಜಿಲ್ಲೆ

Leave a Reply

Your email address will not be published. Required fields are marked *