ನೂತನ ತಹಸೀಲ್ದಾರರಾಗಿ ರವೀಂದ್ರ ದಾಮಾ….

Spread the love

ನೂತನ ತಹಸೀಲ್ದಾರರಾಗಿ ರವೀಂದ್ರ ದಾಮಾ….

ಚಿಟಗುಪ್ಪಾ : ಮಹಮ್ಮದ್ ಜಿಯಾವುದ್ದಿನ್ ರವರು ಬೇರೆ ಕಡೆ ವರ್ಗಾವಣೆಗೊಂಡ ಪ್ರಯುಕ್ತ, ಚಿಟಗುಪ್ಪಾ ತಾಲೂಕಿನ ನೂತನ ತಹಶೀಲ್ದಾರರಾಗಿ ರವೀಂದ್ರ ದಾಮಾ ರವರು ಅಧಿಕಾರ ವಹಿಸಿಕೊಂಡರು. ಅವರು ಈ ಹಿಂದೆ ಬಸವಕಲ್ಯಾಣ ಕಂದಾಯ ವಿಭಾಗಿಯ ಕಛೇರಿಯಲ್ಲಿ ಶಿರಸ್ತೆದಾರರಾಗಿ,ಚಿಂಚೋಳಿಯಲ್ಲಿ ಉಪ ತಹಶೀಲ್ದಾರರಾಗಿ ಹಾಗೂ ಚಿತ್ತಾಪುರದ ತಹಶೀಲ್ದಾರರಾಗಿ ಕಾರ್ಯ ನಿರ್ವಹಣೆ ಮಾಡಿರುತ್ತಾರೆ. ಪ್ರಸ್ತುತ ಚಿಟಗುಪ್ಪಾ ತಾಲೂಕಿನ ನೂತನ ತಹಶೀಲ್ದಾರರಾಗಿ ನಿಯೋಜನೆಗೊಂಡಿದ್ದಾರೆ. ಕಂದಾಯ ಇಲಾಖೆಯ ಅಡಿಯಲ್ಲಿ ಬರುವ ಎಲ್ಲಾ ಕೆಲಸಗಳು ಸರಿಯಾದ ಸಮಯಕ್ಕೆ ಆಗುವಂತೆ ನೋಡಿಕೊಂಡು ಬರಲಾಗುತ್ತದೆ. ಅದೇ ರೀತಿ ಯಾವುದೇ ಕಾನೂನುಬಾಹಿರ ಚಟು ವಟಿಕೆಗಳಿಗೆ, ಆಸ್ಪದ ನೀಡದೆ ಸಂವಿಧಾನಬದ್ಧವಾಗಿ ಕೆಲಸ ನಿರ್ವಹಿಸುತ್ತೇವೆ. ಎಂದು  ರವೀಂದ್ರ ದಾಮಾರವರು ತಿಳಿಸಿರುತ್ತಾರೆ.

ವರದಿಸಂಗಮೇಶ ಎನ್ ಜವಾದಿ.

Leave a Reply

Your email address will not be published. Required fields are marked *