ಎರಡು ತಲೆ ಹಾವು ಸಾಗಾಟ: ಆರೋಪಿ ಬಂಧನ….

Spread the love

ಎರಡು ತಲೆ ಹಾವು ಸಾಗಾಟ: ಆರೋಪಿ ಬಂಧನ….

ಸಂ.ಕ.ಸಮಾಚಾರ ಬ್ಯಾಡಗಿ: ಎರಡು ತಲೆ ಹಾವುಗಳನ್ನು ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸಾಕ್ಷಿ ಸಮೇತ ಬಂಧಿಸಿದ ಘಟನೆ ಗುರುವಾರ ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ಜರುಗಿದೆ. ಗ್ರಾಮದ ಬೀರಪ್ಪ ನಾಗಪ್ಪ ಮೆಡ್ಲೇರಿ (45) ಬಂಧಿತ ಆರೋಪಿಯಾಗಿದ್ದು ಆತನಿಂದ ಸುಮಾರು 60 ಲಕ್ಷ ರೂಪಾಯಿ ಮೌಲ್ಯದ 5 ಹಾವುಗಳನ್ನು ರಕ್ಷಣೆ ಮಾಡಲಾಗಿದೆ. ಆರೋಪಿಯು ಗ್ರಾಮದ ಬಳಿಯಿಂದ ಎರಡು ತಲೆ ಹಾವುಗಳನ್ನು ಬೇರೆ ಕಡೆಗೆ ಸಾಗಿಸುತ್ತಿದ್ದನು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ರಾಣೆಬೆನ್ನೂರ ಹಾಗೂ ಬ್ಯಾಡಗಿ ವಿಭಾಗದ ಅರಣ್ಯ ಇಲಾಖೆ ಸಿಬ್ಬಂದಿ ಆರೋಪಿಯನ್ನು ಬಂಧಿಸಿ ಹಾವುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು ಹಾವುಗಳನ್ನು ಅರಣ್ಯಕ್ಕೆ ಬಿಡಲಾಗಿದೆ. ಡಿಸಿಫ್ ಬಾಲಕೃಷ್ಣ ಸರ್ ಹಾಗೂ ಎಸಿಫ್ A. H. ಅಶೋಕ್ ಸರ್ ಅವರ ಮಾರ್ಗದರ್ಶನದಲ್ಲಿ ಇಂದು ರಾಣೇಬೆನ್ನೂರ್ ತಾಲೂಕಿನ ದೇವರಗುಡ್ಡ ಹಳ್ಳಿಯಲ್ಲಿ RFO ಮಹೇಶ್ ಮರೆಣ್ಣವರ ತಂಡ ಮಣ್ಣಮುಕ್ಕ್ ಹಾವಿನ ಕಳ್ಳ ಸಾಗಣೆಯಲ್ಲಿ ತೊಡಗಿದ್ದ ಬೀರಪ್ಪ ನಾಗಪ್ಪ ಮೆಡ್ಲೇರಿ ಎಂಬುವನನ್ನು ಬಂಧಿಸಿ, 5 ಮಣ್ಣಮುಕ್ಕ ಹಾವುಗಳನ್ನು ವಶಪಡಿಸಿಕೊಳ್ಳಲಾಯಿತು..

 ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *