ಕೆ ಆರ್ ಪೇಟೆ ತಾಲೂಕಿನಲ್ಲಿ ಹುಚ್ಚು ನಾಯಿಯ ಹಾವಳಿ 50ಕ್ಕು ಹೆಚ್ಚು ಜನರಿಗೆ ಗಾಯ…

Spread the love

ಕೆ ಆರ್ ಪೇಟೆ ತಾಲೂಕಿನಲ್ಲಿ ಹುಚ್ಚು ನಾಯಿಯ ಹಾವಳಿ 50ಕ್ಕು ಹೆಚ್ಚು ಜನರಿಗೆ ಗಾಯ…

ಕೆ.ಆರ್.ಪೇಟೆ: ಕಳೆದೆರಡು ದಿನಗಳಿಂದ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ನುಗ್ಗಿ ಮಕ್ಕಳು ಮಹಿಳೆಯರು ಸೇರಿದಂತೆ ಸುಮಾರು 50ಮಂದಿಗೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದ್ದ ಹುಚ್ಚುನಾಯಿಯು ಇಂದು ಮಧ್ಯಾಹ್ನ    ತಾಲ್ಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಿರಾಯನಹಳ್ಳಿ ಗ್ರಾಮದಲ್ಲಿ ಕಾಣಿಸಿಕೊಂಡು  ಪುಟ್ಟ ಮಕ್ಕಳ  ಮೇಲೆ ದಾಳಿ ನಡೆಸಲು ಯತ್ನಿಸಿದೆ.  ಕೂಡಲೇ ಸಾರ್ವಜನಿಕರು  ಹುಚ್ಚುನಾಯಿಯನ್ನು    ಸಾರ್ವಜನಿಕರು ಸಾಮೂಹಿಕವಾಗಿ ಕಲ್ಲು ಮತ್ತು ದೊಣ್ಣೆಗಳನ್ನು  ಹೊಡೆದು ಸಾಯಿಸಿದ್ದಾರೆ. ಇದರಿಂದ ತಾಲ್ಲೂಕಿನ ಜನತೆಯಲ್ಲಿ ಅವರಿಸಿದ್ದ ಆತಂಕದ ವಾತಾವರಣ ದೂರವಾಗಿದೆ.  ಸೋಮವಾರ ರಾತ್ರಿಯಿಂದ ಹತ್ತಾರು ಹಳ್ಳಿಗಳಿಗೆ ಹೋಗಿ ಕಂಡ ಕಂಡವರ ಮೇಲೆ ದಾಳಿ ನಡೆಸಿ ಭೀಕರವಾಗಿ ಕಚ್ಚಿ ಸುಮಾರು 50ಕ್ಕೂ ಹೆಚ್ಚು ಮಂದಿಯನ್ನು  ಗಾಯಗೊಳಿಸಿದ್ದ ಹುಚ್ಚು ನಾಯಿಯನ್ನು  ಹರಿರಾಯನಹಳ್ಳಿ ಗ್ರಾಮದ ಬಳಿ ಸಾರ್ವಜನಿಕರು ದೊಣ್ಣೆ ಮತ್ತು ಕಲ್ಲುಗಳಿಂದ  ಸಾಮುಹಿಕವಾಗಿ  ಹೊಡೆದು  ಹುಚ್ಚು ನಾಯಿಯನ್ನು ಸಾಯಿಸಿದ್ದರಿಂದ ಹುಚ್ಚು ನಾಯಿಯ ಭಯದಿಂದ ಮನೆಯಿಂದ ಹೊರ ಹೋಗಲು ಹೆದರುತ್ತಿದ್ದ  ತಾಲ್ಲೂಕಿನ ಜನತೆ ನಿಟ್ಟುಸಿರು ಬಿಡುವಂತಾಗಿದೆ.

ಪ್ರವೀಣ ನಂದಿ 9902644081

Leave a Reply

Your email address will not be published. Required fields are marked *