ನಿಸ್ವಾರ್ಥ ಸಾಧಕರಿಗೆ ಗೌರವ ಸನ್ಮಾನ….

Spread the love

ನಿಸ್ವಾರ್ಥ ಸಾಧಕರಿಗೆ ಗೌರವ ಸನ್ಮಾನ….

ಚಿಟಗುಪ್ಪಾ : ಕಲ್ಯಾಣ ಕಾಯಕ ಪ್ರತಿಷ್ಠಾನ, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು , ಕರುನಾಡು ಸಾಹಿತ್ಯ ಪರಿಷತ್ತು ಹಾಗೂ ವಿಕಾಸ ಅಕಾಡೆಮಿ ಚಿಟಗುಪ್ಪಾ ರವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ

ಸಮಾಜಿಕ, ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ, ಸಂಘಟಕ ಹಾಗೂ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ, ನಿಸ್ವಾರ್ಥ ಸೇವಾ ಮನೋಭಾವದಿಂದ ಸೇವೆ ಸಲ್ಲಿಸುತ್ತೀರುವ ಈ ಭಾಗದ ಜನಪ್ರಿಯ ಜನನಾಯಕರಾದ ಸನ್ಮಾನ್ಯ ಶ್ರೀ ರೇವಣ್ಣಸಿದ್ಧಪ್ಪಾ ಜಲಾದೆಯವರ ಸಾಧನೆ ಸೇವೆ ಗುರುತಿಸಿ ಹಾಗೂ ಶಿವಲಿಂಗಪ್ಪಾ ಜಲಾದೆಯವರ ಸಮಾಜಿಕ ಸೇವೆಯನ್ನು ಪರಿಗಣಿಸಿ ಪರಿಷತ್ತಿನ ಅಧ್ಯಕ್ಷರಾದ ಸಂಗಮೇಶ ಎನ್ ಜವಾದಿ ಯವರು ಆತ್ಮೀಯವಾಗಿ ಸನ್ಮಾನಿಸಿ,ಗೌರವಿಸಿದರು. ಈ ಸಂದರ್ಭದಲ್ಲಿ ಪರಿಷತ್ತಿನ ನಿರ್ದೇಶಕರಾದ ತಿಪ್ಪಣ್ಣ ಶರ್ಮಾ, ದಯಾನಂದ ಕಾಂಬಳೆ, ಸಂಘದ ಅಧ್ಯಕ್ಷ ವೀರಪ್ಪಾ ಜೆಟಲಾ,ಉಪಾಧ್ಯಕ್ಷ ವಿಠಲರಾವ ಪಟ್ಟಣ್ಣಕರ, ಸಂಘದ ನಿರ್ದೇಶಕರಾದ ಮಲ್ಲಪ್ಪಾ ಗಡಮಿ,ಬಸಯ್ಯ ಅಂಬಲಗಿ,ರೇವಣ್ಣಸಿದ್ಧಯ್ಯ ಮಠಪತಿ, ಪ್ರಕಾಶ ಡಾಂಗೆ, ಗಣ್ಯರಾದ ಶರದ ಘಂಟೋಜಿ, ಚಂದ್ರಕಾಂತ ನಾರಾಯಣಪೇಟ, ರವಿ ಲಿಂಗಣ್ಣಿ, ಸಂಯೋಜಕ ಬಸವರಾಜ ಮಂಕಲ್, ಚನ್ನಪ್ಪಾ ಅಂಬಲಗಿ,ರವೀಂದ್ರ ಶೀರಮುಂಡಿ,ವಿಜಯಕುಮಾರ ನಂದಿಕೋಲ ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.

ವರದಿ – ಸಂಗಮೇಶ ಎನ್ ಜವಾದಿ.

Leave a Reply

Your email address will not be published. Required fields are marked *