ಯುವಜನರು ತಾಂತ್ರಿಕ ಶಿಕ್ಷಣವನ್ನು ಅಭ್ಯಾಸ ಮಾಡಿ ಎಂಜಿನಿಯರಿಂಗ್ ಕೌಶಲ್ಯದ ಮೂಲಕ ಸಧೃಡ ಸ್ವಾಭಿಮಾನಿ ಭಾರತದ ನಿರ್ಮಾಣಕ್ಕೆ ಮುಂದಾಗಬೇಕು…..

Spread the love

ಯುವಜನರು ತಾಂತ್ರಿಕ ಶಿಕ್ಷಣವನ್ನು ಅಭ್ಯಾಸ ಮಾಡಿ ಎಂಜಿನಿಯರಿಂಗ್ ಕೌಶಲ್ಯದ ಮೂಲಕ ಸಧೃಡ ಸ್ವಾಭಿಮಾನಿ ಭಾರತದ ನಿರ್ಮಾಣಕ್ಕೆ ಮುಂದಾಗಬೇಕು…..

ಯುವಜನರು ತಾಂತ್ರಿಕ ಶಿಕ್ಷಣವನ್ನು ಅಭ್ಯಾಸ ಮಾಡಿ ಎಂಜಿನಿಯರಿಂಗ್ ಕೌಶಲ್ಯದ ಮೂಲಕ ಸಧೃಡ ಸ್ವಾಭಿಮಾನಿ ಭಾರತದ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕೆ.ಆರ್.ಪೇಟೆ ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲರಾದ ಆಶಾಕಾಮತ್ ಮನವಿ ಮಾಡಿದರು ..ಅವರು ಇಂದು ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿ ಪ್ರಥಮ ಸೆಮಿಸ್ಟರ್ ಹಾಗೂ ಲ್ಯಾಟರಲ್ ಪ್ರವೇಶದ ಮೂಲಕ 3ನೇ ಸೆಮಿಸ್ಟರ್ ಗೆ ದಾಖಲಾಗಿರುವ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಅಭಿಶಿಕ್ಷಣ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು… ಯುವಜನರು ಶ್ರದ್ಧಾಭಕ್ತಿ ಹಾಗೂ ಏಕಾಗ್ರತೆಯಿಂದ ವ್ಯಾಸಂಗ ಮಾಡಿದರೆ ಇಂದಿನ ಜಾಗತಿಕ ಜಗತ್ತಿನ ಸ್ಪರ್ಧಾ ಪ್ರಪಂಚವನ್ನು ವಿಜ್ಞಾನ ತಂತ್ರಜ್ಞಾನದ ಪ್ರತಿರೂಪವಾಗಿರುವ ಎಂಜಿನಿಯರಿಂಗ್ ಕೌಶಲ್ಯದ ಮೂಲಕ ಸರ್ವಶ್ರೇಷ್ಠ ಸಾಧನೆಯನ್ನು ಸುಲಭವಾಗಿ ಮಾಡಬಹುದಾಗಿದೆ. ತಮ್ಮ ಶಿಸ್ತು, ಬದ್ಧತೆ ಹಾಗೂ ಎಂಜಿನಿಯರುಗಳಲ್ಲಿಯೇ ಮಾದರಿಯಾಗಿ ಕೆಲಸ ಮಾಡಿ ವಿಶ್ವಮಟ್ಟದ ಖ್ಯಾತಿಯನ್ನು ಗಳಿಸಿರುವ ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರಂತೆಯೇ ಆದರ್ಶ ಎಂಜಿನಿಯರ್ ಆಗಿ ಹೊರಹೊಮ್ಮಲು ಸಾಧ್ಯವಿದೆ. ಪಾಲಿಟೆಕ್ನಿಕ್ ತಾಂತ್ರಿಕ ವ್ಯಾಸಂಗವು ಯುವಜನರು ಸ್ವಾವಲಂಭಿ ಜೀವನ ನಡೆಸಲು ವರದಾನವಾಗಿದೆ. ಗುಣಮಟ್ಟದ ಶಿಕ್ಷಣ ಹಾಗೂ ಬೋಧನೆಗೆ ನಾಡಿನಾದ್ಯಂತ ಪ್ರಖ್ಯಾತವಾಗಿರುವ ಕೆ.ಆರ್.ಪೇಟೆಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಜನರನ್ನು ಭವಿಷ್ಯದ ಎಂಜಿನಿಯರುಗಳನ್ನು ತಯಾರಿಸಿ ನಾಡಿಗೆ ಕೊಡುಗೆಯಾಗಿ ನೀಡುತ್ತಿದೆ ಎಂದು ಆಶಾಕಾಮತ್ ಅಭಿಮಾನದಿಂದ ಹೇಳಿದರು.. ಅಭಿಶಿಕ್ಷಣ ತರಭೇತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಪುರಸಭೆಯ ಮಾಜಿಸದಸ್ಯ ಕೆ.ಆರ್.ನೀಲಕಂಠ ಮಾತನಾಡಿ ಕೆ.ಆರ್.ಪೇಟೆ ತಾಲೂಕಿನ ಕೀರ್ತಿಯನ್ನು ನಾಡಿನಾದ್ಯಂತ ಬೆಳಗಿರುವ ಪಾಲಿಟೆಕ್ನಿಕ್ ಕಾಲೇಜು ಆರಂಭವಾಗಿ 61ವರ್ಷಗಳನ್ನು ಸಂಪೂರ್ಣಗೊಳಿಸಿ ಮುನ್ನಡೆಯುತ್ತಿದ್ದು ಸಾವಿರಾರು ಎಂಜಿನಿಯರುಗಳನ್ನು ನಾಡಿಗೆ ಕೊಡುಗೆಯಾಗಿ ನೀಡಿದೆ. ಗ್ರಾಮೀಣ ಪ್ರದೇಶದ ಬಡ ರೈತಾಪಿವರ್ಗದ ಜನರ ಮಕ್ಕಳು ಕೂಡ ನಮ್ಮ ತಾಲೂಕಿನಲ್ಲಿ ಪಾಲಿಟೆಕ್ನಿಕ್ ಕಾಲೇಜು ಇರುವುದರಿಂದಾಗಿ ತಾಂತ್ರಿಕ ಶಿಕ್ಷಣವನ್ನು ಉಚಿತವಾಗಿ ಪಡೆಯಲು ಸಾಧ್ಯವಾಗಿದೆ. ಯುವಜನರು ತಾಂತ್ರಿಕ ಜ್ಞಾನವನ್ನು ಪಡೆದುಕೊಂಡು ಸುಭದ್ರವಾದ ಸಮಾಜವನ್ನು ಕಟ್ಟಲು ತಮ್ಮ ಎಂಜಿನಿಯರಿಂಗ್ ಕೌಶಲ್ಯವನ್ನು ಸದ್ಬಳಕೆ ಮಾಡಿಕೊಂಡು ಮುನ್ನಡೆಯಬೇಕು ಎಂದು ಕರೆ ನೀಡಿದರು… ಕಾಲೇಜಿನ ವಿವಿಧ ವಿಭಾಗಗಳ ವಿಭಾಗಾಧಿಕಾರಿಗಳಾದ ವಿಜಯ, ನಾಗೇಶ್, ದೊರೆಸ್ವಾಮಿ, ಮಹಾಲಿಂಗೇಗೌಡ, ಮಹಿಳಾ ಸಂರಕ್ಷಣಾ ಘಟಕದ ರಾಧಮ್ಮ, ಶಿವಕುಮಾರ್, ಹೇಮಾವತಿ, ವನಿತಾ ಮತ್ತು ಸುನೀತ ಹಾಗೂ ವಿದ್ಯಾರ್ಥಿಗಳ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  ವರದಿ.ಸೈಯ್ಯದ್ ಖಲೀಲ್ .  ಕೃಷ್ಣರಾಜಪೇಟೆ , ಮಂಡ್ಯ.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *