ನಿಪ್ಪಾಣಿ  ಅಭಿವೃದ್ಧಿಯೊಂದಿಗೆ ಜನಹಿತ ಕಾರ್ಯ ನಿರಂತರ….

Spread the love

ನಿಪ್ಪಾಣಿ  ಅಭಿವೃದ್ಧಿಯೊಂದಿಗೆ ಜನಹಿತ ಕಾರ್ಯ ನಿರಂತರ….

ಇಂದು ನಿಪ್ಪಾಣಿ ನಗರದಲ್ಲಿ, ಕೋವಿಡ್-19 ಪರಿಹಾರಾರ್ಥವಾಗಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕಾರ್ಮಿಕ ಇಲಾಖೆ ವತಿಯಿಂದ ಅಂಗವಿಕಲರಿಗೆ, ಬೂತ್ ಕಮಿಟಿ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ, ಮಹಿಳಾ ಮೋರ್ಚಾ ಸದಸ್ಯರಿಗೆ, ಹೋಮ್ ಗಾರ್ಡ್ ಸಿಬ್ಬಂದಿ, ತೃತೀಯ ಲಿಂಗಿಗಳು ಹಾಗೂ ಆಟೋಚಾಲಕರಿಗೆ 1181 ಆಹಾರ ಸಾಮಾಗ್ರಿಗಳ ಕಿಟ್ ಗಳನ್ನು ಮುಜರಾಯಿ, ಹಜ ಮತ್ತು ವಕ್ಫ್ ಇಲಾಖೆಯ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ ಯವರು ವಿತರಣೆ ಮಾಡಿದರು. ಅಭಿವೃದ್ಧಿ ಕಾರ್ಯಗಳೊಂದಿಗೆ ಜನರ ಹಿತಕಾಪಾಡುವುದು ಕೂಡ ನಮ್ಮ ಜವಾಬ್ದಾರಿ. ಹೀಗಾಗಿ ಕ್ಷೇತ್ರದ ಜನರಿಗೆ ಅಗತ್ಯ ನೆರವು ನೀಡುತ್ತಿದ್ದೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ನಿಪ್ಪಾಣಿ ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸ್ಥಳೀಯ ಮುಖಂಡರು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *