ಸಜ್ಜೆ. ಮೆಕ್ಕೆಜೋಳ. ನವಣೆ ಖರೀದಿ ಕೇಂದ್ರ ಪ್ರಾರಂಭಿಸಲು ರೈತಸಂಘ ಒತ್ತಾಯ.

Spread the love

ಸಜ್ಜೆ. ಮೆಕ್ಕೆಜೋಳ. ನವಣೆ ಖರೀದಿ ಕೇಂದ್ರ ಪ್ರಾರಂಭಿಸಲು ರೈತಸಂಘ ಒತ್ತಾಯ.

ಕೊಪ್ಪಳ:ಅ:4. ಜಿಲ್ಲೆಯಲ್ಲಿ ಸಜ್ಜೆ. ಮೆಕ್ಕೆಜೋಳ. ನವಣೆ ಖರೀದಿ ಕೇಂದ್ರ ತಕ್ಷಣದಿಂದ ಪ್ರಾರಂಭಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಹನುಮಂತಪ್ಪ ಹೊಳೆಯಾಚೆ. ಜಿಲ್ಲಾಧ್ಯಕ್ಷ ಇಸ್ಮಾಯಿಲ್ ನಾಲ್ ಬಂದ್  ಹಾಗೂ ತಾಲೂಕು ಅಧ್ಯಕ್ಷರು ಶ್ರೀನಿವಾಸ್ ಭೋವಿ ನೇತೃತ್ವದಲ್ಲಿ ಸೋಮವಾರ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ  ಮನವಿ ಅರ್ಪಿಸಲಾಯಿತು.  ಬೂದಗುಂಪ ಗ್ರಾಮದಲ್ಲಿ ನಮ್ಮ ಮನೆ ನಮ್ಮ ತೋಟ ಯೋಜನೆಯಡಿ 2006ರಲ್ಲಿ  ಹಕ್ಕು ಪತ್ರದಲ್ಲಿ ತಿದ್ದುಪಡಿ ಮಾಡಿ ವಿತರಿಸಿದ್ದು ಇಲ್ಲಿಯವರೆಗೆ ಅಳತೆ ಮಾಡಿ ಸ್ಥಳ ಗುರುತಿಸಿ ಕೊಟ್ಟಿರುವುದಿಲ್ಲ ತಕ್ಷಣ ಇದರ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಬ್ಬಲ್ಗುಡ್ಡ ಗ್ರಾಮ ಘಟಕದ ಅಧ್ಯಕ್ಷ ಸುರೇಶ್ ಈಳಿಗೆರ. ರೈತ ಸಂಘದ ತಿಮ್ಮಣ್ಣ ಅರಸನಕೇರಿ.ರವಿ. ಮಂಜುನಾಥ್ ಅರಸನಕೇರಿ. ಬಸವರಾಜ್ ಸಂಘಟಿ ಅರಸನಕೇರಿ. ಪಂಪಾಪತಿ ಶಹಾಪುರ್. ರಾಮಣ್ಣ ಹೊಸೂರು. ನಾಗಲಿಂಗಪ್ಪ ಹೊಸಪೇಟೆ. ಮಲ್ಲಿಕಾರ್ಜುನ್ ಇಂದರಗಿ. ದುರ್ಗಪ್ಪ ಬಡಗಿ ಹಾಗೂ ಬೂದಗುಂಪ ಗ್ರಾಮದ ರೈತ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು

ವರದಿ – ಎಸ್..ಗಫಾರ್. ಕೊಪ್ಪಳ.

Leave a Reply

Your email address will not be published. Required fields are marked *