ಲಖೀಂಪುರದಲ್ಲಿ ಪ್ರತಿಭಟನಾ ನಿರತ ರೈತರ ಸಾವು. ರೈತ ಸಂಘ ಖಂಡನೆ.

Spread the love

ಲಖೀಂಪುರದಲ್ಲಿ ಪ್ರತಿಭಟನಾ ನಿರತ ರೈತರ ಸಾವು. ರೈತ ಸಂಘ ಖಂಡನೆ.

ಕೊಪ್ಪಳ.ಅ.4. ಲಖೀಂಪುರದಲ್ಲಿ  ಸಚಿವರ ವಾಹನ ಹರಿದು ರೈತರ ಸಾವು ಆಗಿರುವುದನ್ನು ಖಂಡಿಸಿ ಕೊಪ್ಪಳ ಜಿಲ್ಲಾ ರೈತ ಸಂಘದಿಂದ ಖಂಡಿಸಿ ಪಡಿಸಲಾಯಿತು. ನರ ಹತ್ಯೆಯನ್ನು ನಡೆಸಿದ ಸಚಿವರ ಬೆಂಗಾವಲು ವಾಹನ ರೈತರು ಸಾವಿಗೀಡಾಗಿದ್ದಾರೆ.  ಸೋಮವಾರ ಕೊಪ್ಪಳದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿಗಳಾದ ಹನುಮಂತಪ್ಪ ಹೊಳೆಯಾಚೆ ಯವರು ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ರೈತರ ಬಗ್ಗೆ ಕಿಂಚಿತ್ತು ಗೌರವವಿಲ್ಲದ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳ ಕೂಗುತ್ತಾ ಕೇಂದ್ರ ಸರ್ಕಾರಕ್ಕೆ ರೈತರನ್ನು ಕಡೆಗಣಿಸಿರುವುದನ್ನು ಖಂಡಿಸಿ ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದು ಹಿಟ್ಲರ್ ಆಡಳಿತ ವೆಂದು ಮೋದಿ ಸರ್ಕಾರದ ವಿರುದ್ಧ ಗುಡುಗಿದರು ಈ ಸಂದರ್ಭದಲ್ಲಿ ಕೊಪ್ಪಳ ತಾಲೂಕ ಅಧ್ಯಕ್ಷರಾದ ಶ್ರೀನಿವಾಸ್ ಭೋವಿ ಹಾಗೂ ಜಿಲ್ಲಾ ಅಧ್ಯಕ್ಷರಾದ ಇಸ್ಮಾಯಿಲ್ ನಾಲ್ ಬಂದ್. ತಾಲೂಕ ಕಾರ್ಯದರ್ಶಿಗಳಾದ ಶ್ರೀಧರ್ ಗೌಡ ಪೊಲೀಸ್ ಪಾಟೀಲ್. ತಿಮ್ಮಣ್ಣ ಕುರಿ. ಪಂಪಾಪತಿ ಶಹಪುರ್. ಸುರೇಶ್ ಇಳಿಗೆರ್. ಮಂಜುನಾಥ್ ಅರಸನಕೇರಿ. ರವಿ ಅರಸನಕೇರಿ. ಮಲ್ಲಿಕಾರ್ಜುನ್ ಇಂದರಗಿ. ದುರ್ಗಪ್ಪ ಬಡಗಿ. ನಾಗಲಿಂಗಪ್ಪ ಹೊಸಪೇಟೆ. ಫಕೀರಪ್ಪ ದನಕನದೊಡ್ಡಿ.  ರೈತ ಮುಖಂಡರು ಹಾಗೂ ರೈತ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ವರದಿ – ಎಸ್..ಗಫಾರ್. ಕೊಪ್ಪಳ.

Leave a Reply

Your email address will not be published. Required fields are marked *