ಕನಕ ಸಾಹಿತ್ಯ ಸಮ್ಮೇಳನದಲ್ಲಿ ರಾಣಿ ಚೆನ್ನಮ್ಮ ಸದ್ಭವನ ಪ್ರಶಸ್ತಿಗೆ ಹನುಮಮ್ಮ ಆಯ್ಕೆ…

Spread the love

ಕನಕ ಸಾಹಿತ್ಯ ಸಮ್ಮೇಳನದಲ್ಲಿ ರಾಣಿ ಚೆನ್ನಮ್ಮ ಸದ್ಭವನ ಪ್ರಶಸ್ತಿಗೆ ಹನುಮಮ್ಮ ಆಯ್ಕೆ…

ಕನಕಗಿರಿ ತಾಲೂಕಿನ ನವಲಿ ತಾಂಡಾ ಗ್ರಾಮದ ಸಮಾಜ ಸೇವಕ ಹಾಗೂ ಅಂಗನವಾಡಿ ಕಾರ್ಯಕರ್ತೆ ಹನುಮಮ್ಮ ಮಂಜುನಾಥ್ ಅವರು ಕಳೆದ ವರ್ಷದಿಂದ ಕರೋನಾ ಸಂದರ್ಭದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ನಿರಾಶ್ರಿತರಿಗೆ ಅನಾಥರಿಗೆ ಸಂಘ-ಸಂಸ್ಥೆಗಳಿಗೆ ಪೊಲೀಸ್ ಠಾಣೆ ಆರೋಗ್ಯ ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಿಬ್ಬಂದಿಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಐದು ಸಾವಿರಕ್ಕೂ ಹೆಚ್ಚು ಮಾಸ್ ವಿತರಿಸಿ ಇನ್ನು ಹಲವಾರು ರೀತಿಯ ಬಡವರಿಗೆ ಉಚಿತವಾಗಿ ವಿತರಿಸಿ ಮಾನವತೆ ಮೆರೆದಿದ್ದಾರೆ ಇವರಿಗೆ ಸಮಾಜ ಸೇವಾ ಪ್ರಶಸ್ತಿ ಲಭಿಸಿದೆ ಕನಕಶ್ರೀ ಪ್ರಕಾಶ್ ಬ್ಯಾಕೋಡ ಲಕ್ಕಮ್ಮದೇವಿ ಕಲಾಪೋಷಕರು ಸಂಘ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ ಸಪ್ಟಂಬರ್ 28 ರಂದು ಧಾರವಾಡ ರಂಗಾಯಣ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶ್ರೀಮತಿ ಹನುಮಮ್ಮ ಮಂಜುನಾಥ್ ರವರಿಗೆ ರಾಣಿ ಚೆನ್ನಮ್ಮ ಸದ್ಭಾವನಾ ಪ್ರಶಸ್ತಿ ನೀಡಿ ಗೌರವಿಸಲಾಗಿದೆ…

Leave a Reply

Your email address will not be published. Required fields are marked *