ಕೂಡ್ಲಿಗಿ:ತಾಲೂಕಿನಾದ್ಯಂತ ಸಾಂಪ್ರದಾಯಿಕ ಸರಳ ಶ್ರೀಗಣೇಶೋತ್ಸವ-

Spread the love

ಕೂಡ್ಲಿಗಿ:ತಾಲೂಕಿನಾದ್ಯಂತ ಸಾಂಪ್ರದಾಯಿಕ ಸರಳ ಶ್ರೀಗಣೇಶೋತ್ಸವ

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನೆಲ್ಲೆಡೆ,ಸಾರ್ವಜನಿಕ ಸಾಂಪ್ರದಾಯಿಕ ಶ್ರೀಗಣೇಶೋತ್ಸವ ಜರುಗಿಸಲಾಗಿದೆ.ಕೋವಿಡ್ ನಿಯಮ ಪಾಲಿಸುವ ನಿಯಮ ಪಾಲನೆಯಂತೆ,ಪಟ್ಟಣ ಸೇರಿದಂತೆ  ತಾಲೂಕಿನಾಧ್ಯಂತ ಧಾರ್ಮಿಕ ಶ್ರದ್ಧಾಭಕ್ತಿಯೊಂದಿಗೆ ಸರಳವಾಗಿ ಶ್ರೀಗಣೇಶೋತ್ಸವ ಆಚರಿಸಲಾಗಿದೆ. ಮಹಿಳೆಯರು ಹಾಗೂ ವೃದ್ಧರ ನೆರವಿನೊಂದೆಗೆ ಬ‍ಾಲಕರು ಸಹಜವಾಗಿ  ಗಲ್ಲಿ ಗಲ್ಲಿಗಳಲ್ಲಿ ಗಣೇಶೋತ್ಸವ ಆಚರಿಸಿದ್ದಾರೆ, ಕೂಡ್ಲಿಗಿ ಪಟ್ಟಣದ ನಾಗರೀಕ ಹಿತರಕ್ಷಣ ವೇದಿಕೆಯಿಂದ ಪ್ರತಿಷ್ಠಾಪಿಸಿರುವ  ಶ್ರೀಗಣೇಶನನ್ನು. ಕೋವಿಡ್ ನಿಯಮದಂತೆ  ಸಾಮೂಹಿಕ ಸರಳ ಗಣೇಶೋತ್ಸವ ಆಚರಿಸಲ‍ಾಯಿತು,ನಾಗರೀಕ ಹಿತರಕ್ಷಣ ವೇದಿಕೆ ಪದಾಧಿಕಾರಿಗಳು  ಹಾಗೂ ಹಿರಿಯ ನಾಗರೀಕರು ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕೋವಿಡ್ ನಿಯಮ ಪಾಲನೆ ಕಡ್ಡಾಯ ಜಾರಿ ಹಿನ್ನಲೆಯಲ್ಲಿ,ಶ್ರೀಗಣೇಶೋತ್ಸವ ನೆಪದಲ್ಲಿ ಆಚರಿಸುವ ಡ್ಯಾನ್ಸ್ ಹಾಗೂ ಸಾಂಸ್ಕೃತಿಕ ಆಚರನೆಣೆಗಳಿಗೆ ಬ್ರೇಕ್ ಬಿದ್ದಿದೆ,ಸರಳ ಸಾಂಪ್ರದಾಯಿಕ ಮೂರು ದಿನಗಳ ಉತ್ಸವಕ್ಕೆ ತಾಲೂಕಿನೆಲ್ಲೆಡೆ ಸೆ12ರಂದು ತೆರೆಬಿದಿದ್ದೆ.✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Leave a Reply

Your email address will not be published. Required fields are marked *