ನಿಧನ ವಾರ್ತೆ ಜಿ.ಲಕ್ಷ್ಮೀ ಪಾಲಪ್ಪ, ನಿವೃತ್ತ ಮುಖ್ಯೋಪಾಧ್ಯಾಯರು- ಮೊರಬನಹಳ್ಳಿ..

Spread the love

ನಿಧನ ವಾರ್ತೆ ಜಿ.ಲಕ್ಷ್ಮೀ ಪಾಲಪ್ಪ, ನಿವೃತ್ತ ಮುಖ್ಯೋಪಾಧ್ಯಾಯರುಮೊರಬನಹಳ್ಳಿ..

ವಿಜಯನಗರ  ಜಿಲ್ಲೆ ಕೂಡ್ಲಿಗಿ ತಾಲೂಕು ಮೊರಬನಹಳ್ಳಿ ಗ್ರಾಮದ ವಾಲ್ಮೀಕಿ ಸಮುದಾಯದ ಹಿರಿಯರು,ನಿವೃತ್ತ ಮುಖ್ಯೋಪಾಧ್ಯಾಯರಾದ  ಜಿ.ಲಕ್ಷ್ಮೀಪಾಲಪ್ಪ(75)ರವರು. ಸೆ9ರಂದು ರಾತ್ರಿ 9ಗಂಟೆಗೆ ಕೂಡ್ಲಿಗಿ ಪಟ್ಟಣದ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ,ಅವರು ಹಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತಿದ್ದರು. ಮೃತರು ಪತ್ನಿ,ಮೂವರು ಪುತ್ರಿಯರು,ಇಬ್ಬರು ಪುತ್ರರನ್ನು, ಅಪಾರ ಬಂಧು ಹಾಗೂ ಬಳಗವನ್ನು ಅಗಲಿದ್ದಾರೆ.ಅವರು ಪ್ರೌಢಶಾಲಾ ವಿಭಾಗದಲ್ಲಿ ಆಂಗ್ಲಭಾಷೆ ಹಾಗೂ ವಿಜ್ಞಾನ ವಿಷಯದಲ್ಲಿ  ಉಪಾಧ್ಯಾಯರಾಗಿದ್ದರು. ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕುಂಚೂರು, ಬಳ್ಳಾರಿಯ ಕುರುಗೋಡು,ಜೋಗಿಹಳ್ಳಿ,ಬಣವಿಕಲ್ಲು,ಕೂಡ್ಲಿಗಿ,ಹಿರೇಹೆಗ್ಡಾಳು ಗ್ರ‍ಾಮದಲ್ಲಿ ಹಾಗೂ ಇದಕ್ಕೂ ಮುನ್ನ ಬೇರೆ ಜಿಲ್ಲೆಗಳಲ್ಲಿ ತಮ್ಮ ಕರ್ಥವ್ಯ ನಿರ್ವಹಿಸಿದ್ದಾರೆ.ಅವರು ಹದಿನೈದು ವರ್ಷಗಳ ಹಿಂದೆ ಹಿರೇಹೆಗ್ಡಾಳು ಗ್ರಾಮದ ಪ್ರೌಢಶಾಲೆಯಲ್ಲಿ, ಮುಖ್ಯೋಪಾಧ್ಯಾಯರಾಗಿ ಕೆಲ ವರ್ಷಗಳ ಕಾಲ ಕರ್ಥವ್ಯ ನಿರ್ವಹಿಸಿ ನಂತರ ವಯೋ ನಿವೃತ್ತಿ ಹೊಂದಿದ್ದರು. ಸಂತಾಪ-ಜಿ.ಲಕ್ಷ್ಮೀಪಾಲಪ್ಪರ ಅಗಲಿಕೆಗೆ ಕೂಡ್ಲಿಗಿ ತಾಲೂಕಿನ ವಾಲ್ಮೀಕಿ ಸಮುದಾಯದ ಹಿರಿಯರು,ವಿವಿದ ಸಮುದಾಯಗಳ ಮುಖಂಡರು,ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು,ವಿವಿದ ಪಕ್ಷಗಳ ಮುಖಂಡರು,ಸರ್ಕಾರಿ ನೌಕರರ ಸಂಘ ಹಾಗೂ ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು. ವಿವಿದ ಜನ ಪ್ರತಿನಿಧಿಗಳು, ಮುಖ್ಯೋಪಾಧ್ಯಾಯರ ಬಳಗ ಹಾಗೂ ಅವರ ಸ್ನೇಹ ಬಳಗ. ಕೂಡ್ಲಿಗಿ ಪಟ್ಟಣದ ಸರ್ಕಾರಿ ಸಂಯುಕ್ತ ಪದ ವಿಪೂರ್ವ ಕಾಲೇಜಿನ ಹಳೇ ವಿದ್ಯಾರ್ಥಿಗಳು, ಹಾಗೂ ಜಿಲ್ಲೆಯ ವಿವಿದ ಭಾಗದ ಅವರ ಶಿಷ್ಯಬಳಗ ಅವರ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ. nಅಂತ್ಯಕ್ರಿಯೆ- ಮೃತರ ಅಂತ್ಯ ಕ್ರಿಯೆ ಸೆ10ರಂದು ಶುಕ್ರವಾರದಂದು ಮಧ್ಯಾಹ್ನ 1ಗಂಟೆಗೆ,ಅವರ ಸ್ವಗ್ರಾಮ ಕೂಡ್ಲಿಗಿ ತಾಲೂಕಿನ ಮೊರಬನಹಳ್ಳಿ ಗ್ರಾಮದಲ್ಲಿ ಜರುಗಲಿದೆ.✍️ ವಂದೇ  ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Leave a Reply

Your email address will not be published. Required fields are marked *