ಕೂಡ್ಲಿಗಿ:ಅಪರಚಿತ ವ್ಯಕ್ತಿಯ ಶವ ಪತ್ತೆ,ವಿಳಾಸ ಪತ್ತೆಗಾಗಿ ಪ್ರಕಟಣೆ…….

Spread the love

ಕೂಡ್ಲಿಗಿ:ಅಪರಚಿತ ವ್ಯಕ್ತಿಯ ಶವ ಪತ್ತೆ,ವಿಳಾಸ ಪತ್ತೆಗಾಗಿ ಪ್ರಕಟಣೆ…….

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಮೊರಬನಳ್ಳಿ ಕ್ರಾಸ್ ಬಳಿ,ರಾಷ್ಟ್ರೀಯ ಹೆದ್ದಾರಿ50 ಕರೇಕಲ್ ಬಗಡಿಯಲ್ಲಿ. ಸೆ8ರಂದು ‍ಅಂದಾಜು 45ವರ್ಷದ  ಅಪರಿಚಿತ ವ್ಯಕ್ತಿ ಅಪಘಾತಕ್ಕೀಡಾಗಿ ಮೃತಪಟ್ಟಿರುವ ರೀತಿಯಲ್ಲಿ, ಅಪರಿಚಿತ ಶವ ಪತ್ತೆಯಾಗಿರುತ್ತದೆ ಎಂದು ಕೂಡ್ಲಿಗಿ ಸಿಪಿಐ ವಸಂತ ಅಸೋದೆಯವರು ತಿಳಿಸಿದ್ದಾರೆ. ಮೇಲ್ನೋಟಕ್ಕೆ ಮೃತವ್ಯಕ್ತಿ ಮಾನಸಿಕ ಅಸ್ವಸ್ಥನೋ ಅಥವಾ ಬಿಕ್ಷುಕನೋ ಆಗಿದ್ದಾನೆಂದು ತಿಳಿಯಬಹುದೆಂದು, ಆತನು ನಡೆದು ಕೊಂಡು ತೆರಳುವಾಗ ಯಾವುದೋ ವಾಹನ ಈತನಿಗೆ ಡಿಕ್ಕಿ ಹೊಡೆದಿದ್ದು ಪರಿಣಾಮ  ತಲೆ ಹಾಗೂ ಕಾಲು ತೀವ್ರ ಹಾನಿಗೊಳಗಾಗಿದ್ದು ಮೃತಪಟ್ಟಿದ್ದಾನೆ ಎಂದು ತಿಳಿದು ಬರುತ್ತಿದೆ ಎಂದು ಅವರು ತಿಳಿಸಿದ್ದಾರೆ.ಈ ಸಂಬಂದಿಸಿದಂತೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಮೃತ ವ್ಯಕ್ತಿಯ ಶವವನ್ನು ಪೊಲೀಸರು ಪರಿಶೀಲಿಸಲಾಗಿ ಮೃತ ವ್ಯೆಕ್ತಿಗೆ ಯಾವುದೋ ವಾಹನ ರಭಸವಾಗಿ ಡಿಕ್ಕಿ ಹೊಡೆದು ನಿಲ್ಲಿಸದೇ ಹಾಗೆಯೇ ಹೋಗಿರಬಹುದೆಂದು ಮೃತನ ಹೆಸರು ವಿಳಾಸ ಪತ್ತೆಯಾಗದೇ ಇರುವ ಕಾರಣ.ಮೃತ ವ್ಯಕ್ತಿಯ ವಿಳಾಸ ಪತ್ತೆಗಾಗಿ ಕೂಡ್ಲಿಗಿ ಸಿಪಿಐ ವಸಂತ ಅಸೋದೆಯವರು ಪ್ರಕಟಣೆ ನೀಡಿದ್ದು,ಚಹರೆ ಹಾಗೂ ವಿವರ ಗಳಿಂದ ಮೃತ ವ್ಯಕ್ತಿಯ  ವಿಳಾಸ ಅಥಾವ ಮಾಹಿತಿ ಯಾರಿಗಾದರೂ ತಿಳಿದು ಬಂದಲ್ಲಿ.ಕೂಡಲೇ ಕೂಡ್ಲಿಗಿ ಪೊಲೀಸ್ ಠಾಣೆ ಅಥವಾ ಹತ್ತಿರದ ಪೊಲೀಸ್ ಠಾಣೆಯನ್ನ ಸಂಪರ್ಕಿಸಿ,ಅಗತ್ಯ ಮಾಹಿತಿ ನೀಡಿ ವಿಳಾಸ ಪತ್ತೆಗೆ ನೆರವು ನೀಡಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-

Leave a Reply

Your email address will not be published. Required fields are marked *