“ಅಭಿವೃದ್ಧಿಯೇ ಬಿಜೆಪಿಯ ಮೂಲ ಮಂತ್ರ, ಜನಪರ ಯೋಜನೆಗಳೇ ಆಡಳಿತ ಸೂತ್ರ”

Spread the love

ಅಭಿವೃದ್ಧಿಯೇ ಬಿಜೆಪಿಯ ಮೂಲ ಮಂತ್ರ, ಜನಪರ ಯೋಜನೆಗಳೇ ಆಡಳಿತ ಸೂತ್ರ

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ, ಇಂದು ಭಾರತೀಯ ಜನತಾ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ “ಪ್ರಣಾಳಿಕೆ ಬಿಡುಗಡೆ” ಸಮಾರಂಭದಲ್ಲಿ ಮುಜರಾಯಿ, ಹಜ ಮತ್ತು ವಕ್ಫ್ ಇಲಾಖೆಯ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ ಯವರು ಭಾಗವಹಿಸಿ, ಕುಂದಾನಗರಿಯ ಸರ್ವತೋಮುಖ ಅಭಿವೃದ್ಧಿಯನ್ನೇ ಮೊದಲ ಆದ್ಯತೆಯಾಗಿರಿಸಿಕೊಂಡ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು. ಈ ಸಮಾರಂಭದಲ್ಲಿ ರಾಜ್ಯಸಭೆ ಸದಸ್ಯರಾದ ಶ್ರೀ ಈರಣ್ಣ ಕಡಾಡಿ ಜಿ, ಮಾಜಿ ಉಪಮುಖ್ಯಮಂತ್ರಿಗಳಾದ ಶ್ರೀ‌ ಲಕ್ಷ್ಮಣ ಸವದಿ ಜಿ, ವಿಧಾನ ಪರಿಷತ್ ಮುಖ್ಯ ಸಚೇತಕರಾದ ಶ್ರೀ ಮಹಾಂತೇಶ ಕವಟಗಿಮಠ ಜಿ, ಶಾಸಕರಾದ ಅಭಯ ಪಾಟೀಲ ಜಿ, ಶ್ರೀ ಅನಿಲ ಬೆನಕೆ ಜಿ, ಶ್ರೀ ಮಹೇಶ ಕುಮಠಳ್ಳಿ ಜಿ, ಬೆಳಗಾವಿ ಚುನಾವಣೆ ಉಸ್ತುವಾರಿಗಳಾದ ಶ್ರೀ ಸತೀಶ್ ರೆಡ್ಡಿ ಜಿ, ಗ್ರಾಮೀಣ ಅಧ್ಯಕ್ಷರಾದ ಶ್ರೀ  ಸಂಜಯ ಪಾಟೀಲ,ಶ್ರೀ ಶಶಿಕಾಂತ ಪಾಟೀಲ, ಗಣ್ಯರು, ಸ್ಥಳೀಯ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ~ ಮಹೇಶ ಶರ್ಮಾ

Leave a Reply

Your email address will not be published. Required fields are marked *