17ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸಿದ ವೀರಯೋಧ ಶ್ರೀ ಸತ್ಯಪ್ಪ ಲಕ್ಷ್ಮಣ ಚಿಗತಂ….

Spread the love

17ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸಿದ ವೀರಯೋಧ ಶ್ರೀ ಸತ್ಯಪ್ಪ ಲಕ್ಷ್ಮಣ ಚಿಗತಂ….

ದೇಶಸೇವೆಯೇ ಈಶಸೇವೆ ಎಂದು ಭಾವಿಸಿ ಸೇನೆಯಲ್ಲಿ ಸೇವೆ ಸಲ್ಲಿಸಿದ ವೀರಯೋಧ ಶ್ರೀ ಸತ್ಯಪ್ಪ ಲಕ್ಷ್ಮಣ ಚಿಗತಂ ಇವರು ವಡ್ರಾಳ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ವಡ್ರಾಳದಲ್ಲಿ ಮುಗಿಸಿ, ಮಾಧ್ಯಮಿಕ ಶಿಕ್ಷಣವನ್ನು ಮಜಲಟ್ಟಿಯಲ್ಲಿ ಮುಗಿಸಿ ನಂತರ ಪದವಿ ಶಿಕ್ಷಣವನ್ನು ಬಸವಪ್ರಭು ಕೋರೆ ಕಾಲೇಜಿನಲ್ಲಿ ಓದುತ್ತಿದ್ದಾಗಲೇ  ಬಡತನ ಕಾರಣದಿಂದ ಸೇನೆಯಲ್ಲಿ ಭರ್ತಿ ಹೊಂದಿ 14 ಮದ್ರಾಸ್ ರೆಜಿಮೆಂಟ್ ನಲ್ಲಿ ಸೇರಿ.ಜಮ್ಮುಕಾಶ್ಮೀರ, ಪಂಜಾಬ್.ಉತ್ತ್ರಾಂಚಲ, ಸಿಕ್ಕಿಂ, ರಾಜಸ್ಥಾನ್ ಮುಂತಾದ ಸ್ಥಳಗಳಲ್ಲಿ ನಿರಂತರ 17ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸಿದ ಸಂದರ್ಭದಲ್ಲಿ ರೇಲ್ವೆ ಸ್ಟೇಷನ್ ನಲ್ಲಿ ಶಿಕ್ಷಕರಾದ ಶ್ರೀ ರಾಮಪ್ಪ ಮಾದೆಳ್ಳಿ, ವಕೀಲರಾದ ಶ್ರೀ.ಸಂತೋಷ ಭಡಗಾಂ ,ರಾಜು ಮಾದೆಳ್ಳಿ,ರಾಜು ಶಿರಗನ್ನವರ ಕೊಟ್ರೆ ವಕೀಲರು ಅವರು ಶಾಲು ಹೊದಿಸಿ,ಮಾಲೆ ಹಾಕಿ ಸನ್ಮಾನಿಸಿ ಬರಮಾಡಿಕೊಂಡರು. ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *