ನಿವೃತ್ತಿ ಅರಣ್ಯ ರಕ್ಷಕನಿಗೆ ಶ್ರೀ ತ್ರಿಲಿಂಗೇಶ್ವರ ವಿದ್ಯಾವರ್ಧಕ ಸಮಿತಿಯವರಿಂದ ಸನ್ಮಾನ ಸಮಾರಂಭ..

Spread the love

 ನಿವೃತ್ತಿ ಅರಣ್ಯ ರಕ್ಷಕನಿಗೆ ಶ್ರೀ ತ್ರಿಲಿಂಗೇಶ್ವರ ವಿದ್ಯಾವರ್ಧಕ ಸಮಿತಿಯವರಿಂದ ಸನ್ಮಾನ ಸಮಾರಂಭ…

ಯಲಬುರ್ಗಾ ತಾಲೂಕು. ಮುಧೋಳ ಗ್ರಾಮದಲ್ಲಿ ಶ್ರೀ ತ್ರಿಲಿಂಗೇಶ್ವರ ವಿದ್ಯಾವರ್ಧಕ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ್ ಹನುಮಂತರಾವ್ ದೇಸಾಯಿ ಮತ್ತು ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಚೆನ್ನಬಸಪ್ಪ ರೆಡ್ಡೆರ ಅವರು ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಯ ಮುಂದೆ ಗಿಡ ಬೆಳೆಸುವುದು, ಹಾಗೂ ನಮ್ಮೂರಿನ ಶಾಲೆಯ ಆವರಣದಲ್ಲಿ ಗಿಡ ನೆಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಮಾತನಾಡಿದರು ಹಾಗೂ ನಮ್ಮೂರಿನ ವೀರಭದ್ರಪ್ಪ ಹಾದಿಮನಿ ಇವರು ಗೋವಾರಾಜ್ಯದಲ್ಲಿ ಅರಣ್ಯ ರಕ್ಷಕ ರಾಗಿ ಸೇವೆ ಸಲ್ಲಿಸಿದ್ದಾರೆ ಇವರಿಗೆ ಹಸಿರೇ ಉಸಿರು ತಂಡದವರಿಗೆ ಹಾಗೂ ಅರಣ್ಯ ರಕ್ಷಕನಿಗೆ ನಿವೃತ್ತಿ ಸನ್ಮಾನ ಕೈಗೊಂಡಿದ್ದರು. ಇವರು ಗ್ರಾಮದ ಅವರೆಲ್ಲರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅವರ ಸೇವೆಗೆ ಶ್ರೇಯಸ್ಸು ಸಿಗಲಿ ಎಂದು ಎಲ್ಲರೂ ಶುಭ ಹಾರೈಸಿದರು.  ಈ ಸಂದರ್ಭದಲ್ಲಿ ಶ್ರೀ ಶ್ರೀ ಲಿಂಗೇಶ್ವರ ವಿದ್ಯಾವರ್ಧಕ ಸಮಿತಿಯ ಸದಸ್ಯರಾದ ಡಾ! ಅಂದಾನಯ್ಯ ಶಾಡ್ಲಿಗೇರಿಮಠ  ಕಳಕಪ್ಪ ತಮಿನಾಳ ನಾಗಪ್ಪ ಹೋಲಿ ಮುತ್ತಣ್ಣ ಬೆಲ್ಲದ ಈಶಪ್ಪ ಕಮತರ್ ಈಶಪ್ಪ ಜೀವಜಿ ಎಲ್ಲಪ್ಪ ಹುನುಗುಂದ ಕಳಕಪ್ಪ ಕುರಿ ಶಿವಶರಣಪ್ಪ ಬಳೆಗಾರ ಮತ್ತು ಹಸಿರೇ ಉಸಿರು ತಂಡದ ಸರ ಸದಸ್ಯರು ಮತ್ತು ಶ್ರೀ ಶ್ರೀ ಲಿಂಗೇಶ್ವರ ಪ್ರೌಢಶಾಲೆಯ ಶಿಕ್ಷಕ ವೃಂದದವರು ಕಾರ್ಯಕ್ರಮ ನಡೆಸಿಕೊಟ್ಟರು ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಲಕಿಯರ ಶಾಲೆ ಎಲ್ಲಾ ಶಿಕ್ಷಕ ವೃಂದದವರು ಭಾಗವಹಿಸಿದ್ದರು ಹಾಗೂ ಗ್ರಾಮ ಪಂಚಾಯಿತಿ ಸರ್ವ ಸದಸ್ಯರೆಲ್ಲರೂ ಭಾಗಿಯಾಗಿದ್ದರು.

  ವರದಿಹುಸೇನ್ ಮೋತೆಖಾನ್

Leave a Reply

Your email address will not be published. Required fields are marked *