ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಸಿದ ಜನಪ್ರಿಯ ಶಾಸಕರು…..

Spread the love

ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಸಿದ ಜನಪ್ರಿಯ ಶಾಸಕರು…..

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ತಾವರಗೇರಾ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಸಿದ ನಂತರ ಮಾತನಾಡಿದ  ಕುಷ್ಟಗಿ ಕ್ಷೇತ್ರದ ಶಾಸಕರಾದ ಶ್ರೀ ಅಮರೆಗೌಡ ಪಾಟೀಲ ಮುಂದಿನ ದಿನಗಳಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ತಕ್ಕಂತೆ ಸರ್ಕಾರ ಹಲವಾರು ಬದಲಾವಣೆ ತರುತ್ತಿದ್ದು ಅದರಂತೆ ಶಿಕ್ಷಣವು ಕೂಡ ಉನ್ನತ ಉತ್ತಮ ಜ್ಞಾನದತ್ತ ಸಾಗಿದೆ. ಸರ್ಕಾರ ನಿಡುತ್ತಿರುವ ಪ್ರತಿಯೊಂದು ಸೌಲಭ್ಯಗಳನ್ನು ಪಡೆದುಕೊಂಡು ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಜೀವನ ರೂಪಿಸಿಕೊಳ್ಳಬೇಕು ಎಂದರು ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ವಿಕ್ರಮ ರಾಯ್ಕರ್.ಪ.ಪಂ.ಸದಸ್ಯರಾದ ಚಂದ್ರಶೇಖರ್ ನಾಲತವಾಡ, ಸೋಮಶೇಕರ್ ವೈಜಾಪುರ, ಉದ್ಯಮಿ ಬಸವನಗೌಡ ಪಾಟೀಲ, ಮುಖಂಡರಾದ ದುರಗೇಶ ನಾರಿನಾಳ, ರುದ್ರಗೌಡ ಕುಲಕರ್ಣಿ, ಅಮರೇಶ ಗಾಂಜಿ, ಎಂ ಡಿ ಬಾಬು ಇನ್ನಿತರರು ಉಪಸ್ಥಿತರಿದ್ದರು.

  ವರದಿ – ಅಮಾಜಪ್ಪ ಹೆಚ್.ಜುಮಲಾಪೂರ

Leave a Reply

Your email address will not be published. Required fields are marked *