ರಸ್ತೆ ಮಧ್ಯೆ ಕೈ ಕೊಟ್ಟ ಪೋಲಿಸ್ ವಾಹನ  ಕೈಯಾರೆ ಎಳೆದು ರಸ್ತೆ ಬದಿಯಲ್ಲಿ ನಿಲ್ಲಿಸಿದ  ಯಲಬುರ್ಗಾದ “ಬಾಹುಬಲಿ” ಸಿಪಿಐ ನಾಗರೆಡ್ಡಿ….

Spread the love

ರಸ್ತೆ ಮಧ್ಯೆ ಕೈ ಕೊಟ್ಟ ಪೋಲಿಸ್ ವಾಹನ  ಕೈಯಾರೆ ಎಳೆದು ರಸ್ತೆ ಬದಿಯಲ್ಲಿ ನಿಲ್ಲಿಸಿದ  ಯಲಬುರ್ಗಾದಬಾಹುಬಲಿಸಿಪಿಐ ನಾಗರೆಡ್ಡಿ….

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಸರ್ಕಲ್ ಪೋಲಿಸ್ ಠಾಣೆಯ ಸಿಪಿಐ ನಾಗರೆಡ್ಡಿ  ಯಲಬುರ್ಗಾ ತಾಲ್ಲೂಕಿನ ಆಸ್ಪತ್ರೆ ಬಳಿ ರಸ್ತೆ ಮಧ್ಯೆ ಕೆಟ್ಟು ನಿಂತಿದ್ದ ಪೋಲಿಸ್ ವಾಹನ,  ಈ ಸಂದರ್ಭದಲ್ಲಿ ವಾಹನದ ಚಾಲಕ ಮೆಕಾನಿಕ್ರನ್ನು ಕರೆತರಲು ಹೋಗಿದ್ದಾರೆ,  ಈ ಕೋರೋನ್ ಸಮಯದಲ್ಲಿ ರಸ್ತೆ ಮಧ್ಯೆ ನಿಂತಿರುವ ವಾಹನದಿಂದ ಸಾರ್ವಜನಿಕರಿಗೆ ತೊಂದರೆ ಆಗಬಹುದು ಎಂದು ಆಲೋಚನೆ ಮಾಡಿದ ಸಿಪಿಐ ಸಾಹೇಬರು, ತಾವೇ ಸ್ವತಹ ಸಿನಿಮಾದ ರೀತಿಯಲ್ಲಿ “ಬಾಹುಬಲಿ” ಯಂತೆ ತಮ್ಮ ಕೈ ಯಾರೆ ಎಳೆದು ರಸ್ತೆ ಬದಿಯಲ್ಲಿ ನಿಲ್ಲಿಸಿರುವದು ಸಮಾಜಿಕ ಜಾಲತಾಣದಲ್ಲಿ ಸಕತ್ ವಿಡಿಯೋ ವೈರಲ್ ಆಗುತ್ತಿದೆ. ಏನೇ ಇರಲಿ ಪೊಲೀಸ್ ಇಲಾಖೆಗೆ ಮುಖ್ಯವಾಗಿ ಬೇಕಾಗಿರುವುದು ಶಕ್ತಿ, ಜೊತೆಗೆ ಯುಕ್ತಿ, ಹಾಗೂ ಚಾಣಕ್ಷತನ ಇವರಲ್ಲಿ ಕಾಣುತ್ತಿದೆ, ಒಟ್ಟಿನಲ್ಲಿ ಸಮಾಜೀಕವಾಗಿ ಸಮಾಜಸೇವೆಯ ಕಳಕಳಿ ಇವರ ಮನದಲ್ಲಿದ್ದು ಇವರ ಪ್ರತಿ ಹೆಜ್ಜೆಯು ಯಶಸ್ವಿಯಾಗಲಿ ಎನ್ನುವುದೆ ನಮ್ಮ ಆಶಯ .

ವರದಿ – ಅಮಾಜಪ್ಪ ಹೆಚ್.ಜುಮಲಾಪೂರ

Leave a Reply

Your email address will not be published. Required fields are marked *