ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸ್ಪೋಟ; 6 ಮಂದಿಗೆ ಗಾಯ

Spread the love

ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸ್ಪೋಟ; 6 ಮಂದಿಗೆ ಗಾಯ

ಬೆಂಗಳೂರು: ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸ್ಟೋಟ ಸಂಭವಿಸಿದೆ. ಘಟನೆಯಲ್ಲಿ 6 ಜನ ಕೆಲಸಗಾರರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಿಲ್ದಾಣದ ಎರಡನೇ ಟರ್ಮಿನಲ್​ ನಿರ್ಮಾಣ ಕಾಮಗಾರಿ ಕೆಲಸ ಕೆಲ ದಿನಗಳಿಂದ ನಡೆಯುತ್ತಿದೆ. ಹಾಗಾಗಿ ಕೆಳ ಸೇತುವೆಯಲ್ಲಿ ರಾಸಾಯನಿಕ ಡಬ್ಬಿಗಳನ್ನು, ಸಲಕರಣೆಗಳನ್ನು ಇಡಲಾಗಿತ್ತು. ನಿನ್ನೆ (ಭಾನುವಾರ) ರಾಸಾಯನಿಕ ಡಬ್ಬಿಗಳ ಸ್ಟೋಟಗೊಂಡ ಪರಿಣಾಮ ಘಟನೆ ಸಂಭವಿಸಿದೆ. ಕೆಲಸ ಮಾಡುತ್ತಿದ್ದ 6 ಮಂದಿ ಕಾರ್ಮಿಕರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.  ಗಾಯಾಳುಗಳು ಅವಿನಾಶ್​, ಸಿರಾಜ್​, ಪ್ರಶಾಂತ್​, ಗೌತಮ್​, ಅಜಯ್​ಕುಮಾರ್​ ಮತ್ತು ನಾಗೇಶ್​ರಾವ್​ ಎಂದು ತಿಳಿದು ಬಂದಿದೆ. ಸ್ಪೋಟವಾದ ಸಂದರ್ಭದಲ್ಲಿ ಕಾರ್ಮಿಕರ ಕೂಗು ಕೇಳಿ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಬಂದು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಹೊತ್ತಿಉರಿಯುತ್ತಿದ್ದ ಬೆಂಕಿಯನ್ನು ಆರಿಸಿದ್ದಾರೆ. ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆ ದಾಖಲು ಮಾಡಲಾಗಿದೆ. ಸಿರಾಜ್​ ಮತ್ತು ಅವಿನಾಶ್​ಗೆ ಶೇ.40ರಷ್ಟು ಸುಟ್ಟಗಾಯಗಳಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದಾರೆ. ಬೆಂಗಳೂರಿನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ‌ನಿಲ್ಥಾಣಕ್ಕೆ ಆಗಮಿಸುವ ವಾಹನಗಳು ಕಿರಿದಾದ ರಸ್ತೆಯಲ್ಲಿಯೇ ಸಂಚರಿಸುತ್ತಿದ್ದ ಕಾರಣ ಏರ್ಪೋಟ್ ಆವರಣದಲ್ಲಿ 5 ಪಥಗಳ ರಸ್ತೆ ಅಗಲೀಕರಣ ಕಾಮಗಾರಿ ಭರದಿಂದ ನಡೆಯುತ್ತಿದೆ. ಈ ವೇಳೆ ರಸ್ತೆಗೆ ಬಿಳಿ ಪಟ್ಟಿಗಳನ್ನು ಹಚ್ಚಲು ಕಾರ್ಮಿಕರು ನಿನ್ನೆ ಕೆಲಸಕ್ಕೆ ಬಂದಿದ್ದರು. ಬಳಿಯ ಬೇಕಾದ ಬಣ್ಣವನ್ನು ರಾಸಾಯನಿಕಗಳ ಜತೆಗೆ ಮಿಶ್ರಣ ಮಾಡಿ ಸಿಲೆಂಡ್​ ಬಳಸಿ ಕಾಯಿಸುತ್ತಿದ್ದರು, ಈ ವೇಳೆ ಗ್ಯಾಸ್​ ಸೋರಿಕೆಯಾಗಿ ಸಿಲಿಂಡರ್​ ಸ್ಟೋಟಗೊಂಡಿದೆ.

ವರದಿ – ಹರೀಶ ಶೇಟ್ಟಿ ಬೆಂಗಳೂರು

Leave a Reply

Your email address will not be published. Required fields are marked *