ಕುಷ್ಟಗಿ ತಾಲೂಕಿನ ಜುಮಲಾಪುರ ಗ್ರಾಮದ ಹತ್ತಿರಾ ಕಾರು ಮತ್ತು ಭೀಕರಬೈಕ್ ನಡುವೆ ಅಪಘಾತ,  ಬೈಕ್ ಸವಾರ ಸ್ಥಳದಲ್ಲೆ ಸಾವು.

Spread the love

ಕುಷ್ಟಗಿ ತಾಲೂಕಿನ ಜುಮಲಾಪುರ ಗ್ರಾಮದ ಹತ್ತಿರಾ ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ,  ಬೈಕ್ ಸವಾರ ಸ್ಥಳದಲ್ಲೆ ಸಾವು.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಜುಮಲಾಪುರ ಗ್ರಾಮದ ಹತ್ತಿರದಲ್ಲಿ ಬೈಕ್ ಮತ್ತು ಕಾರಿನ ನಡುವೆ ಅಪಘಾತ. ಈ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೆ ಸಾವು. ತಾವರಗೇರಾದಿಂದ ನೇರವಾಗಿ ಮುದೇನೂರು ಹೋಗುವ ರಸ್ತೆಯ ಮಧ್ಯದಲ್ಲಿ ಅಂದರೆ ಇದ್ಲಾಪೂರಯಿಂದ (ಜುಮಲಾಪೂರ) ಹೋಗುವ ಏರು / ಇಳಿತದ ತಿರುವಿನಲ್ಲಿ  ವೇಗವಾಗಿ ಹೋಗುತ್ತಿದ್ದ ಕಾರು ಮತ್ತು ಬೈಕ್  ನಡುವೆ ಬಿರುಸಿನ ಅಪಘಾತದಲ್ಲಿ ಬೈಕ್ ಸವಾರನು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ. ಕಾರು ಸವಾರರು ಕಾರಟಗಿಯಿಂದ ಮುದೆನೂರ ಗ್ರಾಮಕ್ಕೆ ಹೋರಟಿರುವ ಸಂಧರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಮೃತ ಬೈಕ್ ಸವಾರ ಯಲ್ಲಪ್ಪ ನೆರಬೆಂಚಿ ಎಂದು ತಿಳಿದು ಬಂದಿದೆ. ತಲೆಗೆ ಬಲವಾದ ಪೆಟ್ಟು ಬಿದ್ದಿರುವದರಿಂದ  ಸ್ಥಳದಲ್ಲೇ ಬೈಕ್ ಸವಾರನು ಸಾವನ್ನಪ್ಪಿದ್ದಾನೆ.

ಮೃತ ಪಟ್ಟವನ ವಯಸ್ಸು ಸುಮಾರ 30 ಇದ್ದು. ಮೃತಪಟ್ಟ ಯಲ್ಲಪ್ಪನಿಗೆ ಹೆಂಡತಿ ಹಾಗೂ ಮೂರು ಹೆಣ್ಣು ಮಕ್ಕಳ ಇರುವದು ತಿಳಿದು ಬಂದಿದೆ. ಈ ಅಪಘಾತ ನಡೆದ ಸ್ಥಳಕ್ಕೆ ಸ್ಥಳೀಯ ಠಾಣೆಯ ಪೋಲಿಸರು ಹಾಗೂ 112 ಪೋಲೀಸ್ ಇಲಾಖೆಯವರು ಆಗಮಿಸಿ ಸ್ಥಳಿಯ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತಪಟ್ಟ ವ್ಯಕ್ತಿಯನ್ನ ತಾವರಗೇರಾ ಸರ್ಕಾರಿ ಆಸ್ಪತ್ರೆಗೆ ತಗೆದುಕೊಂಡು ಹೋಗಿದ್ದಾರೆ. ಸರ್ಕಾರ ಹಾಗೂ ಪೋಲಿಸರು ಪ್ರತಿ ಸಲ ನಿಮ್ಮ ಜೀವಕ್ಕೊಸ್ಕರ ಪ್ರತಿಯೊಬ್ಬರು ಬೈಕ್ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಎಂದು ಸಾಕಷ್ಟು ಭಾರಿ ಏಚ್ಚರಿಕೆ ನಿಡುತ್ತಿರುತ್ತಾರೆ, ಆದರೆ ಮೃತಪಟ್ಟ ಯಲ್ಲಪ್ಪ ಹೆಲ್ಮೆಟ್ ಧರಿಸದೆ ಪ್ರಯಣ ಮಾಡಿದ್ದು ಈ ಸಾವಿಗೆ ಕಾರಣ. ಭವಿಷ್ಯ ಇಂದು ಆ ಯುವಕ ಹೆಲ್ಮಟ್ ಧರಿಸಿದ್ದರೆ ಆ ಸಾವಿನಿಂದ ಪಾರಾಗಬಹುದಿತ್ತು ಎಂದು ಸಾರ್ವಜನಿಕ ವಲಯದಲ್ಲಿ ಈ ಸುದ್ದಿ ಕೆಳಿ ಬರ್ತಾಯಿದೆ. ಹಾಗಾಗಿ ಪ್ರತಿಯೊಬ್ಬರು ಹೆಲ್ಮೆಟ್ ಧರಿಸಿ ನಿಮ್ಮ ನಿಮ್ಮ ಜೀವ ಕಾಪಾಡಿ ಕೊಳ್ಳಿ.

ವರದಿ – ಅಮಾಜಪ್ಪ ಹೆಚ್.ಜುಮಲಾಪೂರ.

2 thoughts on “ಕುಷ್ಟಗಿ ತಾಲೂಕಿನ ಜುಮಲಾಪುರ ಗ್ರಾಮದ ಹತ್ತಿರಾ ಕಾರು ಮತ್ತು ಭೀಕರಬೈಕ್ ನಡುವೆ ಅಪಘಾತ,  ಬೈಕ್ ಸವಾರ ಸ್ಥಳದಲ್ಲೆ ಸಾವು.

  1. ಕುಷ್ಟಗಿ ತಾಲೂಕಿನ ಜುಮಲಾಪುರ ಗ್ರಾಮದ ಹತ್ತಿರಾ ಕಾರು ಮತ್ತು ಭೀಕರಬೈಕ್ ನಡುವೆ ಅಪಘಾತ, ಬೈಕ್ ಸವಾರ ಸ್ಥಳದಲ್ಲೆ ಸಾವು.✖️❌

    ಕುಷ್ಟಗಿ ತಾಲೂಕಿನ ಜುಮಲಾಪುರ ಗ್ರಾಮದ ಹತ್ತಿರ ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ ಬೈಕ್ ಸವಾರ ಸ್ಥಳದಲ್ಲೇ ಸಾವು.✔️

    ನೀವು ಮಾಡಿರುವ ವರದಿ ಮುಖ್ಯಾಂಶದ ವ್ಯಾಖ್ಯಾನ ತಪ್ಪಾಗಿದೆ ನೋಡಿ ಸಾರ್

Leave a Reply

Your email address will not be published. Required fields are marked *