ರಾಯಚೂರು ಜಿಲ್ಲೆಯ ಸಿಂಧನೂರು ಡಿವೈಎಸ್ಪಿಯಾಗಿ ವೆಂಕಟಪ್ಪ ನಾಯಕ ಅಧಿಕಾರ ಸ್ವೀಕಾರ.

Spread the love

ರಾಯಚೂರು ಜಿಲ್ಲೆಯ ಸಿಂಧನೂರು ಡಿವೈಎಸ್ಪಿಯಾಗಿ ವೆಂಕಟಪ್ಪ ನಾಯಕ ಅಧಿಕಾರ ಸ್ವೀಕಾರ.

ರಾಯಚೂರು ಜಿಲ್ಲೆಯ ಸಿಂಧನೂರು ಉಪ ವಲಯದ ನೂತನ ಡಿವೈಎಸ್ಪಿಯಾಗಿ ವೆಂಕಟಪ್ಪ ನಾಯಕ ಅಧಿಕಾರಿ ಸ್ವೀಕರಿಸಿದರು. ಸಿಂಧನೂರು ನಗರದ ಸುಕಾಲಪೇಟೆಯಲ್ಲಿ ಡಿವೈಎಸ್ಪಿ ಕಚೇರಿಯಲ್ಲಿ ಸಿಂಧನೂರು ಉಪ ವಲಯದ ನೂತನ ಡಿವೈಎಸ್ಪಿಯಾಗಿ ವೆಂಕಟಪ್ಪ ನಾಯಕ ಅವರಿಗೆ ದಕ್ಷ ಪೋಲಿಸ್ ಅಧಿಕಾರಿ ಡಿವೈಎಸ್ಪಿ ವಿಶ್ವನಾಥ ರಾವ್ ಕುಲಕರ್ಣಿ ರವರು ಅಧಿಕಾರ ಹಸ್ತಾಂತರಿಸಿದರು. ವಿವಿಧ ಪಕ್ಷ, ವಿವಿಧ ಸಮಾಜದ ಮುಖಂಡರು ಡಿವೈಎಸ್ಪಿ ಕಚೇರಿಗೆ ಆಗಮಿಸಿ ಡಿವೈಎಸ್ಪಿ ವಿಶ್ವನಾಥ ರಾವ್ ಕುಲಕರ್ಣಿ ರವರೆಗೆ ಸನ್ಮಾನಿಸಿ ಗೌರವಿಸಿ ಬೀಳ್ಕೊಡುಗೆ ಮಾಡಿದರು. ಜೆಡಿಎಸ್ ಪಕ್ಷದ ಮುಖಂಡ ನದೀಮುಲ್ಲಾ ಮಾತನಾಡಿ ವಿಶ್ವನಾಥ ರಾವ್ ಕುಲಕರ್ಣಿ ರವರು ಸಿಂಧನೂರು ಉಪ ವಲಯಕ್ಕೆ ಡಿವೈಎಸ್ಪಿ ರಾಗಿ ಬಂದ ನಂತರ ಅನೇಕ ರೀತಿಯ ಕಾನೂನು ಬಾಹಿರ ಚಟುವಟಿಕೆ ಕಡಿವಾಣ ಹಾಕುವ ಜೊತೆಗೆ ಕೋಮು ಗಲಭೆಗೆ ಆಗದಂತೆ ಎಲ್ಲಾ ಸಮುದಾ‌ ಹಬ್ಬ‌ ಹರಿದಿನಗಳು‌ ಶಾಂತಿಯುತವಾಗಿ ಆಚರಣೆ ಮಾಡುವ ರೀತಿಯಲ್ಲಿ ನೋಡಿಕೊಂಡರು. ಇಂದು ಲೋಕಾಯುಕ್ತಗೆ ವರ್ಗಾವಣೆಯಾಗಿದ್ದು.ಇನ್ನೂ ಹೆಚ್ಚಿನ ರೀತಿಯಲ್ಲಿ ಉನ್ನತ ಹುದ್ದೆಗೆ ಪಡೆಯಲಿ ಎಂದು ಆಶಿಸಿದರು. ಈ ಸಂಧರ್ಭದಲ್ಲಿ ಪಿಎಸ್ಐ ಗಾಳಾದ ವಿಜಯ ಕೃಷ್ಣ, ಎರಿಯಪ್ಪ, ಹುಲಗಪ್ಪ ರಾಠೋಡ, ವೆಂಕಟೇಶ, ಸೇರಿದಂತೆ ಅನೇಕ ಪೋಲಿಸ್ ಸಿಬ್ಬಂದಿ ಭಾಗವಹಿಸಿದ್ದರು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *