ಕನಕಗಿರಿ ಜನಪ್ರಿಯ ಶಾಸಕರಾದ ಬಸವರಾಜ ದಡೇಸೂಗೂರು ಇವರು ಬೂದಗೂಂಪಾ ಆರೋಗ್ಯ ಕೇಂದ್ರದ ಕೋವಿಡ್ ಕೇಂದ್ರಕ್ಕೆ ಭೇಟಿ ನೀಡಿದರು.
ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನಲ್ಲಿ ಇಂದು ಕನಕಗಿರಿ ಜನಪ್ರಿಯ ಶಾಸಕರಾದ ಬಸವರಾಜ ದಡೇಸೂಗೂರು ಅವರು ಕ್ಷೇತ್ರದ ಬೂದಗೂಂಪಾ ಆರೋಗ್ಯ ಕೇಂದ್ರದ ಕೋವಿಡ್ ಕೇಂದ್ರಕ್ಕೆ ಭೇಟಿ ನೀಡಿ ಕೊರೊನ್ ಸೋಂಕಿತ ವ್ಯಕ್ತಿಗಳ ಆರೋಗ್ಯ ಮತ್ತು ಅಲ್ಲಿನ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದರು. ವ್ಯಕ್ತಿಗತ ಸಾಮಾಜಿಕ ಅಂತರವನ್ನು ಸದಾ ಕಾಪಾಡಿಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸಬೇಕು. ಕೋವಿಡ್ ಲಸಿಕೆಯನ್ನು ವ್ಯವಸ್ಥಿತವಾಗಿ ಜನರಿಗೆ ತಲುಪಿಸುವ ವ್ಯವಸ್ಥೆಯನ್ನು ಸರ್ಕಾರ ಮಾಡುತ್ತಿದೆ. ಅಲ್ಲಿಯವರೆಗೂ ಜನರು ಮೈಮರೆಯದೇ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲೇಬೇಕು ಎಂದರು. ಈ ಸಂಧರ್ಭದಲ್ಲಿ ನಾಗರಾಜ ಬಿಲ್ಗಾರ, ತಿಮ್ಮನಗೌಡರು, ವೀರೇಶ ಸಾಲೋಣಿ, ತಹಶಿಲ್ದಾರರಾದ ಶಿವಶಂಕ್ರಪ್ಪ, ಸಿಪಿಐ ಉದಯರವಿ, ಪಿಎಸ್ಐ ಲಕ್ಕಪ್ಪ ಅಗ್ನಿ, ಇಒ ಚಂದ್ರಶೇಖರ, ಸೋಮಶೇಖರ ಮುಸ್ಟುರು ಎಪಿಎಂಸಿ ಅದ್ಯಕ್ಷರು ಶರಣಪ್ಪ ಗದ್ದಿ, ಆರ್ ಐ ಗಳಾದ ಸುರೇಶ್, ಪ್ರಕಾಶ ಹಾಗೂ ಗ್ರಾಮ ಪಂಚಾಯತಿ ಪಿಡಿಓ ಹಾಗೂ ಸಿಬ್ಬಂದಿ ವರ್ಗದವರು, ಆರೋಗ್ಯ ಇಲಾಖೆಯ ಅಧಿಕಾರಿಗಳು, ಉಪಸ್ಥಿತರಿದ್ದರು.
ವರದಿ – ಅಮಾಜಪ್ಪ ಹೆಚ್.ಜುಮಾಲಾಪೂರ.