ಕರಾಳ ದಿನದ ಭಾಗವಾಗಿ ಕವಿತಾಳ ದಲ್ಲಿ DYFI – SFI ವತಿಯಿಂದ ಪ್ರತಿಭಟನೆ.

Spread the love

ಕರಾಳ ದಿನದ ಭಾಗವಾಗಿ ಕವಿತಾಳ ದಲ್ಲಿ DYFI – SFI ವತಿಯಿಂದ ಪ್ರತಿಭಟನೆ.

ಕವಿತಾಳ : ಕೋವಿಡ್ ಸಾಂಕ್ರಾಮಿಕ ರೋಗ ತಡೆಗಟ್ಟಲು ಹಾಗೂ ಜನ ವಿರೋಧಿ ಕೃಷಿ ಕಾನೂನುಗಳು ಮತ್ತು ನಾಲ್ಕು ಕಾರ್ಮಿಕ ವಿರೋಧಿ ಕಾನೂನುಗಳನ್ನು ವಾಪಸ್ಸು ಪಡೆಯಲು ಒತ್ತಾಯಿಸಿ AIWA, DYFI, SFI ರಾಷ್ಟ್ರವ್ಯಾಪಿ ಕರಾಳ ದಿನಾಚರಣೆ ಯನ್ನು ಆಚರಿಸಲು ಕರೆ ಕೊಟ್ಟ ಭಾಗವಾಗಿ ಕವಿತಾಳ ದ ಪಟ್ಟಣ ಪಂಚಾಯತಿ ಕಾರ್ಯಾಲಯದ ಮುಂದೆ DYFI – SFI ವತಿಯಿಂದ ಹೋರಾಟ ವನ್ನು ಮಾಡಲಾಯಿತು. ಜನ ವಿರೋಧಿ ಕೃಷಿ ಕಾಯಿದೆಗಳನ್ನು ವಿರೋಧಿಸಿ ರೈತರ ಐತಿಹಾಸಿಕ ಹೋರಾಟವು ಇಂದು ಮೇ 26 ಕ್ಕೆ 6 ತಿಂಗಳು ಪೂರ್ಣಗೊಳ್ಳಲಿದೆ. ಟ್ರೇಡ್ ಯೂನಿಯನ್‌ಗಳ ಅಖಿಲ ಭಾರತ ಮುಷ್ಕರವೂ 6 ತಿಂಗಳುಗಳನ್ನು ಪೂರ್ತಿಗೊಳಿಸುತ್ತಿದೆ . ಜೊತೆಗೆ ದೇಶದಲ್ಲಿ ಮಾರಣಾಂತಿಕ ಕೋವಿಡ್ ಸೋಂಕು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ತೀವ್ರವಾಗಿ ಹೆಚ್ಚುತ್ತಿದ್ದು, ಜನ ಸಾಮಾನ್ಯರು ಸಮರ್ಪಕ ಚಿಕಿತ್ಸೆ ಸಿಗಲಾರದೇ ಸಾವೀಗೀಡಾಗುತ್ತಿದ್ದಾರೆ. ಇನ್ನೊಂದೆಡೆ ಸರಕಾರಗಳು ತಮ್ಮ ವೈಫಲ್ಯ ಮುಚ್ಚಿಕೊಳ್ಳುವ ಸಲುವಾಗಿ ಬೇಕಾಬಿಟ್ಟಿ ಲಾಕ್ ಡೌನ್ ಘೋಷಿಸಿರುವುದರಿಂದಾಗಿ ಅಗತ್ಯ ಆಹಾರದ ಕೊರತೆಯಿಂದಾಗಿ ಹಸಿವಿನಿಂದ ಜನತೆ ಸಾಯುವಂತಾಗಿದೆ, ಅಲ್ಲದೇ ಇದ್ದ ದುಡಿಮೆಯನ್ನು ಕಳೆದುಕೊಂಡು ಅತ್ಯಂತ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ತೀವ್ರವಾಗಿ ಹೆಚ್ಚುತ್ತಿರುವ ನಿರುದ್ಯೋಗದ ಮಧ್ಯೆಯೇ ಜನತೆ ಇದ್ದ ದುಡಿಮೆಯನ್ನು ಕಳೆದುಕೊಂಡು ಕಂಗಾಲಾಗಿರುವ ಕೆಟ್ಟ ಸ್ಥಿತಿ, ಆಹಾರದ ಕೊರತೆ ಹಾಗೂ ನಿರುದ್ಯೋಗ ಪ್ರಮಾಣ ಹೆಚ್ಚುತ್ತಿದೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯವಿರುವ ಆಸ್ಪತ್ರೆಗಳು, ಔಷಧಿ, ಅಕ್ಸಿಜನ್, ವೆಂಡಿ ಲೇಟರ್, ಸಿಬ್ಬಂದಿ ನೇಮಕ ಇತ್ಯಾದಿ ಸೌಲಭ್ಯಗಳನ್ನು ಹಾಗೂ ಅಹಾರ ಭದ್ರತೆ ಒದಗಿಸಿ ಜನರ ಪ್ರಾಣಗಳನ್ನು ರಕ್ಷಿಸಬೇಕಾದ ಸರಕಾರ ಹೃದಯಹೀನವಾಗಿ  ಕಾರ್ಪೊರೇಟ್ ಪರ ನೀತಿಗಳನ್ನು ಅನುಸರಿಸುತ್ತಿರುವುದು ಖಂಡನೀಯ ಕೂಡಲೇ ಜನೆತಯ ಕಾಯಿದೆ ಗಳನ್ನು ವಾಪಸ್ಸು ಪಡೆದುಕೊಂಡು ಜನತೆಯ ಜೀವ ಮತ್ತು ಜೀವನ ಉಳಿಸಿಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು  ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (DYFI) ಮತ್ತು ಭಾರತ ವಿದ್ಯಾರ್ಥಿ ಫೆಡರೇಷನ್ (SFI)  ಸಂಘಟನೆಗಳು ಜಂಟಿಯಾಗಿ ಹೋರಾಟವನ್ನು ಮಾಡಿದರು.

  1. ಆಮ್ಲಜನಕ, ವೆಂಟಿಲೇಟರ್, ಔಷಧಿ ಮತ್ತು ಆಸ್ಪತ್ರೆಯಲ್ಲಿ ಹಾಸಿಗೆಗಳನ್ನು ಒದಗಿಸಲು ಪಿಎಂ ಕೇರ್ ನ ಬೃಹತ್ ಹಣವನ್ನು ಬಳಸಬೇಕು. ಸೆಂಟ್ರಲ್ ವಿಸ್ಟಾ ಯೋಜನೆಯನ್ನು ನಿಲ್ಲಿಸಿ, ಅದರ ಹಣವನ್ನೂ ಸಹ ಕೋವಿಡ್ ರೋಗ ನಿಯಂತ್ರಣಕ್ಕೆ ಬಳಸಬೇಕು.
  2. ಆರೋಗ್ಯ ಸೌಲಭ್ಯಗಳು ಎಲ್ಲರಿಗೂ ಉಚಿತವಾಗಿ ಲಭ್ಯವಾಗುವಂತೆ ಮಾಡಬೇಕು. ಎಲ್ಲಾ ನಾಗರಿಕರಿಗೆ ಉಚಿತ ಮತ್ತು ಸಾರ್ವತ್ರಿಕ ಲಸಿಕೆ ನೀಡಬೇಕು.
  3. ಖಾಸಗಿ ಆರೋಗ್ಯ ವ್ಯವಸ್ಥೆಯನ್ನು ನಿಯಂತ್ರಿಸಲು ತಕ್ಷಣವೇ ಕಟ್ಟುನಿಟ್ಟಾದ ಕ್ರಮಗಳನ್ನು ತೆಗೆದುಕೊಳ್ಳಬೇಕು.
  4. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಬೇಕಾಗುವಷ್ಟು ಹಣವನ್ನು ನಿಗದಿಪಡಿಸಬೇಕು.
  5. ತೆರಿಗೆದಾರರಲ್ಲದ ಕುಟುಂಬಗಳ ಖಾತೆಗೆ ತಕ್ಷಣ 10 ಸಾವಿರ ರೂಗಳನ್ನು ಹಾಕಬೇಕು.
  6. ಆರು ತಿಂಗಳವರೆಗೆ ಅಗತ್ಯವಿರುವ ಎಲ್ಲರಿಗೂ 10 ಕೆಜಿ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡಬೇಕು. ದ್ವಿದಳ ಧಾನ್ಯ, ಎಣ್ಣೆ, ಸಕ್ಕರೆ ಮುಂತಾದ ಇತರ ಅಗತ್ಯ ವಸ್ತುಗಳ ಜೂತೆಯಲ್ಲಿ ಸ್ಯಾನಿಟರಿ ನ್ಯಾಪಕಿನ್ ಸಹ ಪಿಡಿಎಸ್- ಸಾರ್ವಜನಿಕ ವಿತರಣಾ ವ್ಯವಸ್ಥೆ ಮೂಲಕ ಒದಗಿಸಬೇಕು.
  7. ಮನರೇಗಾ ಯೋಜನೆಯಲ್ಲಿ 200 ದಿನದ ಕೆಲಸ ಹಾಗೂ 600 ಕೂಲಿಯನ್ನು ಹೆಚ್ಚಿಸಬೇಕು. ನಗರ ಉದ್ಯೋಗ ಖಾತರಿ ಯೋಜನೆಯನ್ನು ಪ್ರಾರಂಭಿಸಬೇಕು.
  8. ಸ್ತ್ರೀ ಶಕ್ತಿ, ಸ್ವಸಹಾಯ ಸಂಘಗಳ ಬಡ್ಡಿ ಸಹಿತ ಸಾಲ ಮನ್ನಾ ಮಾಡಬೇಕು. ಹೊಸ ಸಾಲ ಸೌಲಭ್ಯ  ನೀಡಬೇಕು..MFI ಸಂಸ್ಥೆಗಳನ್ನು ನಿಯತ್ರಣ ಮಾಡಬೇಕು.
  9. ಖಾಸಗಿ ವಲಯದಲ್ಲಿ ಉದ್ಯೋಗ ಕಳೆದುಕೊಂಡವರಿಗೆ ಪರಿಹಾರ ಒದಗಿಸಬೇಕು.
  10. ಎಲ್ಲಾ ನೋಂದಾಯಿತ ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ ನೀಡಬೇಕು.
  11. ಪಡಿತರ ವ್ಯವಸ್ಥೆಯಲ್ಲಿ ಸ್ಯಾನಿಟರಿ ನ್ಯಾಪ್ ಕಿನ್ ಉಚಿತವಾಗಿ ನೀಡಿ
  12. ಶೈಕ್ಷಣಿಕ ಕ್ಷೇತ್ರದ – ಸೆಮಿಸ್ಟರ್ ಶುಲ್ಕ ಸೇರಿದಂತೆ ಎಲ್ಲಾ ತರಹದ ಶುಲ್ಕಗಳನ್ನು ಹಿಂತೆಗೆದುಕೊಳ್ಳಬೇಕು.
  13. ಅನ್ ಲೈನ್ ಶಿಕ್ಷಣಕ್ಕೆ ಅಗತ್ಯವಾದ ಪರಿಕರಗಳನ್ನು ಎಲ್ಲಾ ಬಡವರಿಗೆ ಹಾಗೂ ಸಾಮಾಜಿಕವಾಗಿ ದುರ್ಬಲ ವಿದ್ಯಾರ್ಥಿಗಳಿಗೆ ಉಚಿತವಾಗಿ ಒದಗಿಸಬೇಕು. ಈ ಹೋರಾಟ ವನ್ನು ಉದೇಶಿಸಿ SFI ರಾಜ್ಯ ಉಪಾಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ, ಜಿಲ್ಲಾ ಕಾರ್ಯದರ್ಶಿ ಲಿಂಗರಾಜ ಕಂದಗಲ್, ಕಾರ್ಮಿಕ ಮುಖಂಡ ಎಂ.ಡಿ. ಮೈಬೂಸಾಬ್ ಮಾತನಾಡಿದರು. DYFI ಮಹಮ್ಮದ್ ರಫಿ, SFI ಅಧ್ಯಕ್ಷರಾದ ಮೌನೇಶ ಬುಳ್ಳಾಪುರ, ಕಾರ್ಯದರ್ಶಿ ವೆಂಕಟೇಶ ಮುಖಂಡರಾದ ನಾಗಮೋಹನ್ ಸಿಂಗ್, ಮಹಾದೇವ, ಬಿ. ಹುಲ್ಲೇಶ್, ದೇವರಾಜ, ಬಸವರಾಜ ಸೇರಿ ಅನೇಕರಿದ್ದರು.

  ವರದಿ – ಆನಂದ್ ಸಿಂಗ್ ಕವಿತಾಳ

Leave a Reply

Your email address will not be published. Required fields are marked *