ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ವಿವಿದ ಸಂಘಟನೆಗಳಿಂದ ಪಟ್ಟಣ ಪಂಚಾಯತ್ ಕಾರ್ಯಾಲಯದ ಮುಂದೆ ವಿವಿದ ಬೆಡಿಕೆಗಳನ್ನ ಇಟ್ಟಕೊಂಡು ಉಪವಾಸ ಸತ್ಯಾಗ್ರಾಹ.

Spread the love

 

ಸರಕಾರಿ ಆಸ್ತಿ ಉಳಿವಿಗಾಗಿ,ಸೂಕ್ತ ನ್ಯಾಯ ಸಿಗುವತನಕ ುಪವಾಸ ಸತ್ಯಾಗ್ರಾಹ. ತಾವರಗೇರಾ ಪಟ್ಟಣದ ಸರ್ಕಾರಿ ಆಸ್ತಿ ಉಳಿವಿಗಾಗಿ ಪಟ್ಟಣ ಪಂಚಾಯತ್ ಕಾರ್ಯಾಲಯದ ಮುಂದೆ ವಿವಿಧ ಸರ್ಕಾರಿ ಜಮೀನುಗಳಲ್ಲಿ ಅಕ್ರಮ ಕಟ್ಟಡ ಮತ್ತು ಶೆಡ್ಡುಗಳನ್ನು ತೆರವುಗೋಳಿಸಲು ಒತ್ತಾಯಿಸಿ ಅವ ರಾತ್ರಿ ಉಪವಾಸ ಸತ್ಯಗ್ರಹ.

ಕರ್ನಾಟಕ ರೈತ ಸಂಘ ಹಾಗೂ ಹಸೀರು ಸೇನೆ ತಾವರಗೇರಾ ಹೋಬಳಿ ಘಟಕ ತಾ// ಕುಷ್ಟಗಿ ಜಿ// ಕೊಪ್ಪಳ ಇದ್ದು. ತಾವರಗೇರಾ ಪಟ್ಟಣದ ನಾನಾ ಕಡೆಗಳಲ್ಲಿ ಇರುವ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಮತ್ತು ರಾಜರೋಷವಾಗಿ ತಗಡಿನ ಶೆಡ್ಡು ಮತ್ತು ವಾಣಿಜ್ಯ ಮಳಿಗೆ ನಿರ್ಮಿಸಿಕೊಂಡು ಬಡ ಬಗ್ಗರಿಂದ ಹಗಲು ದರೋಡೆ ಮಾಡುತ್ತಿರುವವರ ಮೇಲೆ ಮತ್ತು ಘಟಾನು ಘಟಿಗಳಿಗೆ ಸಾತ್ ನೀಡುತ್ತಿರುವ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳು ಮತ್ತು ಪಂಚಾಯತಿಯ ಅಧಿಕಾರಿ ವರ್ಗದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಬಡ ಬಗ್ಗರಿಗೆ ನ್ಯಾಯ ಒದಗಿಸುವುದು ಮತ್ತು ಪಟ್ಟಣ ಪಂಚಾಯತಿಗೆ ಬರುವ ಕಂದಾಯವನ್ನು ತಿಂದು ಹಾಕುತ್ತಿರುವವರ ವಿರುದ್ಧ ಅಮರಣಾಂತ ಉಪವಾಸ ಸತ್ಯಗ್ರಹ ಹಮ್ಮಿಕೊಳ್ಳಲಾಗಿದೆ.

ತಾವರಗೇರಾ ಪಟ್ಟಣದ ಸುತ್ತಲು ಅಂದರೆ ಶ್ರೀ ಕರೆಪ್ಪತಾತ್ ನವರ ದೇವಸ್ಥಾನದಿಂದ ಹಿಡಿದು ನೇರವಾಗಿ ಮುದಗಲ್ ರಸ್ತೆ ವೀರಾಪೂರ ಕ್ರಾಸ್ ವರೆಗೂ ಮತ್ತು ವಿಠಲಾಪೂರದಿಂದ ಡಾ// ಬಿ.ಆರ್.ಅಂಬೇಡ್ಕರ್ ಸರ್ಕಲ್‌ರವರೆಗೂ ಮತ್ತು ಪಟ್ಟಣ ಪಂಚಾಯತಿಯಿಂದ ಹಿಡಿದು ಸಿಂದನೂರು ಸರ್ಕಲ್ ಸೇರಿದಂತೆ ಬಸವಣ್ಣ ಕ್ಯಾಂಪ್ ಸರ್ಕಾರಿ ಬಾಲಕರ ಆಸ್ಟ್ರೇಲ್ ರವರೆಗೂ ಎರಡು ಬದಿಯಲ್ಲಿ ಕೆಲವು ರಾಜಕೀಯ ಗಣ್ಯ ವ್ಯಕ್ತಿಗಳು ಮತ್ತು ಊರಿನ ಪ್ರಭಾವಿ ವ್ಯಕ್ತಿಗಳು ತಗಡಿನ ಶೆಡ್ಡುಗಳ ಹಾಕಿ ಸರ್ಕಾರಕ್ಕೆ ಬರುವ ಕಂದಾಯವನ್ನ ತಮ್ಮ ಸ್ವತಂಹ ಆಧಾಯಕ್ಕೆ ಬಳಿಸಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಊರಿನ ಪ್ರಭಾವಿ ವ್ಯಕ್ತಿಗಳು ಅನಧಿಕೃತ ಕಟ್ಟಡವನ್ನ ಕಟ್ಟಿ ಸರ್ಕಾರ ಜಾಗವನ್ನ ಕಬಳಿಸುವುದಲ್ಲದೆ, ಸದರಿ ಕಟ್ಟಡಗಳನ್ನ ಬಾಡಿಗೆ ಕೊಟ್ಟು ಸರ್ಕಾರಕ್ಕೆ ಸಂದಾಯವಾಗುವ ಕಂದಾಯವನ್ನ ಸ್ವ ಲಾಬಕ್ಕೆ ಬಳಿಸಿಕೊಳ್ಳುತ್ತಿದ್ದಾರೆ.

ಸ ಕಾರಣವಾಗಿ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡ ತಗಡಿನ ಶೆಡ್ಡು ಮತ್ತು ವಾಣಿಜ್ಯ ಮಳಿಗೆಗಳನ್ನ ಕೂಡಲೆ ತೆರವುಗೊಳಿಸಬೇಕು, ಆದರೆ ಇಲ್ಲಿನ ಸ್ಥಳಿಕ ಅಧಿಕಾರಿಗಳು ಭ್ರಷ್ಠರಿಗೆ ಸಂಪೂರ್ಣ ಸಾತ್ ನೀಡಿ, ಬಡ/ಬಗ್ಗರ ಅಂಗಡಿ ಮುಗ್ಗಟ್ಟುಗಳನ್ನ ತೆರವುಗೊಳಿಸಿದ್ದು ಎಷ್ಟರ ಮೆಟ್ಟಿಗೆ ಸರಿ? ಎನೇ ಇರಲಿ ಒಬ್ಬರ ಕಣ್ಣಿಗೆ ಬಣ್ಣ, ಮತ್ತೊಬ್ಬರ ಕಣ್ಣಿಗೆ ಸುಣ್ಣ ಹಚ್ಚುತ್ತಿರುವುದು ಯಾವ್ ನ್ಯಾಯ? ಜೊತೆಗೆ ಅಕ್ರಮದ ಬಗ್ಗೆ ಹಾಗೂ ಭ್ರಷ್ಟಚಾರದ ಬಗ್ಗೆ ಈಗಾಗಲೆ ಸಾಕಷ್ಟು ಸಾರಿ ತಮ್ಮ ಗಮನಕ್ಕೆ ತಂದಿರುತ್ತೇವೆ, ಅದಾಗ್ಯೂ ಕರ್ನಾಟಕ ಭೂ ಕಬಳಿಕೆ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಿದ್ದು ಇರುತ್ತದೆ.

ಜೊತೆಗೆ ಕರ್ನಾಟಕ ಉಪ-ಲೋಕಾಯುಕ್ತರ ಕಚೇರಿಗೂ ಸಹ ಈ ಪಂಚಾಯತಿಯ ದುರಾಡಳಿತaleiಷ್ಟ ಪಾನೆ.. ಸಲ್ಲಿಸಿದ್ದು ಇರುತ್ತದೆ. ಇಷ್ಟೇಲ್ಲಾ ಇದ್ದರೂ ಪಟ್ಟಣ ಪಂಚಾಯತಿ ಅಧಿಕಾರಿಗಳು ನಾಚಿಕೆ, ಮಾನ ಮರ್ಯಾದಿವಿಲ್ಲದೆ ಬ್ರಷ್ಠರಿಗೆ ಸಾತ್ ನೀಡುತ್ತಿರುವುದು ನೋಡಿದರೆ ಅಧಿಕಾರಿಗಳು ಶಾಮೀಲು ಇರುವುದು ಕಂಡು ಬರುತ್ತದೆ. ಸದರಿ ಅಧಿಕಾರಿಗಳ ನಿರ್ಲಕ್ಷದಿಂದ ಪಟ್ಟಣದ ಸಾರ್ವಜನಿಕರು ರಸ್ತೆ ಅಪಘಾತ ಇತರೆ ದುರಂತಗಳನ್ನ ಅನುಭವಿಸಬೇಕಾಗಿದೆ. ಕಾರಣ ಈಗಿರುವ ಅಧಿಕಾರಿ ವರ್ಗವನ್ನ ಮತ್ತು ಸಿಬಂದಿ ವರ್ಗದವರನ್ನ ಕೂಡಲೆ ಈ ಸ್ಥಳದಿಂದ ವರ್ಗಾವಣೆಗೊಳಿಸಬೇಕು? ಈ ಸ್ಥಳಕ್ಕೆ ಬೇರೆಯವರಿಗೆ ಅವಕಾಶ ಕಲ್ಪಿಸಬೇಕು.

-:: ಬೇಡಿಕೆಗಳು ::-

1) ತಾವರಗೇರಾ ಪಟ್ಟಣದ ನಾಡ ಕಚೇರಿಯ ವ್ಯಾಪ್ತಿಯೊಳಗೆ ಇರುವ ತಗಡಿನ ಶೆಡ್ಡುಗಳನ್ನ ತೆರವುಗೊಳಿಸಬೇಕು.

2) ತಾವರಗೇರಾ ಪಟ್ಟಣದ ಸರ್ವೇ ನಂ 54 ರಲ್ಲಿ ಸಾಕಷ್ಟು ಅಕ್ರಮವಾಗಿರುವ ತಗಡಿನ ಶೆಡ್ಡು ಮತ್ತು ವಾಣಿಜ್ಯ ಮಳಿಗೆಗಳನ್ನ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡು ಸರ್ಕಾರಕ್ಕೆ ಆದಾಯ ಬರುವಂತೆ ಕ್ರಮ ವಹಿಸಬೇಕು.

3) ತಾವರಗೇರಾ ಪಟ್ಟಣದ ಸರ್ವೇ ನಂ 51 ರಲ್ಲಿಯು ಸಹ ಸಾಕಷ್ಟು ಅಕ್ರಮವಾಗಿರುವ ತಗಡಿನ ಶೆಡ್ಡು ಮತ್ತು ವಾಣಿಜ್ಯ ಮಳಿಗೆಗಳನ್ನ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡು ಸರ್ಕಾರಕ್ಕೆ ಆದಾಯ ಬರುವಂತೆ ಕ್ರಮ ವಹಿಸಬೇಕು.

4) ತಾವರಗೇರಾ ಪಟ್ಟಣದ ಚೆನ್ನಮ್ಮ ಸರ್ಕಲ್‌ನಿಂದ ಹಿಡಿದು ನೇರವಾಗಿ ಮುದಗಲ್ ರಸ್ತೆ ವೀರಾಪೂರ್ ಕ್ರಾಸ್‌ವರೆಗೆ ಎರಡು ಬದಿಯಲ್ಲಿರು ಸರ್ಕಾರಿ ರಸ್ತೆ ಯಲ್ಲಿ ಬಂಡಿ ವ್ಯಾವಹಾರ ಮತ್ತು ಇತರೆ ತಗಡಿನ ಶೆಡ್ಡು ಹಾಕಿಸಿ ಬಾಡಿಗೆ ವಸೂಲಿ ಮಾಡುತ್ತಿರುವ ಗಣ್ಯ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು, ಸರ್ಕಾರಕ್ಕೆ ಆದಾಯ ಬರಿಸಬೇಕು.

5) ವಿಠಲಾಪೂರ ಮುಖ್ಯ ರಸ್ತೆಯಿಂದ ಡಾ//ಬಿ.ಆರ್.ಅಂಬೇಡ್ಕರ್ ಸರ್ಕಲ್‌ವರೆಗೆ ಇರುವ ತಗಡಿನ ಶೆಡ್ಡು & ಮಳಿಗೆಗಳನ್ನ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡು ಸರ್ಕಾರಕ್ಕೆ ಆದಾಯ ಬರುವಂತೆ ಕ್ರಮ ವಹಿಸಬೇಕು.

6) ಪಟ್ಟಣದ ಹಗಲಿಕರಣ ರಸ್ತೆಯಲ್ಲಿ ಬರುವ ಪಾತಪ್ಪನ ಕಟ್ಟಿಯಿಂದ (ಗಾಂದಿ ಸರ್ಕಲ್) ಭಗೀರಥ ಸರ್ಕಲ್ ರವರೆಗೆ ನಡೆಯುತ್ತಿರುವ ರಸ್ತೆ ಹಗಲಿಕರಣವನ್ನು 40 ಅಡಿ ವರೆಗೆ ವಿಸ್ತರಿಸಬೇಕು.

7) ಪಟ್ಟಣದ ಶ್ರೀ ಖಾಜಾ ಬಂದೇ ನವಾಜ್ ದರ್ಗಾದ ಹತ್ತಿರಾ ಇರುವ ಮೂಲ ಗೌವಠಾಣ ಜಮೀನಿನಲ್ಲಿ 4 ಮಳಿಗೆಗಳು ಇದ್ದು, ಇವುಗಳಲ್ಲಿ ಪಂಚಾಯತಿಯ ಟೆಂಡರ ಮೂಲಕ 3 ಮಳಿಗೆ ಹರಾಜು ಹಾಗಿದ್ದು ಇನ್ನೊಂದು ಮೇಲ್ ಅಂತಾಸ್ಥಿನ ಮಳಿಗೆಯು ಬಾಡಿಗೆಯನ್ನ ನಿಗದಿ ಪಡಿಸದೆ ಬೇರೊಬ್ಬರು ದುರ್ಭಳಿಕೆ ಮಾಡಿಕೊಳ್ಳುತ್ತಿರುವುದರಿಂದ ಸದರಿಯವರನ್ನ ತೆರವುಗೊಳಿಸಿ ಮಳಿಗೆ ಹರಾಜು ಆಗಬೇಕು.

8) ರಾಜ್ ಕಾಲುವೇ ವತ್ತುವರಿ ಮಾಡಿ ಅನಾಧಿಕೃತವಾಗಿ ಎನ್ ಎ ಪ್ಲಾಟ್ ಮಾಡಿ ಮಾರಾratಮಾಡಿರುವ ವ್ಯಕ್ತಿಗಳ ವಿರುದ್ದ ಕ್ರಮ ಕೈಗೊಂಡು, ಕಾನೂನಾತ್ಮಕವಾಗಿ ನ್ಯಾಯ ದೊರಕಿಸಬೇಕು, ಇದರ ಬಗ್ಗೆ ಸಂಪೂರ್ಣ ತನಿಖೆ ಮಾಡಿ ರಾಜ ಕಾಲುವೆಯನ್ನ ಪುನಹ ನಿರ್ಮಿಸಬೇಕು.

9) ಪಟ್ಟಣ ಪಂಚಾಯತಿಯಿಂದ ಸಿಂಧನೂರು ಸರ್ಕಲ್ ಸೇರಿದಂತೆ ಸಿಂಧನೂರು ಮುಖ್ಯ ರಸ್ತೆಯಿಂದ ಸರ್ಕಾರಿ ಬಾಲಕರ ವಸತಿ ನಿಲಯದ ವರೆಗೆ ಎರಡು ಬದಿಯಲ್ಲಿ ಅಕ್ರಮ ಶೆಡ್ಡು ಮತ್ತು ಮಳಿಗೆಗಳನ್ನ ತೆರವುಗೊಳಿಸಿ ತಮ್ಮ ವಶಕ್ಕೆ ಪಡೆದು ಸರ್ಕಾರಕ್ಕೆ ಆದಾಯ ಬರುವಂತಾಗಬೇಕು.

10) ಚೆನ್ನಮ್ಮ ಸರ್ಕಲ್‌ನಿಂದ ಮುದಗಲ್ ರಸ್ತೆಯ ಎಸ್.ಎಸ್.ವಿ ಶಾಲೆವರೆಗೆ ಮತ್ತು ವಿಠಲಾಪೂರ ರಸ್ತೆಯಿಂದ ಅಂಬೇಡ್ಕರ ರಸ್ತೆವರೆಗೆ ಹಾಗೂ ಪಟ್ಟಣ ಪಂಚಾಯತಿಯಿಂದ ಸಿಂಧನೂರು ಸರ್ಕಲ್ ಸೇರಿದಂತೆ ಬಸವಣ್ಣ ಕ್ಯಾಂಪ್ ವರೆಗೆ ಪಾದಚಾರಿಗಳಿಗೆ ಸಂಚರಿಸಲು ಪುಟಪಾತ್ ನಿರ್ಮಿಸಬೇಕು. ಹಾಗೂ ದ್ವೀ ಚಕ್ರವಾಹನಗಳಿಗೆ ನಿಲುಗಡೆ ಸ್ಥಳ ನಿಗದಿ ಪಡಿಸಬೇಕು.

11) ಸರ್ವೇ ನಂ 54 ರಲ್ಲಿ ಸರ್ಕಾರಿ ಜಮೀನಿನಲ್ಲಿ ಖಾಸಿಗಿ ವ್ಯಕ್ತಿಗಳಿಗೆ ರಸ್ತೆ ನಿರ್ಮಾಣ ಮಾಡಲು ಅವಕಾಶ ಮಾಡಿಕೊಟ್ಟ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು, ಮತ್ತು ರಸ್ತೆಯನ್ನ ಬಂದು ಮಾಡಬೇಕು. ಸದರಿ ಈ ಮೇಲಿನ ವಿಷಯಕ್ಕೆ ಸಂಬಂದಪಟ್ಟಾಗೆ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಮತ್ತು ಲೋಕಫಯೋಗಿ ಇಲಾಖೆ ಮತ್ತು ತಹಶೀಲ್ದಾರ್ ಹಾಗೂ ನಾಡ ಕಾರ್ಯಾಲಯದ ಅಧಿಕಾರಿಗಳು ನಿರ್ಲಕ್ಷತನದಿಂದ ಸರ್ಕಾರಿ ಜಮೀನುಗಳನ್ನು ವತ್ತುವರಿ ಮಾಡಿದವರಿಗೆ ಸಹಕಾರ ಮಾಡುತ್ತಿರುವುದು ನೋಡಿದರೆ ಸದರಿ ಅಧಿಕಾರಿಗಳು ಅಕ್ರಮಕ್ಕೆ ಸಕರಿಸುತ್ತಿದ್ದಾರೆಂದು ಅನುಮಾನ ಬರುತ್ತಿದೆ. ಸ-ಕಾರಣದಿಂದಾಗಿ ಈ ಮೇಲೆ ಹೇಳಿರುವ ಬೇಡಿಕೆಗಳು ಇಡೇರದೆ ಇದ್ದಲ್ಲಿ ಮುಂದಿನ ದಿನಮಾನಗಳಲ್ಲಿ ತಾಲೂಕಿನದ್ಯಾಂತ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಒತ್ತಾಯಿಸುತ್ತಿದ್ದೆವೆ, ಅಮರೇಶ ನಾಲತ್ವಾಡ ಜಿಲ್ಲಾ ಉಪಾಧ್ಯಕ್ಷರು ವೀರೇಶ ನಂದಾಪೂರ ಹೋಬಳಿ ಅಧ್ಯಕ್ಷರು ಆದಪ್ಪ ರಾಮತ್ನಾಳ ತಾಲೂಕ ಅಧ್ಯಕ್ಷರು ಆಂಜನೇಯ ತಿಡಿಗಾಳ ತಾಲೂಕ ಉಪಾಧ್ಯಕ್ಷರು ಹಾಗೂ ಊರಿನ ಪ್ರಮುಖರು, ಸಮಾಜ ಸೇವಕರು ಹಾಗೂ ವಿವಿಧ ಸಂಘಟನೆಯ ಮುಖಂಡರು ಈ ಧರಣಿಯಲ್ಲಿ  ಪಾಲುಗೊಂಡಿದ್ದರು.

ತದ ನಂತರ ಈ ಹೋರಾಟಕ್ಕೆ ಶ್ರೀ ಶರಣಪ್ಪ ದೊಡ್ಡಮನಿ ರಾಜ್ಯ ಅಧ್ಯಕ್ಷರು ಹಾಗೂ ಜಿಲ್ಲಾ ಅಧ್ಯಕ್ಷರು ಸಹ ರಾತ್ರಿ ವೇಳೆ ಬಂದು ಹೋರಾಟಗಾರರಿಗೆ ಧೈರ್ಯ ತುಂಬುವ ಮೂಲಕ ಹೋರಾಟಗಾರರ ಬೆಂಬಲಕ್ಕೆ ನಾವು ಸದಾ ಇರುತ್ತೇವೆ ಎಂದು ಭರವಶೆ ನೀಡಿ ಹೋರಾಟಕ್ಕೆ ಬೆಂಬಲಿಸಿದರು.

Leave a Reply

Your email address will not be published. Required fields are marked *