ಶೀರ್ಷಿಕೆ ಅತಿಯಾದ ಅಂದಾಭಿಮಾನದ ಫಲವಿದು.

Spread the love

ಶೀರ್ಷಿಕೆ ಅತಿಯಾದ ಅಂದಾಭಿಮಾನದ ಫಲವಿದು.

ಅದು ಜೂನ್ ನಾಲ್ಕರ ಸಂಜೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ರಸ್ತೆಗಳು ಅಕ್ಷರಶ ಸಾವಿನ ರಸ್ತೆಗಳಾಗಿದ್ದವು. ಒಂದು ಕಡೆ ಜನರ ಸಾವು ಅವರ ಪೋಷಕರ ಆಕ್ರಂದನ ಅವರ ನರಳಾಟ ಮುಗಿಲು ಮತ್ತೊಂದು ಕಡೆ ಇದ್ಯಾವುದರ ಪರಿವೇ ಇಲ್ಲದಂತೆ ಯುವ ಸಮಾಜ ಕಪ್ ಗೆದ್ದ ಖುಷಿಯಲ್ಲಿ ಮುಳುಗಿ ಹೋಗಿತ್ತು.  ಸಮಾಜ ಮತ್ತು ನಮ್ಮ ಯುವ ಸಮುದಾಯ ಎಷ್ಟೊಂದು ಸಂವೇದನಾಶೀಲರಹಿತವಾಗಿದೆ ವಿವೇಕ ಶೂನ್ಯವಾಗಿದೆ ಸಂಗುಪ್ತವಾಗಿದೆ ಎನ್ನುವುದರ ಸ್ಪಷ್ಟ ಉದಾಹರಣೆ ಈ ಬೆಂಗಳೂರಿನ ಕಾಲ್ತುಳಿತದ ಘಟನೆ. ಭವಿಷ್ಯ ಈ ದೇಶದ ಯುವ ಸಮುದಾಯ ಕ್ರೀಡೆ ಎಂದರೆ ಅದು ಕ್ರಿಕೆಟ್ ಅಷ್ಟೇ ಎಂಬಷ್ಟರ ಮಟ್ಟಿಗೆ ಬಂದು ನಿಂತಿದೆ. ತಮಿಳುನಾಡಿನ 18 ವರ್ಷದ ಗುಕೇಶ್ ಎಂಬ ಯುವಕ ವಿಶ್ವ ಚೆಸ್ ಚಾಂಪಿಯನ್ಶಿಪ್ ಆಗಿ ದೇಶಕ್ಕೆ ಬಂದಾಗ ಅವನನ್ನ ಸ್ವಾಗತಿಸಲು ವಿಮಾನ ನಿಲ್ದಾಣದಲ್ಲಿ ಕೆಲವೇ ಕೆಲವು ಸಾವಿರದಷ್ಟು ಜನ ಸೇರಿದ್ದರು. ಇದು ನಾವುಗಳು ಕ್ರೀಡೆಗೆ ಬೆಂಬಲಿಸುವ ರೀತಿ. ಆದರೆ ಒಂದು ಮಧ್ಯದ ಕಂಪನಿಯನ್ನು ಪ್ರತಿನಿಧಿಸುವ ತಂಡವನ್ನು ಸ್ವಾಗತಿಸಲು ಇಡೀ ಆಡಳಿತ ಯಂತ್ರವೇ ಅಲ್ಲಿ ಹೋಗಿತ್ತು ಎಂಬುದು ಇವರು ಆಡಳಿತ ನಡೆಸುವ ವೈಖರಿಗೆ ಸಾಕ್ಷಿಯಾಗಿತ್ತು.ಆಳುವವರ ವಿವೇಚನಾ ರಹಿತ ಕ್ರಮದಿಂದ ಸೂಕ್ತ ವ್ಯವಸ್ಥೆ ಇಲ್ಲದ ಕಾರಣದಿಂದ ಅತಿಯಾದ ಅಂದಾಭಿಮಾನದಿಂದ ಒಟ್ಟು 11 ಜನ ಪ್ರಾಣವನ್ನ ಕಳೆದುಕೊಳ್ಳುವಂತಾಯಿತು. ಎತ್ತ ಸಾಗುತ್ತಿದೆ ನಮ್ಮ ಯುವ ಸಮುದಾಯ ಕ್ರಿಕೆಟ್ ಎಂಬ ಆಫೀಮು  ಬಾಲಕರಿಂದ ಹಿಡಿದು ವೃದ್ಧರವರೆಗೂ ಹಿಡಿದಿದೆ. ಈ ಕ್ರಿಕೆಟ್ ಹುಚ್ಚಿನ ಹೆಸರಲ್ಲಿ ಒಂದಿಷ್ಟು ಮತಗಳನ್ನು ಪಡೆದುಕೊಳ್ಳಬೇಕು ಎನ್ನುವ ದುರಾಸೆ ಈ ರಾಜಕಾರಣಿಗಳದ್ದು. ಇಂದು ಈ ದೇಶದಲ್ಲಿ ಕ್ರಿಕೆಟ್ ಬಿಟ್ಟರೆ ಬೇರೆ ಯಾವುದೇ ಕ್ರೀಡೆಗಳೇ ಇಲ್ಲ ಎಂಬ ವಾತಾವರಣ ಸೃಷ್ಟಿಯಾಗಿದೆ. ಇದೇ ಕಾರಣಕ್ಕೆ ನಾವುಗಳು ಒಲಂಪಿಕ್ಸ್ ಪದಕ ಪಟ್ಟಿಯಲ್ಲಿ ಯಾವಾಗಲೂ ಕಡೆಯ ಸಾಲುಗಳಲ್ಲಿ ಇರುತ್ತೇವೆ ಎಂಬುದು ವಾಸ್ತವ. ಏನಾದರೂ ಕ್ರಿಕೆಟ್ ಮಿಲ್ನ ಅತಿಯಾದ ಅಂದಾಭಿಮಾನ ಕಡಿಮೆಯಾಗಲಿ ಬೇರೆ ಕ್ರೀಡೆಗಳಿಗೂ ಪ್ರೋತ್ಸಾಹ ದೊರೆಯಲಿ. ಸರ್ಕಾರ ಕೂಡ ಕಣ್ಣು ಬಿಟ್ಟು ಇತರೆ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಲಿ ಮಡಿದವರ ಆತ್ಮಕ್ಕೆ ಶಾಂತಿ ಸಿಗಲಿ

ವಿಶೇಷ ಲೇಖನ :- ಚೇತನ್ ಗೌಡ,

Leave a Reply

Your email address will not be published. Required fields are marked *