“ಲಾರಿಯಲ್ಲಿ ಸಿಲುಕಿರುವ ವ್ಯಕ್ತಿ ರಕ್ಷಣೆ “.
ಅಥಣಿ ತಾಲೂಕಿನ ಬಡಚಿ ಗ್ರಾಮದಲ್ಲಿ ಹೇವೇ ಟೂಲ್ ನಾಕಾದ ಪಕ್ಕದಲ್ಲಿ ಲಾರಿಯಲ್ಲಿ ಮಣ್ಣು ಸಾಗಿಸುವ ಸಂದರ್ಬದಲ್ಲಿ. ಮುಂಜಾವಿನಲ್ಲಿ ಆಕಸ್ಮಿಕವಾಗಿ ಲಾರಿ ಬಿದ್ದಿದ್ದು,ಸದರಿ ಸ್ಥಳೀಯ ನಿವಾಸಿಗಳು ಘಟನೆಯ ವಿಷಯವನ್ನು ಅಥಣಿ ಅಗ್ನಿಶಾಮಕ ಠಾಣೆ ದೂರವಾಣಿ ಕರೆ ಮಾಡಿ ತಿಳಿಸಿದರು, ಕರೆ ಬಂದ ತಕ್ಷಣ ಜಲವಾಹನದೊಂದಿಗೆ ಅಗ್ನಿಶಾಮಕ ತಂಡ ಸ್ಥಳಕ್ಕೆ ದೌಡಾಯಿಸಿ ಕಾರ್ಯ ಪ್ರವೃತ್ತರಾಗಿ ಸುಮಾರು ಸುಮಾರು 01:50 ಒಂದು ಘಂಟೆ ಐವತ್ತು ನಿಮಿಷಗಳ ಕಾಲ ಶ್ರಮವಹಿಸಿ ಸಿಬ್ಬಂದಿಯವರುಗಳು ಪ್ರಾಣ ರಕ್ಷಣೆಗಾಗಿ ಕೂಗುತ್ತಿದ್ದ **.ವಿಶ್ವನಾಥ ಬಿದರಕುಂದಿ ವಯಸು(27) ಸಾ// ಸಿಂದಗಿ ಎ0ಬ ವ್ಯಕ್ತಿಯನ್ನು ಜೀವಂತವಾಗಿ ಅಗ್ನಿಶಾಮಕ ಇಲಾಖೆಯ ತಂಡ ರಕ್ಷಣೆ ಮಾಡಿರುತ್ತಾರೆ. ಈ ಸಮಯ ಪ್ರಜ್ಞೆ ಕಾರ್ಯವನ್ನು ವೀಕ್ಷಿಸಿದ ಬಡಚಿ ಗ್ರಾಮದ ಸ್ಥಳೀಯ ನಿವಾಸಿಗಳು ಅಗ್ನಿಶಾಮಕ ತಂಡದ ಕಾರ್ಯದಕ್ಷತೆಯನ್ನು ಮೆಚ್ಚಿ ಶ್ಲಾಘಿಸಿ ಹಾಗೂ ಹಸ್ತಲಾಗವ ಮಾಡಿ ವ್ಯಕ್ತಿಯ ಪ್ರಾಣ ರಕ್ಷಣೆ ಮಾಡಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದರು.
ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಮಲ್ಲಿಕಜಾನ. ಜಮಾದಾರ ರವರ ನೇತ್ರತ್ವದಲ್ಲಿ , ಸುಭಾನ ,ಫೀರಜಾದೆ
ಮಲ್ಲನಗೌಡ ನಾಯ್ಕ , ಕಲ್ಮೇಶ್ ಚಿಮ್ಮಡ , ಸಂತೋಷ್ ಚೌಗಲಾ, ಕರೆಪ್ಪ ರಬಕವಿ ಭಾಗವಹಿಸಿದ್ದರು.🙏