ನಾಡಿನ ಸಮಸ್ತ ಜನತೆಗೆ 💐🙏ಬೌದ್ಧ ಪೂರ್ಣಿಮೆ🙏💐 ಯ ಹಾರ್ದಿಕ ಶುಭಾಶಯಗಳು.

Spread the love

💐🙏ಬೌದ್ಧ ಪೂರ್ಣಿಮೆ🙏💐

ಆಕಾಶದಿ ಅಮವಾಸೆಯ

ಕಾರ್ಗತ್ತಲೆಯ ಕಳೆದು ಬಂದ

ಹುಣ್ಣಿಮೆಯ ಚಂದಿರನಂತೆ..

ಅಂಧಕಾರದಲಿರುವ ಜಗಕೆ

ಬೆಳಕ ನೀಡಲು ಬಂದ ಈ                  ನಮ್ಮ ಬಾನ ಸೂರ್ಯ ಬುದ್ಧ.

 

ಅರಮನೆಯ ರಾಜ ವೈಭವದ ಭೋಗವಿಲಾಸ ಜೀವನ ತಳ್ಳಿ

ಹೊರನಡೆದು ತಾ ಬಂದ…

ರೋಗಿ-ವೃದ್ಧ-ಸಾವಿನ ಹೆಣವ

ನೋಡಿ ಜೀವನದೀ ದಿಗಿಲೆದ್ದ

ಇವಕೆ ಉತ್ತರ ಹುಡುಕಲು               ಬಂದ ಈ ನಮ್ಮ ಬುದ್ಧ.

 

ಜಡವಾದ ಭುವಿಯಲಿ ಸಸಿ

ಉದಯಿಸಿ ಬಂದಂತೆ

ಜಿಡ್ಡುಗಟ್ಟಿದ ಸಮಾಜದಲಿ

ನವಚೈತನ್ಯವ ತುಂಬಿದ…

ಜೀವನದಿ ಬೆಂದು ಬಸವಳಿದ

ಜನಕೆ ದಿಕ್ಕಾಗಿ ಬಂದ ಈ ಬುದ್ಧ.

ದೇವರು-ಆತ್ಮ,ಜಾತಿ-ಮತ

ವರ್ಗ-ವರ್ಣ,ಬಡವ-ಧನಿಕ

ಇವುಗಳೆಲ್ಲ ತಿರಸ್ಕರಿಸಿದ…

ಜ್ಞಾನ-ಶೀಲ-ಕರುಣೆ ಆಧರಿಸಿ

ನಾಡಿನಗಲ ಪುರಸ್ಕರಿಸಿದ.

 

ಆಸೆಯೇ ದುಃಖಕ್ಕೆ ಮೂಲ

ಕಾರಣ ಎಂಬ ಸತ್ಯ ಅರುಹಿದ

ಅಷ್ಟಾಂಗ ಮಾರ್ಗಗಳೆಂಬ

ನೀತಿ ತತ್ತ್ವ ಸಾರಿ ಹೇಳಿ

ಜಗಕ್ಕೆಲ್ಲ ಜ್ಯೋತಿಯಾದ ಈ ಪೂರ್ಣವತಾರಿ ಬುದ್ಧ.

🙏ಬುದ್ಧ ಪೂರ್ಣಿಮೆಯ

ಹಾರ್ಧಿಕ ಶುಭಾಶಯಗಳು🙏

 

ಸೋಮನಾಥ.ಡಿ.

ಪ್ರಾಂಶುಪಾಲರು..✍🏻

Leave a Reply

Your email address will not be published. Required fields are marked *