ಯಾಧವ ಸಮಾಜದವತಿಯಿಂದ ಹಾಲುಗಂಬ ಏರುವ ಕಾರ್ಯಕ್ರವು ಅದ್ದೂರಿಯಾಗಿ ಜರುಗಿತು.

Spread the love

ಯಾಧವ ಸಮಾಜದವತಿಯಿಂದ ಹಾಲುಗಂಬ ಏರುವ ಕಾರ್ಯಕ್ರವು ಅದ್ದೂರಿಯಾಗಿ ಜರುಗಿತು.

 

ಕೊಪ್ಪಳ ಜಿಲ್ಲೆಯಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿಂದು ದಸರಾ ಹಬ್ಬದ ನಿಮಿತ್ಯ ಪ್ರತಿ ವರ್ಷದಂತೆ ನಡೆಯುವ ಹಾಲುಗಂಬ ಏರುವ ಕಾರ್ಯಕ್ರಮವು ಯಾದವ್ ಸಮಾಜದವತಿಯಿಂದ ಈ ವರ್ಷವು ಸಹ ಅದ್ದೂರಿಯಾಗಿ ಜರುಗಿತು. ತಾವರಗೇರಾ ಪಟ್ಟಣದ ವ್ಯಾಪ್ತಿಗೆ ಬರುವ ಯಾದವ್ ಸಮಾಜದ ಯುವಕರು ಪ್ರತಿ ಹಳ್ಳಿ ಹಳ್ಳಿಯಿಂದ ಯುವಕರು ಈ ಹಾಲುಗಂಬ ಏರುವ ಕಾರ್ಯಕ್ರಮದಲ್ಲಿ ಪಾಲುಗೊಂಡು ಸತತ ಎರಡು/ಮೂರು ಗಂಟೆಗಳ ಕಾಲ ಹಾಲುಗಂಬ ಏರುವ ಸ್ಪರ್ಧೆಯಲ್ಲಿ ನಿರತರಾದರು. ಈ ಹಾಲುಗಂಬ ಏರುವ ಸ್ಪರ್ದೇ ಕಾರ್ಯಕ್ರಮ ನೋಡಲು ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸಾಗರವೆ ಹರಿದು ಬಂದಿತ್ತು. ಕೆಲವು ಯುವಕರು ಹಾಲುಗಂಬ ಏರುವಾಗ ಹರಸಹಾಸ ಪಟ್ಟರು. ಕೊನೇ/ಕೋನೆಯವರೆಗೂ ತಲುಪಿ, ನಿರಾಶೆಯಿಂದ ಜಾರಿ (ಹಿಂದಕ್ಕೆ) ಬಂದರು, ತದ ನಂತರ ಹರ ಸಹಸದಿಂದ ಕೋನೆಗೆ ಯಮನೂರಪ್ಪ ತಂ// ಹಿರೇಮುದಕಪ್ಪ ಪರಶುರಾಮ ಕೇರೆ ಊರಿನವರು ಹಾಲುಗಂಬ ಏರುವ ಸ್ಪರ್ಧೆಯಲ್ಲಿ ವಿಜೇತರಾದರು. ತಾವರಗೇರಾ ಪಟ್ಟಣದ ಊರಿನ ಸಾರ್ವಜನಿಕರು ಹಾಗೂ ಸುತ್ತಮುತ್ತಲಿನ ಹಳ್ಳಿ ಜನರ ಸೋಗಡು ಕಣ್ಣುತುಂಬಿಕೊಂಡಿತ್ತು. ಈ ಹಾಲುಗಂಬ ಏರುವ ಸ್ಪರ್ದೇಗೆ ವಿಜೇತರಾದವರಿಗೆ 11 ತೊಲೆಯ ಬೆಳ್ಳಿ ಕಡಗವನ್ನು ಬಹುಮಾನವಾಗಿ ಸ್ವೀಕರಿಸಿದರು. ಜನಪ್ರಿಯ ಶಾಸಕರಾದ ದೊಡ್ಡನಗೌಡ ಎಲ್ ಪಾಟೀಲ್ ಇವರು ಕೋಡುಗೆಯಾಗಿ ನೀಡಿದರು. ಒಟ್ಟಿನಲ್ಲಿ ಈ ಹಾಲುಗಂಬ ಏರುವ ಸ್ಪರ್ದೆಯು ನೋಡುಗರ ಮನದಲ್ಲಿ ಉತ್ಸಹವು ತುಂಬಿತ್ತು. ಪ್ರತಿ ವರ್ಷದಂತೆ ಈ ವರ್ಷವು ಸಹ ಸಂತೋಷದಿಂದ ಈ ಕಾರ್ಯಾಕ್ರಮದ ನಿಮಿತ್ಯ ತಾಯಿ ಚಾಮುಂಡೇಶ್ವರಿ ದೇವಿಯನ್ನು ಆರ್ಶಿವಾದದಿಂದ ಈ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು.

ವರದಿ-ಉಪಳೇಶ ವಿ.ನಾರಿನಾಳ.

Leave a Reply

Your email address will not be published. Required fields are marked *