ಸಮಾನತೆ ಸಾರಿದ ಮನುಕುಲದ ಶ್ರೇಷ್ಠ ಸಂತ ಬಸವಣ್ಣ.

Spread the love

ಸಮಾನತೆ ಸಾರಿದ ಮನುಕುಲದ ಶ್ರೇಷ್ಠ ಸಂತ ಬಸವಣ್ಣ.

ಸಮಾನತೆ, ಸಹೋದರತ್ವ, ಸಹಬಾಳ್ವೆ, ಸೌಹಾರ್ದತೆ,ಮಾನವೀಯತೆ, ಮೌಲ್ಯಾಧಾರಿತ ಸಿದ್ದಾಂತವನ್ನು ಜಾಗತಿಕ ಮಟ್ಟದಲ್ಲಿ ಸಾರಿದ ಮನುಕುಲದ ಶ್ರೇಷ್ಠ ಆಧ್ಯಾತ್ಮಿಕ ಯುಗಪುರುಷ, ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ಜಗತ್ತಿನ ಪ್ರಪ್ರಥಮ ಪ್ರವಾದಿ,ಮಹಾಸಂತ ಬಸವಣ್ಣನವರು ಎಂದು ಶರಣ ಚಂದ್ರಶೇಖರ್ ತಂಗಾ ನುಡಿದರು. ನಗರದ ಶರಣ ಸಂಗಮೇಶ ಎನ್ ಜವಾದಿ ಯವರ ನಿವಾಸದಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಮತ್ತು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡ 891ನೇ ಬಸವ ಜಯಂತಿ ಆಚರಣೆ ಅಂಗವಾಗಿ ಉಪನ್ಯಾಸ ನೀಡಿ ಮಾತನಾಡಿದ ಅವರು ಕಾಯಕ, ದಾಸೋಹ, ಸಮಾನತೆ, ಅಧ್ಯಾತ್ಮ ಹೀಗೆ ಸಮಗ್ರ ಕ್ರಾಂತಿ ಮಾಡಿದ ನಮ್ಮ ನಾಡಿನ ನಮ್ಮ ಹೆಮ್ಮೆಯ ಸಾಂಸ್ಕೃತಿಕ ನಾಯಕ ಬಸವಣ್ಣನವರು. ಬಸವಣ್ಣನವರ ಜಯಂತಿಯ ಸಂದರ್ಭದಲ್ಲಿ ಅವರಿಗೆ ಭಕ್ತಿಯ  ನಮನಗಳು ಸಲ್ಲಿಸುತ್ತೇವೆ ಎಂದರು. ಬಸವಣ್ಣನವರ ಭಾವಚಿತ್ರಕ್ಕೆ ಕು. ಶೌರ್ಯ ಹಾಗೂ ಕು. ಶ್ರಾವ್ಯ ಪೂಜೆ  ನೆರವೇರಿಸಿದರು. ಅಧ್ಯಕ್ಷತೆಯನ್ನು ಶರಣ ಸಂಗಮೇಶ ಎನ್ ಜವಾದಿ ವಹಿಸಿದ್ದರು. ಸಮಾರಂಭದಲ್ಲಿ  ಮನೋಹರ್ ಜಕ್ಕಾ, ಮನೋಹರ್ ಮೆಧಾ, ಭೀಮಶೆಟ್ಟಿ ವಡ್ಡನಕೇರಾ, ರವಿ ನಿಂಗಣ್ಣಿ, ಚನ್ನವೀರ ಲಾತೂರೆ, ಬಸವರಾಜ ಕಲ್ಲೂರ, ಬಸವರಾಜ ಪಂಗರಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಿಶೇಷ ವರದಿ :- ಸಂಗಮೇಶ ಎನ್ ಜವಾದಿ

Leave a Reply

Your email address will not be published. Required fields are marked *