ಮನುಷ್ಯನು ಜಾತಿ.ಮತ.ಪಂಥಗಳನ್ನು ಮೀರಿ ಬೆಳೆದಾಗ ಮಾತ್ರ ದೇಶ ಉಳಿಯಲಿಕ್ಕೆ ಸಾಧ್ಯ – ಅಲ್ಲಮಪ್ರಭು ಬೆಟ್ಟದೂರು.

Spread the love

ಕೊಪ್ಪಳ : ಮನುಷ್ಯನು ಜಾತಿ.ಮತ.ಪಂಥಗಳನ್ನು ಮೀರಿ ಬೆಳೆದಾಗ ಮಾತ್ರ ದೇಶ ಉಳಿಯಲಿಕ್ಕೆ ಸಾಧ್ಯ – ಅಲ್ಲಮಪ್ರಭು ಬೆಟ್ಟದೂರು ಹೇಳಿದರು.

ರಾಜ್ಯದ ಸಂಘಟನೆಗಳು. ಸಮಾನಮನಸ್ಕಾರ ಸಂಘಟನೆಗಳ ಹಾಗೂ ಜಾತ್ಯತೀತ ಸಂಘಟನೆಗಳು  ಮಹಾತ್ಮ ಗಾಂಧೀಜಿಯವರ ಹುತಾತ್ಮ ದಿನವನ್ನು ಸೌಹಾರ್ದತಾ ದಿನವಾಗಿ ರಾಜ್ಯಾದಾದ್ಯಂತ ಆಚರಿಸುವಂತೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಮಂಗಳವಾರ ಕೊಪ್ಪಳ ನಗರದ

ಅಶೋಕ ವೃತ್ತದ ಬಳಿ ಸೇರಿದ ಪ್ರಗತಿಪರ ಸಂಘಟನೆಗಳು ಹಾಗೂ ಕಾರ್ಯಕರ್ತರು ರಾಜ್ಯದಲ್ಲಿ ಅಶಾಂತಿಯನ್ನು ಸೃಷ್ಟಿಸುವ ಕೋಮುವಾದಿ ಶಕ್ತಿಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತ ಸೌಹಾರ್ದತಾ ಮಾನವ ಸರಪಳಿ ರಚಿಸಿದರು.ಇದೇ ಸಂದರ್ಭದಲ್ಲಿ ಜನತೆಯನ್ನು ಉದ್ದೇಶಿಸಿ ಬಂಡಾಯ ಸಾಹಿತ್ಯ ಸಂಘಟನೆಯ ಅಲ್ಲಮಪ್ರಭು ಬೆಟ್ಟದೂರು ಅವರು ಮುಂದುವರೆದು ಮಾತನಾಡಿ ಅಂದು ಮಹಾತ್ಮ ಗಾಂಧೀಜಿಯವರನ್ನು ಹತ್ಯೆಗೈದ ಕೋಮುವಾದಿ ಶಕ್ತಿಗಳು ವಿಚಾರವಂತರನ್ನು ಕೊಲ್ಲುತ್ತಿದ್ದಾರೆ. ಗೌರಿ. ಕಲ್ಬುರ್ಗಿಯವರು. ಪಾನ್ಸರೆ ಮುಂತಾದ ವಿಚಾರವಾದಿಗಳನ್ನು ಹತ್ಯೆ ಮಾಡಿರುವ ಕೋಮುವಾದಿಗಳು ರಾಜ್ಯದಲ್ಲಿ ಅನಗತ್ಯ ಸಮಸ್ಯೆಗಳನ್ನು ಹುಟ್ಟು ಹಾಕುತ್ತಿದ್ದಾರೆ. ನಾವು ಜಾತಿ. ಮತ. ಪಂಥಗಳನ್ನು ಮೀರಿ ಬೆಳೆಯಬೇಕಾಗಿದೆ. ನಾವೆಲ್ಲರೂ ಒಗ್ಗಟ್ಟಾದಾಗ ಮಾತ್ರ ದೇಶವನ್ನು ಉಳಿಸಲಿಕ್ಕೆ ಸಾಧ್ಯ. ಇದರ ಜೊತೆಗೆ ಡಾ: ಬಿ.ಆರ್.ಅಂಬೇಡ್ಕರ್ ಅವರು ಬರೆದಂತಹ ಸಂವಿಧಾನವನ್ನು ಸಹ ನಾವು ರಕ್ಷಿಸಬೇಕಾಗಿದೆ. ಸಂವಿಧಾನವನ್ನು ನಾಶ ಮಾಡಲಿಕ್ಕೆ ಬಂದಿದ್ದೇವೆ ಎಂದು ಬಿಜೆಪಿಯವರು ಹೇಳಿರುವುದು ಸ್ಪಷ್ಟವಿದೆ. ಮುಂಬರುವ ದಿನಗಳಲ್ಲಿ ನಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ಮರೆತು ಕೋಮುವಾದಿಗಳನ್ನು ಮಟ್ಟ ಹಾಕಲು ನಾವುಗಳೆಲ್ಲ ಸಂಘಟಿತ ಪ್ರಯತ್ನವನ್ನು ಮಾಡಬೇಕಾಗಿದೆ ಎಂದು ಹೇಳಿದರು.

ಮಾನವ ಸರಪಳಿ ಕಾರ್ಯಕ್ರಮ ಮುಕ್ತಾಯದ ನಂತರ ಸಂಘಟನೆಗಳ ಮುಖಂಡರು ಗಾಂಧಿ ವೃತಕ್ಕೆ ತೆರಳಿ ಗಾಂಧಿ ಪ್ರತಿಮೆಗೆ ಹೂವಿನ ಹಾರ ಹಾಕುವ ಮೂಲಕ ಹುತಾತ್ಮ ಗಾಂಧೀಜಿಯವರ ಪರವಾಗಿ ಘೋಷಣೆಗಳನ್ನು ಕೂಗಿದರು.

ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಬಸವರಾಜ್ ಶೀಲವಂತರ್. ಮಹಾಂತೇಶ್ ಕೋತಬಾಳ.ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್. ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಸಂಘಟನಾ ಸಂಚಾಲಕ ತುಕಾರಾಮ್ ಬಿ.ಪಾತ್ರೋಟಿ. ಮರಿಯಮ್ಮ ದೇವಿ ಕಟ್ಟಡ ಕಾರ್ಮಿಕರ ಮತ್ತು ಇತರೆ ಕಾರ್ಮಿಕರ ಹಿತರಕ್ಷಣಾ ಸಂಘ ರಿ. (ಎಐಟಿಯುಸಿ ಸಂಯೋಜಿತ) ಅಧ್ಯಕ್ಷ ಮೌಲಾ ಸಾಬ್ ಕಪಾಲಿ.ಗೈಬು ಸಾಬ್ ಮಾಳೆಕೊಪ್ಪ. ಗಾಳೆಪ್ಪ ಮುಂಗೋಲಿ.ಶಿವಪ್ಪ ಹಡಪದ್. ಸಿಐಟಿಯು ಜಿಲ್ಲಾ ಮುಖಂಡ ಖಾಸೀಮ್ ಸರ್ದಾರ್. ಜಿ.ನಾಗರಾಜ.ಸುಂಕಪ್ಪ ಗದಗ್. ಹನುಮೇಶ ಕಲ್ಮಂಗಿ. ಭಾಸ್ಕರ್ ರೆಡ್ಡಿ. ಮಹೆಬೂಬ್ ದಫೇದಾರ್.ಗೌಸ್ ನದಾಫ್. ಬಸವರಾಜ್ ಕಂಟಿ. ಮಹೆಬೂಬ್ ಮುಲ್ಲಾ.ಶೇಷ್ಕಾವಲಿ.ಕುಮಾರ್ ಹೊಸ ಕನಕಪೂರ. ನಿಂಗು ಬೆಣಕಲ್. ಸಂಜಯ್ ದಾಸ್ ಕೌಜಗೇರಿ.ಸಿದ್ದು ಹಡಪದ್. ಎಂ.ಕೆ.ಸಾಹೇಬ್. ಅಭಿ ಗೌಡ. ಸೈಯ್ಯದ್ ನಾಸೀರ್ ಕಂಠಿ. ಕೆ.ಬಿ.ಗೋನಾಳ.ಶರಣು ಗಡ್ಡಿ. ಗವಿಸಿದ್ದಪ್ಪ ಹಲಗಿ ಕುಣಿಕೇರಿ. ಭಾಗ್ಯನಗರ ಬಳಿಯ ನವ ನಗರದ ಇರುವಾತನು ಚರ್ಚಿನ ಫಾದರ್ ಚನ್ನಬಸಪ್ಪ ಅಪ್ಪಣ್ಣವರ್ ಮುಂತಾದವರು ಭಾಗವಹಿಸಿದ್ದರು.

ವಿಶೇಷ ವರದಿಗಾರರು:-ಎಸ್.ಎ.ಗಫಾರ್.

Leave a Reply

Your email address will not be published. Required fields are marked *