ತಾವರಗೇರಾ ಪಟ್ಟಣದ ವಾಲ್ಮೀಕಿ ಸಮಾಜದ ಪದಾಧಿಕಾರಿಗಳ ಆಯ್ಕೆ.

Spread the love

ತಾವರಗೇರಾ ಪಟ್ಟಣದ ವಾಲ್ಮೀಕಿ ಸಮಾಜದ ಪದಾಧಿಕಾರಿಗಳ ಆಯ್ಕೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು  ಅದ್ದೂರಿಯಾಗಿ ಆಚರಿಸಿದ ನಂತರ. ವಾಲ್ಮೀಕಿ ಸಮಾಜದವತಿಯಿಂದ ಪದಾಧಿಕಾರಿಗಳ ಆಯ್ಕೆಯು ಜರುಗಿತು. ಈ ಪದಾಧಿಕಾರಿಗಳ ಆಯ್ಕೆಯಲ್ಲಿ ಮೊದಲಿಗೆ ಶ್ರೀ ಯಮನೂರಪ್ಪ ಬಿಳೆಗುಡ್ಡ ಇವರನ್ನು ಸರ್ವ ಪದಾಧಿಕಾರಿಗಳ ಆಪೇಕ್ಷದೊಂದಿಗೆ ಇವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ತದ ನಂತರ  ವೆಂಕಟೇಶ್ ಗೋತಗಿ, ಮತ್ತು  ಅಂಬಣ್ಣ ಅಂಚಿ, ಜಂಟಿಯಾಗಿ ಇವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.  ಸಂತೋಷ ಬಿಳೆಗುಡ್ಡ ಮತ್ತು ಶಾಮೂರ್ತಿ ಅಂಚಿ, ಇವರುಗಳನ್ನು ಕಾರ್ಯದರ್ಶಿಗಳನ್ನಾಗಿ ಆಯ್ಕೆ ಮಾಡಿದ ನಂತರ, ರಾಘವೇಂದ್ರ ನಾಯಕ್  ಇವರನ್ನು ಖಜಾಂಚಿಯನ್ನಾಗಿ ಆಯ್ಕೆ ಮಾಡಿಸಿ, ಸಮಾಜದ ಜವಬ್ದಾರಿಯನ್ನ ವಹಿಸಲಾಯಿತು. ಒಟ್ಟಿನಲ್ಲಿ ವಾಲ್ಮೀಕಿ ಸಮಾಜದ ಅಭಿವೃದ್ದಿದತ್ತ ಸಾಗಲೆಂದು ಶುಭ ಹಾರೈಸಲಾಯಿತು..

ವರದಿ-ಉಪಳೇಶ ವಿ.ನಾರಿನಾಳ.

Leave a Reply

Your email address will not be published. Required fields are marked *