ಗರ್ಜನಾಳ ಗ್ರಾಮಸ್ಥರಿಂದ ಹಾಗೂ ನಗರ ಮತ್ತು ಗ್ರಾಮ ಸಬಲೀಕರಣ ಸಮಿತಿ (ರಿ) ವತಿಯಿಂದ ಅಕ್ರಮ ಮದ್ಯ ಮಾರಾಟ ತಡೆಯಲು ತಾವರಗೇರಾ ಪಟ್ಟಣದ ಪಿ.ಎಸ್.ಐ. (ನಾಗರಾಜ ಕೊಟಗಿಯವರಿಗೆ ಮನವಿ ಪತ್ರ.

Spread the love

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಬರುವ ಗರ್ಜನಾಳ ಗ್ರಾಮದ ಕೇವಲ ಒಂದು ಸಮಸ್ಯ ಅಲ್ಲ ಇದು. ಕರ್ನಾಟಕ ರಾಜ್ಯಾದ್ಯಾಂತ ಇರುವ ಗಂಭೀರ ಸಮಸ್ಯವಿದು, ಸದ್ಯ ಗರ್ಜನಾಳ ಗ್ರಾಮದವರು ಒಗ್ಗಟ್ಟಾಗಿ ಈ ಕುಡಿತದ ವಿರುದ್ದ ದಂಗೆ ಏರಿರುವುದು ಸಂತಸದ ವಿಷೆಯವಾಗಿದೆ. ಈ ಕೊರೊನಾದ ಮೊದಲನೆ ಅಲೆ ಮತ್ತು ಎರಡನೆಯ ಅಲೆಗೆ ಜನರು ತತ್ತರಿಸಿ ಹೋಗಿದ್ದಾರೆ. ಇಂತಹ ಕಠೀಣ ಸಂದರ್ಭದಲ್ಲಿ ನಿರ್ಗತಿಕರ ಕುಟುಂಬಗಳು ಜೀವನ ಸಾಗಿಸುವುದೇ ಒಂದು ದೊಡ್ಡ ಚಾಲೆಂಜ್ ಆಗಿ ಉಳಿದು ಬಿಟ್ಟಿದೆ. ಸದ್ಯ ಗರ್ಜನಾಳ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಸುಮಾರು 5-6 ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ, ಈ ವಿಷೆಯದ ಅಂಗವಾಗಿ ಸಾಕಷ್ಟು ಬಾರಿ ಕಿಲ್ಲಾರಹಟ್ಟಿ ಗ್ರಾಮ ಪಂಚಾಯತಿಯ ಅಭಿವೃದ್ದಿ ಅಧಿಕಾರಿಗಳ ಗಮನಕ್ಕೆ ತಂದರು, ಯಾವುದೆ ಕ್ರಮ ಕೈಗೊಂಡಿಲ್ಲ, ದಿನಸಿ ಅಂಗಡಿ, ಮುಗ್ಗಟ್ಟುಗಳಲ್ಲಿ ಅಕ್ರಮ ಮದ್ಯ ಮಾರಾಟದಿಂದ ಗ್ರಾಮದ ವೃದ್ದರು, ಯುವಕರು ಈ ಮದ್ಯ ವ್ಯಸನಕ್ಕೆ ಅಂಟಿಕೊಂಡು ತಮ್ಮ ಜೀವನ ಹಾಳು ಮಾಡಿಕೊಳ್ಳುವುದಲ್ಲದೆ ಎಷ್ಟೋ ಕುಟುಂಬಗಳು ಬೀದಿ ಪಾಲಗಾದ್ದಾವೆ. ಪ್ರತಿಯೊಂದು ಹಳ್ಳಿ/ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟದ ಪಿಡುಗು ಇನ್ನು ಜೀವಂತವಾಗಿದೆ, ಕುಡಿತದ ಅಮಲಿಗೆ ಬಲಿಯಾದ ಜೀವ ರಾಶಿಗಳ ಸಂಖ್ಯೆ ಎಷ್ಟೋ? ಜೊತೆಗೆ ಈ ಕುಡಿತದಿಂದ ಬಿದೀಗೆ ಬಿದ್ದ ಕುಟುಂಬಗಳು ಎಷ್ಟೋ? ಹಿಗೇ ಹೇಳುತ್ತ ಹೋದರೆ ಸಾಲದ ದಿನಗಳು, ಆದ್ದರಿಂದ ದಯಾಳುಗಳಾದ ತಾವುಗಳು ಈ ನಮ್ಮ ಮನವಿಯನ್ನು ಗಂಭಿರವಾಗಿ ಪರೀಶಿಲಿಸಿ ಕಡು/ಬಡವರು, ನಿರ್ಗತಿಕರ ಕುಟುಂಬಗಳಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಗರ್ಜನಾಳ ಗ್ರಾಮಸ್ಥರು ಮತ್ತು ನಗರ ಮತ್ತು ಗ್ರಾಮ ಸಬಲೀಕರಣ ಸಮಿತಿ ವತಿಯಿಂದ ತಾವರಗೇರಾ ಪಟ್ಟಣದ ಮಾನ್ಯ ಪಿ.ಎಸ್.ಐ.ಗಳಾದ ನಾಗರಾಜ ಕೊಟಗಿಯವರಿಗೆ ಮನವಿ ಪತ್ರ ಸಲ್ಲಿಸಲಾಯಿತು, ಇದೇ ರೀತಿ ಪ್ರತಿಯೊಂದು ಗ್ರಾಮಗಳಲ್ಲಿ ಈ ಅಕ್ರಮ ಮದ್ಯ ಮಾರಾಟದ ವಿರುದ್ದ ಉಗ್ರ ಹೋರಾಟ ನಡಿಯಲೇ ಬೇಕು, ಅಂದಾಗ ಮಾತ್ರ ತಡೆಗಟ್ಟಲು ಸಾದ್ಯ. ಈ ಸಂದರ್ಬದಲ್ಲಿ ಕಿಲ್ಲಾರಹಟ್ಟಿ ಗ್ರಾಮ ಪಂಚಾಯತ ಮಾಜಿ ಉಪಾಧ್ಯಕ್ಷರಾದ ರಾಘವೇಂದ್ರ ತೆಮ್ಮಿನಾಳ ಮತ್ತು ನಗರ ಮತ್ತು ಗ್ರಾಮ ಸಬಲೀಕರಣದ ರಾಜ್ಯ ಉಪಾಧ್ಯಕ್ಷರಾದ ಹನುಮೇಶ್ ಆರ್.ಜಿ.ಶ್ರೀಯವರು, ಶ್ರೀಮತಿ ಅಂಬಮ್ಮ, ದುರಗಮ್ಮ, ಮರಿಯಮ್ಮ, ನಾಗಮ್ಮ, ಯಲ್ಲಮ್ಮ ರಾಜಾಸಾಬ,ದುರಗಪ್ಪ, ನಾಗರಾಜ, ಹನುಮೇಶ್, ಛತ್ರಪ್ಪ, ಇತರರು, ಪಾಲ್ಗೊಂಡಿದ್ದರು.

ವರದಿ-ಉಪಳೇಶ್ ವಿ.ನಾರಿನಾಳ.

Leave a Reply

Your email address will not be published. Required fields are marked *