ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಅರಳಿದ ಕಮಲ. ವಿಜಯೋತ್ಸವ ಆಚರಿಸಿದ ತಾವರಗೇರ ಪಟ್ಟಣದ ಹೃದಯವಂತನ ಅಭಿಮಾನಿಗಳು.

Spread the love

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಶ್ರೀ ಮಾನ್ಯ ದೊಡ್ಡನಗೌಡ್ರು ಎಚ್ ಪಾಟೀಲರವರು ಕ್ಷೇತ್ರದ ಸಮಸ್ತ ಮತದಾರರ ಆಶೀರ್ವಾದಿಂದ ಆಯ್ಕೆ ಆಗುವ ಮೂಲಕ ಗೆಲುವಿನ ನಗೆ ಬಿರಿದರು. ಕುಷ್ಟಗಿ ಮತ ಕ್ಷೇತ್ರದಲ್ಲಿ ಒಮ್ಮೆ ಗೆದ್ದವರು ಮತ್ತೊಮ್ಮೆ ಗೆದ್ದ ಇತಿಹಾಸ ಇಲ್ಲ….. ಅಂತಹದರಲ್ಲಿ ಈ ಬಾರಿ ಇತಿಹಾಸ ಸೃಷ್ಟಿ ಮಾಡೆ ಮಾಡುತ್ತೇನೆ   ಎಂದು ಹೆಳುತ್ತಿದ್ದ ಅಮರೇಗೌಡ ಪಾಟೀಲ ಬಯ್ಯಾಪುರವರು  ಈ ಬಾರಿ ಸೋಲನ್ನು ಒಪ್ಪಿಕೊಳ್ಳಬೇಕಾಗಿರುವದು ಅನಿವಾರ್ಯವಾಗಿದೆ. ಈ ಬಾರಿ ಚುನಾವಣೆಯಲ್ಲಿ ನಾನಾ.. ನೀನಾ…. ಕದನದಲ್ಲಿ ದೊಡ್ಡನಗೌಡ ಎಚ್ ಪಾಟೀಲ್ ರವರು  ಮತದಾರರ ಆಶೀರ್ವಾದಿಂದ ಮತ್ತೊಮ್ಮೆ ಆಯ್ಕೆ ಆಗುವ ಮೂಲಕ ಜಯಭೇರಿ ಬಾರಿಸಿದರು. ಈ ಜಯಭೇರಿ ವಿಜಯೋತ್ಸವವನ್ನು  ತಾವರಗೇರ ಪಟ್ಟಣದ ಮುಖಂಡರು ಮತ್ತು ಕಾರ್ಯಕರ್ತರು ಸಂತೋಷದಿಂದ ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ತಾವರಗೇರಾ ಪಟ್ಟಣದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ-ಅಮಾಜಪ್ಪ ಜುಮಲಾಪೂರ ಪತ್ರಕರ್ತರು.

Leave a Reply

Your email address will not be published. Required fields are marked *