ಬಸವರಾಜ ರಾಯರೆಡ್ಡಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಕಾರ್ಯಕರ್ತರಿಂದ ವಿಜಯೋತ್ಸವದ ಸಂಭ್ರಮ.

Spread the love

ಬಸವರಾಜ ರಾಯರೆಡ್ಡಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಕಾರ್ಯಕರ್ತರಿಂದ ವಿಜಯೋತ್ಸವದ ಸಂಭ್ರಮ.

ಯಲಬುರ್ಗಾ : ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಬಸವರಾಜ್ ರಾಯರೆಡ್ಡಿ ಅವರು ವಿಜಯ ಸಾಧಿಸಿದ್ದಕ್ಕೆ ತಾಲೂಕಿನ ಮುಧೋಳ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು ಬೆಳಿಗ್ಗೆಯಿಂದಲೇ ಟಿವಿಗಳ ಮುಂದೆ ಮತ್ತು ಅಲ್ಲಲ್ಲಿ ಮೊಬೈಲ್ ಗಳ ಹಿಡಿದುಕೊಂಡು, ಉಸಿರು ಬಿಗಿ ಹಿಡಿದು ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಜಾತಕ ಪಕ್ಷಿಗಳಂತೆ ಆಯಾ ಪಕ್ಷಗಳ ಮುಖಂಡರು ಕಾರ್ಯಕರ್ತರು ಬೆಂಬಲಿಗರು ಅಭಿಮಾನಿಗಳು ಕ್ಷಣ ಗಣನೆಯನ್ನು  ಕಾಯುತ್ತಿದ್ದರು ಮಧ್ಯಾನದ 12 ಗಂಟೆ ಸುಮಾರಿಗೆ ಕಾಂಗ್ರೆಸ್ ಅಭ್ಯರ್ಥಿಯಾದ ಬಸವರಾಜ್ ರಾಯರೆಡ್ಡಿ ಅವರ 10.000 ಮತಗಳ ಅಂತರದಿಂದ ಮುನ್ನಡೆ ಇದ್ದಾಗಲೇ ಕಾಂಗ್ರೆಸ್ ಕಾರ್ಯಕರ್ತರು ಒಂಬತ್ತನೇ  ಸುತ್ತಿನ ವಿಜಯೋತ್ಸವವನ್ನು ಆಚರಿಸಿ ನಂತರ ಗೆಲುವು ಖಚಿತವಾಗುತ್ತಿದ್ದಂತೆ ಪರಸ್ಪರರು ಸಿಹಿ ವಿತರಣೆ ಮಾಡಿಕೊಂಡರು ಬೈಕುಗಳಲ್ಲಿ ಕಾಂಗ್ರೆಸ್ ಪಕ್ಷದ ಧ್ವಜವನ್ನು ಹಿಡಿದು ವಿವಿಧ ಬೀದಿಗಳಲ್ಲಿ ಸಂಚರಿಸಿ ಸಡಗರ ಸಂಭ್ರಮದಿಂದ ಆಚರಿಸಿ ಇದೇ ವೇಳೆ ಮುಧೋಳ ಗ್ರಾಮದ ಕಾಂಗ್ರೆಸ್ ಮುಖಂಡರು ಹೇಮರೆಡ್ಡಿ ರೆಡ್ಡರ. ಚಂದ್ರೋ ದೇಸಾಯಿ ಈಶಪ್ಪ ಜಿವೋಜಿ ಹಸನ್ ಸಾಬ್ ಹಿರೇಮನಿ ವಕೀಲರು ಜನಸಂಗಪ್ಪ ಸಿಳ್ಳಿನ. ಶರಣಪ್ಪ ಹಿರೇಹಾಳ  ಕಳಕಪ್ಪ ಕುರಿ ಮಾಲಕ.ಹುಸೇನಸಾಬ್ ಹಿರೇಮನಿ ಅಂಡಗಿ.ಶರಣಪ್ಪ ಪುರ್ತಗೆರಿ ಖಾದಿರ್ ಬಾಷ ತೋಳಗಲ್ ಇಮಾಮ್ ಮೊತೇಖಾನ್. ಹಾಗೂ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಸದಸ್ಯರು ವಿಜಯೋತ್ಸವದಲ್ಲಿ ಪಾಲ್ಗೊಂಡು ಸಂತಸವನ್ನು ಹಂಚಿಕೊಂಡರು.

ವರದಿ-ಹುಸೇನಬಾಷಾ ಮೊತೇಖಾನ್

Leave a Reply

Your email address will not be published. Required fields are marked *