*ಮಹಿಳೆಯರ ಮತವನ್ನು ಸೆಳೆಯುತ್ತಿರುವ ಆಮ್ ಆದ್ಮಿ ಮಹಿಳಾ ಕಾರ್ಯಕರ್ತರು*

Spread the love

*ಮಹಿಳೆಯರ ಮತವನ್ನು ಸೆಳೆಯುತ್ತಿರುವ ಆಮ್ ಆದ್ಮಿ ಮಹಿಳಾ ಕಾರ್ಯಕರ್ತರು*

ಗಂಗಾವತಿ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಅಭ್ಯರ್ಥಿ ಶರಣಪ್ಪ ಸಜ್ಜೀಹೊಲ ಪರ ಪ್ರಚಾರಕ್ಕೆ ತೊಡಗಿರುವ ಮಹಿಳಾ ಕಾರ್ಯಕರ್ತರು ನಗರದ ಮಹಿಳಾ ಮತಗಳನ್ನು ಸಂಪೂರ್ಣವಾಗಿ ಸೆಳೆಯುತ್ತಿದ್ದಾರೆ. ದೆಹಲಿ ಸರ್ಕಾರದಲ್ಲಿ ಮಹಿಳೆಯರಿಗೆ ದೊರೆಯುತ್ತಿರುವ ಉಚಿತ ಬಸ್ ಪ್ರಯಾಣ,  ಮಾಸಿಕ ರೂಪಾಯಿ 2೦೦೦ ಭತ್ಯೆ, ಮಹಿಳಾ ಸುರಕ್ಷತೆಗಾಗಿ ಬಸ್ಸುಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ, ಮಹಿಳೆಯರ ಕೌಟುಂಬಿಕ ಖರ್ಚನ್ನು ತಗ್ಗಿಸಲು ಮನೆ ಮನೆಗೆ ಉಚಿತ ವಿದ್ಯುತ್, ಉಚಿತ ನೀರು, ಉಚಿತ ವೈದ್ಯಕೀಯ ವ್ಯವಸ್ಥೆ ಹಾಗೂ ಮಕ್ಕಳ ಉಚಿತ ಗುಣಮಟ್ಟದ ಶಿಕ್ಷಣ ಇತ್ಯಾದಿ ಸೌಲಭ್ಯಗಳ ಬಗ್ಗೆ ಮನವೊಲಿಸುತ್ತಿರುವುದರಿಂದ ನಗರದ ಮಹಿಳೆಯರು ಆಮ್ ಆದ್ಮಿ ಪಕ್ಷಕ್ಕೆ ಅಭೂತಪೂರ್ವವಾದ ಬೆಂಬಲ. ವ್ಯಕ್ತಪಡಿಸುತ್ತಿದ್ದಾರೆ. ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡ ಕಾರ್ಯಕರ್ತರಲ್ಲಿ ರೇಣುಕಾ ಬಸವರಾಜ್ ,ಜ್ಯೋತಿ ಲಕ್ಷ್ಮಿ, ಪಲ್ಲವಿ ಸಜ್ಜೆ ಹೊಲ, ಬಸಮ್ಮ, ದ್ರಾಕ್ಷಾಯಿಣಿ, ಶೈಲ ಬಾನು ಇತರರು ಪ್ರಮುಖರಾಗಿದ್ದಾರೆ. ಜೊತೆಗೆ ಹಾಜರಿದ್ದ ಕಾರ್ಯಕರ್ತರಲ್ಲಿ ಭೋಗೇಶ್ ಅನೆಗುಂದಿ, ರವಿ ,ವೆಂಕಟೇಶ್, ವಿರುಪಾಕ್ಷಿ ಸಜ್ಜೆ ಹೊಲ, ಶರಣು ಶೆಟ್ಟರ್ ಪ್ರಮುಖರು.

ವರದಿ-ಉಪ್ಪಳೇಶ ವಿ.ನಾರಿನಾಳ.

Leave a Reply

Your email address will not be published. Required fields are marked *