ಕೂಡ್ಲಿಗಿ:ಅಭಿಮಾನಿಗಳ ಹರ್ಷೋಧ್ಗಾರ,ಸುದೀಪ್(ರೋಡ್ ಷೋ)ಮೌನ ಮೆರವಣಿಗೆ.

Spread the love

ಕೂಡ್ಲಿಗಿ:ಅಭಿಮಾನಿಗಳ ಹರ್ಷೋಧ್ಗಾರ,ಸುದೀಪ್(ರೋಡ್ ಷೋ)ಮೌನ ಮೆರವಣಿಗೆ.

ವಿಜಯನಗರ ಜಿಲ್ಲೆ ಕೂಡ್ಲಿಗಿ: ಪಟ್ಟಣದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಹಾಗೂ ಮುಖಂಡರೊಂದಿಗೆ, ಚಿತ್ರ ನಟ ಕಿಚ್ಚ ಸುದೀಪ್ ತೆರೆದ ವಾಹನದಲ್ಲಿ ಸಂಚರಿಸಿದರು. ಪಟ್ಟಣದ ಶ್ರೀರಾಮಲಿಂಗೇಶ್ವರ ದೇವಸ್ಥಾನದಲ್ಲಿ,ದೇವರ ದರ್ಶನ ಪಡೆದು ಪಕ್ಷದ ಅಭ್ಯರ್ಥಿ ಲೋಕೇಶ ವಿ ನಾಯಕ ಹಾಗೂ ಪಕ್ಷದ ಮುಖಂಡರೊಂದಿಗೆ. ತೆರೆದ ವಾಹನದಲ್ಲಿ ಪಟ್ಟಣದ ಹೊಸಪೇಟೆ ರಸ್ತೆಯ ಮೂಲಕ, ಮದಕರಿ ವೃತ್ತದ ವರೆಗೆ ಅಭಿಮಾನಿಗಳ ಹರ್ಷೋಧ್ಗಾರಗಳೊಂದಿಗೆ ಮೆರವಣಿಗೆಯಲ್ಲಿ  ತೆರಳಿದರು. ನಂತರ ಲೋಕೇಶ ವಿ ನಾಯಕರನ್ನು ತೋರಿಸಿ, ಅಭಿಮಾನಿಗಳತ್ತ ಕೈಮಾಡಿ ನಂತರ ಕೈ ಮುಗಿದರು. ಅವರು ಒಟ್ಟಾರೆ ಎಲ್ಲಿಯೂ ಮಾತನಾಡಲಿಲ್ಲ, ಯಾವುದೇ ರೀತಿ ಭಾಷಣ ಮಾಡಲಿಲ್ಲ ಎಲ್ಲಿಯೂ ತುಟಿ ಪಿಟಿಕ್ ಎನ್ನದೇ ಮೌನವಾಗಿದ್ದರು. ಬಿಜೆಪಿ ಅಭ್ಯರ್ಥಿ ಲೋಕೇಶ ವಿ ನಾಯಕರೊಂದಿಗೆ, ತೆರೆದ ವಾಹನದಲ್ಲಿ ಸುದೀಪ್ ರ ಮೌನ ಮೆರವಣಿಗೆ (ರೋಡ್ ಷೋ) ಜರುಗಿತು. ಅಭ್ಯರ್ಥಿ ಲೋಕೇಶ ವಿ ನಾಯಕ, ಪಕ್ಷದ ಪ್ರಮುಖ ಮುಖಂಡರು, ವಿವಿದ ಪ್ರಮುಖ ಜನಪ್ರತಿನಿಧಿಗಳು ಇದ್ದರು. ಅಸಂಖ್ಯಾತ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ನಾಗರೀಕರು  ಇದ್ದರು. ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶಪ್ಪ ವಿ ಮಲ್ಲಾಪುರ ನಿರ್ಧೇಶನದಲ್ಲಿ, ಸಿಪಿಐ ವಂತ ಅಸೋದೆ ನೇತೃತ್ವದಲ್ಲಿ ಪಿಎಸ್ಐ ಧನುಂಜಯ ಕುಮಾರ. ವಿವಿದ ಪೊಲೀಸ್ ಠಾಣೆಗಳ ಅಧಿಕಾರಿಗಳು, ಮತ್ತು ಸಿಬ್ಬಂದಿಯವರಿಂದ ಬಿಗಿ ಬಂದೋ ಬಸ್ತು ಏರ್ಪಡಿಸಲಾಗಿತ್ತು. ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿದೆಡೆಯಿಂದ, ಸುದೀಪ್ ರೊಡ್ ಷೋನಲ್ಲಿ ಅಸಂಖ್ಯಾತ ಅಭಿಮಾನಿಗಳು ಹರ್ಷೋಧ್ಗಾರ ಮುಗಿಲು ಮುಟ್ಟಿತು.

ವರದಿ- ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Leave a Reply

Your email address will not be published. Required fields are marked *